ಬೆಂಗಳೂರು : rakesh tikait : ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆಯು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದಿದೆ. ರಾಜ್ಯದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಬಂದಿರುವ ಕಿಕ್ಬ್ಯಾಂಕ್ ಆರೋಪದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಬಗ್ಗೆ ಸ್ಪಷ್ಟನೆ ನೀಡುವ ಸಲುವಾ್ ರಾಕೇಶ್ ಟಿಕಾಯತ್ ಸುದ್ದಿಗೋಷ್ಟಿ ಕರೆದಿದ್ದರು. ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತರು ಕುಳಿತಿದ್ದ ಆಸನದ ಹಿಂಬಧಿಯಿಂದ ಎದ್ದು ಬಂದ ದುಷ್ಕರ್ಮಿಯು ಚಾನೆಲ್ನ ಮೈಕ್ನಿಂದ ರಾಕೇಶ್ ಟಿಕಾಯಿತ್ ಮೇಲೆ ಹಲ್ಲೆ ಮಾಡಿ ರಾಕೇಶ್ ಹಾಗೂ ಯದುವೀರ್ ಸಿಂಗ್ ಮುಖಕ್ಕೆ ಮಸಿ ಬಳಿದಿದ್ದಾನೆ.
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿರು ಭ್ರಷ್ಟಾಚಾರದ ಆರೋಪದ ಬಗ್ಗೆ ಚರ್ಚೆ ನಡೆಸಲು ರೈತ ಸಂಘದವರು ಕರೆದ ಸಭೆ ಇದಾಗಿತ್ತು. ಈ ಸಭೆಯಲ್ಲಿ ಮೋದಿ ಮೋದಿ ಎಂದು ಘೋಷಣೆ ಕೂಗಿದ ವ್ಯಕ್ತಿಯೊಬ್ಬ ರಾಕೇಶ್ ಟಿಕಾಯತ್ ಮುಖಕ್ಕೆ ಮಸಿ ಬಳಿದು ದಾಂಧಲೆ ಸೃಷ್ಟಿಸಿದ್ದಾನೆ. ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸುತ್ತಿದ್ದಂತೆಯೇ ಸಿಡಿದೆದ್ದ ರೈತ ಮುಖಂಡರು ದುಷ್ಕರ್ಮಿಯನ್ನು ಹಿಡಿದು ಥಳಿಸಿದ್ದಾರೆ.
ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯುದ್ದವೀರ್ ಸಿಂಗ್ ಮೇಲೆ ಮಸಿ ಬಳಿಯಾಗಿದೆ. pic.twitter.com/NtSY4LzcaR
— News Next (@newsnext_live) May 30, 2022
ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದ್ದಂತೆಯೇ ರಾಜ್ಯ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಟಿಕಾಯತ್ ಮೇಲೆ ಆರೋಪ ಹೊರಿಸಿದ್ದರು. ಹೀಗಾಗಿ ಸ್ಪಷ್ಟನೆ ನೀಡುವ ಸಲುವಾಗಿ ಗಾಂಧಿ ಭವನದಲ್ಲಿ ರಾಕೇಶ್ ಟಿಕಾಯತ್ ರೈತ ನಾಯಕರು ಹಾಗೂ ಮಾಧ್ಯಮದವರನ್ನು ಕರೆಸಿದ್ದರು. ಆದರೆ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಆರಂಭವಾಗುತ್ತಿದ್ದಂತೆಯೇ ರೈತರ ಸಭೆ ರಣಾರಂಗವಾಗಿ ಮಾರ್ಪಟ್ಟಿದೆ. ರಾಕೇಶ್ ಟಿಕಾಯತ್ ಬಳಗ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಬಣದ ನಡುವೆ ಮಾರಾಮಾರಿ ಏರ್ಪಟ್ಟಿದೆ. ಈ ಗಲಾಟೆಯ ಸಂಪೂರ್ಣ ದೃಶ್ಯಾವಳಿ ಮಾಧ್ಯಮ ಹಾಗೂ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರಾಕೇಶ್ ಟಿಕಾಯತ್, ಈ ಕೃತ್ಯ ಎಸಗಿದವರು ಯಾರೆಂಬುದು ನನಗೆ ತಿಳಿದಿಲ್ಲ. ಆದರೆ ಇದು ರಾಜ್ಯ ಸರ್ಕಾರದ ಬೆಂಬಲದಿಂದ ನಡೆದ ಕೃತ್ಯ ಎಂದು ನನಗನಿಸುತ್ತಿದೆ. ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಬೇಕಾದದ್ದು ಪೊಲೀಸರ ಜವಾಬ್ದಾರಿ. ನಮಗೆ ಯಾವುದೇ ರೀತಿಯ ಭದ್ರತೆಯನ್ನು ನೀಡಿರಲಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ : bjp leader balachandran killed : ಭದ್ರತಾ ಸಿಬ್ಬಂದಿ ಟೀ ವಿರಾಮಕ್ಕೆ ತೆರಳಿದ್ದ ವೇಳೆ ಬಿಜೆಪಿ ನಾಯಕನ ಬರ್ಬರ ಹತ್ಯೆ
ಇದನ್ನೂ ಓದಿ : Danger Panu Puri : ಜಾತ್ರೆಯಲ್ಲಿ ಪಾನಿಪೂರಿ ತಿಂದು 97 ಮಕ್ಕಳು ಅಸ್ವಸ್ಥ
farmer leader rakesh tikait face inked ach
Comments are closed.