ಮಂಗಳವಾರ, ಜೂನ್ 17, 2025
HomekarnatakaKarnataka Secretariat Employees : ಸರ್ಕಾರಕ್ಕೆ ಸೆಡ್ಡು ಹೊಡೆದ ಉದ್ಯೋಗಿಗಳು: ಇಂದಿನಿಂದ ಸಚಿವಾಲಯದ ನೌಕರರ ಮುಷ್ಕರ

Karnataka Secretariat Employees : ಸರ್ಕಾರಕ್ಕೆ ಸೆಡ್ಡು ಹೊಡೆದ ಉದ್ಯೋಗಿಗಳು: ಇಂದಿನಿಂದ ಸಚಿವಾಲಯದ ನೌಕರರ ಮುಷ್ಕರ

- Advertisement -

ಬೆಂಗಳೂರು : ರಾಜ್ಯದಲ್ಲಿ ಸದ್ಯ ಸರ್ಕಾರಕ್ಕೆ ಪ್ರತಿಭಟನೆಗಳ ಸವಾಲು ಮುಂದುವರೆದಿದೆ. ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ, ವೇತನಕ್ಕಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಮಧ್ಯೆ ಈಗ ವಿವಿಧ ಬೇಡಿಕೆಗಳ ಈಡೇರಿಕೆಗಳಿಗೆ ಆಗ್ರಹಿಸಿ ಸ್ವತಃ ಕರ್ನಾಟಕ ಸಚಿವಾಲಯದ ನೌಕರರು ಮುಷ್ಕರಕ್ಕೆ (Karnataka Secretariat Employees ) ಮುಂದಾಗಿದ್ದಾರೆ. ಹೀಗಾಗಿ ಇಂದು ನೀವೇನಾದ್ರೂ ಕೆಲಸಕ್ಕಾಗಿ ವಿಧಾನಸೌಧಕ್ಕೆ ಹೋಗ್ತಿದ್ದರೇ ಆ ಕೆಲಸವನ್ನು ಮುಂದೂಡಿಕೆ ಮಾಡೋದೇ ಉತ್ತಮ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ಸರ್ಕಾರ ಸಚಿವಾಲಯ ಬಂದ್ ಗೆ ಕರೆ ನೀಡಿದೆ.

Karnataka Secretariat Employees : ಸಚಿವಾಲಯ ನೌಕರರ ಬೇಡಿಕೆಗಳೇನು ?

  • ಸಚಿವಾಲಯದ ನೌಕರರ ಪ್ರಮುಖ ಬೇಡಿಕೆ ಗಳು ಏನು ಅನ್ನೋದನ್ನು ಗಮನಿಸೋದಾದರೇ,ಸಚಿವಾಲಯದ 542 ಕಿರಿಯ ಸಹಾಯಕರ ಹುದ್ದೆ ಕಡಿತ ಮಾಡುವ ಪ್ರಸ್ತಾವನೆ ಕೈ ಬಿಡುವುದು.
  • ಸಚಿವಾಲಯದಲ್ಲಿ ನಿಯೋಜನೆ/ಅನ್ಯ ಕಾರ್ಯ ನಿಮಿತ್ತ ಕಾರ್ಯ ನಿರ್ವಹಣೆ ಮಾಡುತ್ತಿರುವವರನ್ನು ಮಾತೃ ಇಲಾಖೆಗೆ ವರ್ಗಾಯಿಸುವುದು
  • ಖಾಲಿ ಇರುವ ಗ್ರೂಪ್ ಡಿ ಮತ್ತು ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು
  • ಸಚಿವಾಲಯದ ಎಲ್ಲಾ ಇಲಾಖೆಗಳನ್ನು ವಿಧಾನಸೌಧ,ವಿಕಾಸ ಸೌಧ,ಬಹುಮಹಡಿ ಕಟ್ಟಡಗಳಲ್ಲಿ ಒಂದೆಡೆ ತರುವುದು
  • ಬಹುಮಹಡಿ ಕಟ್ಟಡದ ರಸ್ತೆಯನ್ನು ಸಾರ್ವಜನಿಕ ರಸ್ತೆಯನ್ನಾಗಿ ಮಾಡಿರುವುದನ್ನು ಕೈ ಬಿಡುವುದು.

ಸೇರಿದಂತೆ ಇನ್ನಿತರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ. ಇಂದು ಇಡೀ ದಿನ ಕೆಲಸ ಸ್ಥಗಿತ ಗೊಳಿಸಿ ಪ್ರತಿಭಟನೆ ನಡೆಸಲು ಸಿಬ್ಬಂದಿ ನಿರ್ಧರಿಸಿದ್ದಾರೆ. ಇದರಿಂದ ವಿಧಾನಸೌಧಕ್ಕೆ ಕಾರ್ಯನಿಮಿತ್ತ ಭೇಟಿ ಕೊಡಲಿರುವ ಸಾರ್ವಜನಿರಿಗೆ ಸಮಸ್ಯೆ ಎದುರಾಗಲಿದೆ. ಮೂಲಗಳ ಮಾಹಿತಿ ಪ್ರಕಾರ ಈ ಪ್ರತಿಭಟನೆ ಸೋಮವಾರದವರೆಗೂ ನಡೆಯಲಿದೆ. ಸರ್ಕಾರದ ಕೆಲಸಗಳಿಗಾಗಿ ವಿಧಾನಸೌಧಕ್ಕೆ ಬರಲಿರುವ ಸಾರ್ವಜನಿಕರು ಸೋಮವಾರದವರೆಗೆ ಮುಂದೂಡಿಕೆ ಮಾಡಿಕೊಳ್ಳುವುದು ಒಳಿತು ಎನ್ನಲಾಗ್ತಿದೆ.

ಇನ್ನೊಂದೆಡೆ ಪ್ರತಿಭಟನಾ ನಿರತರಿಗೆ ಸರ್ಕಾರ ಖಡಕ್ ಎಚ್ಚರಿಕೆ ರವಾನಿಸಿದೆ. ಸಚಿವಾಲಯದ ಬಂದ್ ಮಾಡೋದು ಹಾಗೂ ಪ್ರತಿಭಟನೆ ಮಾಡೋದು ಕಾನೂನು ಬಾಹಿರ. ಬಂದ್ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಅಲ್ಲದೇ ಮೇಲಧಿಕಾರಿಗಳ ಪೂರ್ವಾನುಮತಿ ಇಲ್ಲದೇ ಕೆಲಸಕ್ಕೆ ಗೈರು ಹಾಜರಾಗುವಂತಿಲ್ಲ.ಒಂದು ವೇಳೆ ಗೈರು ಹಾಜರಾದರೆ ‘ಲೆಕ್ಕಕ್ಕಿಲ್ಲದ ಅವಧಿ’ ಎಂದು ಪರಿಗಣಿಸಲಾಗುವುದು.ಕೆಲಸಕ್ಕೆ ಹಾಜರಾಗಲು ಇಚ್ಚಿಸುವ ನೌಕರರಿಗೆ ಯಾರೂ ಅಡ್ಡಿ ಪಡಿಸುವಂತಿಲ್ಲ.ಅಡ್ಡಿಪಡಿಸಿದರೆ ಶಿಸ್ತು ಕ್ರಮ ತೆಗೆದು ಕೊಳ್ಳಲಾಗು ತ್ತದೆ ಎಂದು ಎಚ್ಚರಿಸಿದೆ. ಅಲ್ಲದೇ ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : School Textbook : ಅವಧಿಗೂ ಮುನ್ನವೇ ಶಾಲಾರಂಭ : ಪಠ್ಯಪುಸ್ತಕ ಸಿಗದೇ ಶಿಕ್ಷಕರ ಪರದಾಟ

ಇದನ್ನೂ ಓದಿ : Bank Holidays in June 2022 : ಜೂನ್ ತಿಂಗಳಲ್ಲಿಈ ದಿನಗಳಲ್ಲಿ ಬ್ಯಾಂಕ್‌ ಬಂದ್‌

Karnataka Secretariat Employees To Go On Mass Leave

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular