ಮಧ್ಯ ಪ್ರದೇಶ : MP bus accident: ಮಹಾರಾಷ್ಟ್ರ ರೋಡ್ವೇಸ್ಗೆ ಸೇರಿದ ಬಸ್ ಮಧ್ಯ ಪ್ರದೇಶ ಖಲ್ಘಾಟ್ ಸಂಜಯ್ ಸೇತುವೆಯಿಂದ ನರ್ಮದಾ ನದಿಗೆ ಉರುಳಿದ ಪರಿಣಾಮ ಬಸ್ನಲ್ಲಿದ್ದ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ. ಮಧ್ಯ ಪ್ರದೇಶ ಜಿಲ್ಲೆಯ ಧಾರ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಅಪಘಾತ ಸ್ಥಳದಲ್ಲಿ ಈವರೆಗೆ 15 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಖಲ್ಘಾಟ್ ಸಂಜಯ್ ಸೇತುವೆಯಿಂದ ಬಸ್ ನರ್ಮದಾ ನದಿಗೆ ಉರುಳಿದ ದುರಂತದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಧ್ಯ ಪ್ರದೇಶ ಸಚಿವ ನರೋತ್ತಮ್ ಮಿಶ್ರಾ ಬಸ್ ಇಂದೋರ್ನಿಂದ ಪುಣೆಗೆ ಸಂಚರಿಸುತ್ತಿತ್ತು. ಬಸ್ ಸಂಜಯ್ ಸೇತುವೆ ಬಳಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ನದಿಗೆ ಉರುಳಿದೆ. ಪರಿಣಾಮ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ರಕ್ಷಣಾ ತಂಡವು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದು 15 ಮಂದಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬಸ್ನಲ್ಲಿ ಇನ್ನೂ ಎಷ್ಟು ಮಂದಿ ಇದ್ದಾರೆ ಎಂಬುದಕ್ಕೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ ಎಂದು ಹೇಳಿದರು.
ಕಳೆದ ಶುಕ್ರವಾರ ಉತ್ತರ ಪ್ರದೇಶದ ಚಿತ್ರಕೂಟ್ ರಾಜ್ಪುರ ಪ್ರದೇಶದಲ್ಲಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು ಬಸ್ನಲ್ಲಿದ್ದ 30 ಮಂದಿ ಗಾಯಗೊಂಡಿದ್ದರು.
ಕುಸೈಲಿ ಗ್ರಾಮದ ಬಳಿಯ ತಿರುವಿನಲ್ಲಿ ಬಸ್ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ ಎಂದು ಪ್ರದೇಶದ ಸರ್ಕಲ್ ಆಫೀಸರ್ (ಸಿಒ) ಶಿವಪ್ರಕಾಶ್ ಸೋಂಕರ್ ಮಾಹಿತಿ ನೀಡಿದ್ದರು. ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದಾನೆ. ಮೂವರು ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಿವಪ್ರಕಾಶ್ ಸೋಂಕರ್ ಹೇಳಿದ್ದಾರೆ. ಈ ಮೂವತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಇವರಲ್ಲಿ 8 ಮಂದಿ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : bomb threat message : ಡಿ.ಕೆ ಶಿವಕುಮಾರ್ ಮಾಲೀಕತ್ವದ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ
ಇದನ್ನೂ ಓದಿ : milk products rate : ಇಂದಿನಿಂದ ನಂದಿನಿ ಮೊಸರು, ಮಜ್ಜಿಗೆ ದರ ಹೆಚ್ಚಳ : ಶೀಘ್ರದಲ್ಲೇ ಬೆಲೆ ಇಳಿಕೆಗೆ ಸಿಎಂ ಅಭಯ
MP bus accident: 13 dead, 15 rescued after Maharashtra Roadways bus falls into Narmada river in Dhar district