serial kannadathi : ಕನ್ನಡತಿ ಧಾರವಾಹಿಯಲ್ಲಿ ಅಮ್ಮಮ್ಮ ಏಕೆ ಕಾಣಿಸಿಕೊಳ್ತಿಲ್ಲ : ವೀಕ್ಷಕರ ಪ್ರಶ್ನೆಗೆ ಇಲ್ಲಿದೆ ಉತ್ತರ

serial kannadathi : ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡತಿ ಧಾರಾವಾಹಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಸ್ವಚ್ಛವಾಗಿ, ಸ್ಫುಟವಾಗಿ ಕನ್ನಡದಲ್ಲಿ ಮಾತನಾಡುವ ಈ ಧಾರವಾಹಿಯ ಕಲಾವಿದರು ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಧಾರವಾಹಿಯಲ್ಲಿ ಹರ್ಷ ಹಾಗೂ ಭುವಿ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಅದೇ ರೀತಿ ಅಮ್ಮಮ್ಮ ಪಾತ್ರಕ್ಕೂ ಕೂಡ ಮಹತ್ವವನ್ನು ನೀಡಲಾಗಿದೆ. ಹರ್ಷನ ತಾಯಿಯಾಗಿ ಅಮ್ಮಮ್ಮ ಪಾತ್ರದಲ್ಲಿ ನಟಿಸುತ್ತಿರುವ ಚಿತ್ಕಲಾ ಬಿರಾದಾರ್​ ಈ ಧಾರವಾಹಿಯ ನಿರ್ಣಾಯಕ ಸನ್ನಿವೇಶಗಳಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ.


ಈ ಧಾರವಾಹಿಯಲ್ಲಿ ಭುವಿ ಪಾತ್ರದಲ್ಲಿ ನಟಿಸುತ್ತಿರುವ ರಂಜನಿ ರಾಘವನ್​ ಹಾಗೂ ಅಮ್ಮಮ್ಮ ರತ್ನಮಾಲಾ ಪಾತ್ರವನ್ನು ನಿಭಾಯಿಸುತ್ತಿರುವ ಚಿತ್ಕಲಾ ಬಿರಾದಾರ್​ ಅವರ ಬಾಯಿಯಿಂದ ಸ್ಫುಟವಾದ ಕನ್ನಡವನ್ನು ಕೇಳುವುದೇ ಕಿವಿಗಳಿಗೆ ಪರಮಾನಂದ. ಆದರೆ ಇತ್ತೀಚಿನ ಎಪಿಸೋಡ್​ಗಳಲ್ಲಿ ಅಮ್ಮಮ್ಮ ಕಾಣಿಸಿಕೊಳ್ಳುತ್ತಿಲ್ಲ. ಹರ್ಷ ಹಾಗೂ ಭುವಿಯ ಮದುವೆಯಾಗುತ್ತಿದ್ದಂತೆಯೇ ರತ್ನಮಾಲಾಗೆ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದು ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ಧಾರವಾಹಿಯಲ್ಲಿ ತೋರಿಸಲಾಗ್ತಿದೆ.


ಬಹಳಷ್ಟು ಸಮಯದಲ್ಲಿ ರತ್ನಮಾಲಾ ಪಾತ್ರವನ್ನು ಈ ರೀತಿ ತೋರಿಸದೇ ಇದ್ದುದ್ದರಿಂದ ಸಹಜವಾಗಿಯೇ ಕನ್ನಡತಿಧಾರವಾಹಿ ವೀಕ್ಷಕರಿಗೆ ಹಲವು ಅನುಮಾನಗಳು ಕಾಡಲು ಆರಂಭಿಸಿದೆ. ಅಮ್ಮಮ್ಮ ಪಾತ್ರವನ್ನು ಕೊನೆಗೊಳಿಸುತ್ತಾರಾ..? ಅಥವಾ ಇವರ ಪಾತ್ರಕ್ಕೆ ಇನ್ಯಾರಾದರೂ ಬರಬಹುದೇ ಹೀಗೆ ನೂರೆಂಟು ಪ್ರಶ್ನೆಗಳು ಮೂಡಿವೆ. ಈ ಎಲ್ಲಾ ಗೊಂದಲಗಳಿಗೆ ಸೋಶಿಯಲ್​ ಮೀಡಿಯಾದಲ್ಲಿ ಸ್ವತಃ ಚಿತ್ಕಲಾ ಬಿರಾದಾರ್​ ಸ್ಪಷ್ಟನೆಗಳನ್ನು ನೀಡಿದ್ದಾರೆ.

ಚಿತ್ಕಲಾ ಬಿರಾದಾರ್​ ಪ್ರಸ್ತುತ ಅಮೆರಿಕದ ಸ್ಯಾನ್​ ಡಿಯಾಗೋದಲ್ಲಿದ್ದಾರಂತೆ. ತಮ್ಮ ಪತಿಯ ಜೊತೆಯಲ್ಲಿ ಪುತ್ರನನ್ನು ಕಾಣಲು ಚಿತ್ಕಲಾ ವಿದೇಶಕ್ಕೆ ಹಾರಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಚಿತ್ಕಲಾ ಕೋವಿಡ್​ ಹಾಗೂ ಕೆಲಸ ಕಾರಣಗಳಿಂದಾಗಿ ನನಗೆ ಕಳೆದ 2 ವರ್ಷಗಳಿಂದ ನನ್ನ ಪುತ್ರನನ್ನು ನೋಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನನ್ನ ಪುತ್ರನ ಜೊತೆಯಲ್ಲಿ ಸ್ವಲ್ಪ ಸಮಯ ಕಳೆಯಲೆಂದು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಕನ್ನಡತಿ ಧಾರವಾಹಿ ಬಗ್ಗೆಯೂ ಮಾತನಾಡಿದ ಚಿತ್ಕಲಾ, ಅಭಿಮಾನಿಗ ಪ್ರೀತಿಗೆ ನನ್ನ ಧನ್ಯವಾದಗಳು. ಆದರೆ ಕನ್ನಡತಿ ಧಾರವಾಹಿಯಲ್ಲಿ ನನ್ನ ಪಾತ್ರ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತೆ ಎನ್ನುವುದು ನನಗೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿಗೆ ಹಿಂದಿರುಗುವ ಬಗ್ಗೆ ಅಥವಾ ಧಾರವಾಹಿಯಲ್ಲಿ ಮುಂದುವರಿಯುವ ಬಗ್ಗೆ ಚಿತ್ಕಲಾ ಯಾವುದೇ ಸ್ಪಷ್ಟ ಮಾಹಿತಿಗಳನ್ನು ಹಂಚಿಕೊಂಡಿಲ್ಲ.

ಇದನ್ನು ಓದಿ : milk products rate : ಇಂದಿನಿಂದ ನಂದಿನಿ ಮೊಸರು, ಮಜ್ಜಿಗೆ ದರ ಹೆಚ್ಚಳ : ಶೀಘ್ರದಲ್ಲೇ ಬೆಲೆ ಇಳಿಕೆಗೆ ಸಿಎಂ ಅಭಯ

ಇದನ್ನೂ ಓದಿ : Rashmika Mandanna : ರೆಡ್​ ಡ್ರೆಸ್​ನಲ್ಲಿ ಹಾಟ್​ ಲುಕ್​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ರಶ್ಮಿಕಾ ಮಂದಣ್ಣ

this is the reason why amamma chitkala biradar did not appear in the serial kannadathi

Comments are closed.