ಬೆಳಗಾವಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar Belagavi) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅವರನ್ನು ಕ್ರಿಕೆಟ್ ದೇವರು ಎಂದೇ ಕರೀತಾರೆ. ಕ್ರಿಕೆಟ್ ದೇವರನ್ನು ಕಣ್ಣಾರೆ ನೋಡುವುದು ಅದೆಷ್ಟೋ ಅಭಿಮಾನಿಗಳ ಕನಸು. ಅಂತಹ ಕ್ರಿಕೆಟ್ ದೇವರೇ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದರೆ ಹೇಗಿರತ್ತೆ ಹೇಳಿ ? ಬೆಳಗಾವಿ-ಗೋವಾ ಹೈವೇನಲ್ಲಿರುವ ಟೀ ಅಂಗಡಿಯವನೊಬ್ಬನಿಗೆ ಅಂಥದ್ದೊಂದು ಅನುಭವವಾಗಿದೆ.
ಆ ಟೀ ಅಂಗಡಿಯವ ಎಂದಿನಂತೆ ಅಂಗಡಿ ಬಾಗಿಲು ತೆರೆದು ಕೂತಿದ್ದ. ಇದ್ದಕ್ಕಿದ್ದಂತೆ ಅಂಗಡಿ ಮುಂದೆ ಐಷಾರಾಮಿ ಕಾರೊಂದು ಬಂತು ನಿಂತಿತು. ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿದ್ದ ವ್ಯಕ್ತಿಯೊಬ್ಬರು ಕಾರಿನಿಂದ ಇಳಿದು “ಒಂದು ಟೀ ಕೊಡಿ” ಅಂದ್ರು. ಟೀ ಅಂಗಡಿಯವನಿಗೆ ಒಂದು ಕ್ಷಣ ಏನಾಗ್ತಿದೆ ಅನ್ನೋದೇ ಗೊತ್ತಾಗ್ಲಿಲ್ಲ. ಇದೇನು ಕನಸಾ ನನಸಾ ಅನ್ನೋ ಅನುಮಾನ ಶುರುವಾಯ್ತು. ಯಾಕಂದ್ರೆ ಅಂಗಡಿ ಮುಂದೆ ನಿಂತಿದ್ದವರು ಬೇರಾರೂ ಅಲ್ಲ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್.
ಪುತ್ರ ಅರ್ಜುನ್ ತೆಂಡೂಲ್ಕರ್ (Arjun Tendulkar) ಜೊತೆ ಬುಧವಾರ ಕಾರಿನಲ್ಲಿ ಲಾಂಗ್ ಡ್ರೈವ್ ಹೊರಟಿದ್ದ ಸಚಿನ್, ಬೆಳಗಾವಿ-ಗೋವಾ ಎಕ್ಸ್’ಪ್ರೆಸ್ ಹೈವೇ ಬಳಿ ಕಾರು ನಿಲ್ಲಿಸಿದ್ದಾರೆ. ಅಲ್ಲೇ ರಸ್ತೆ ಬದಿಯಲ್ಲಿದ್ದ ಅಂಗಡಿಯಲ್ಲಿ ಖಡಕ್ ಟೀ ಕುಡಿಯುವ ಮನಸ್ಸಾಗಿದೆ. ಕಾರು ನಿಲ್ಲಿಸಿದವರೇ ಟೀ ಅಂಗಡಿಗೆ ಬಂದು ಟೀ ಹಾಗೂ ರಸ್ಕ್ (rusk) ಸವಿದಿದ್ದಾರೆ. ಈ ವೀಡಿಯೊವನ್ನು ಸಚಿನ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, “ಇದು ಬೆಳಗಾವಿ-ಗೋವಾ ಎಕ್ಸ್’ಪ್ರೆಸ್ ಹೈವೇ. ಟೀ ಮತ್ತು ಗರಂ ಗರಂ ರಸ್ಕ್ ಜೊತೆ ಪ್ರಯಾಣವನ್ನು ಆನಂದಿಸುತ್ತಿದ್ದೇನೆ. ಇದರ ರುಚಿ ಅದ್ಭುತವಾಗಿದೆ” ಎಂದು ಬರೆದುಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್ ರಸ್ತೆ ಬದಿ ನಿಂತು ಟೀ ಕುಡಿಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಕ್ರಿಕೆಟ್ ದೇವರ ಸರಳೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆಗಷ್ಟೇ ತಮ್ಮ ತವರು ಕ್ರಿಕೆಟ್ ಸಂಸ್ಥೆಯ ಮುಂಬೈಯನ್ನು ತೊರೆದು ಗೋವಾಗೆ ವಲಸೆ ಹೋಗಿದ್ದರು. ಪ್ರಸಕ್ತ ಸಾಲಿನ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಗೋವಾ ಪರ 7 ಪಂದ್ಯಗಳನ್ನಾಡಿದ್ದ 23 ವರ್ಷದ ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ 10 ವಿಕೆಟ್’ ಗಳನ್ನು ಪಡೆದು ಗಮನ ಸೆಳೆದಿದ್ದರು.
ಇದನ್ನೂ ಓದಿ : New Cricket Stadiums Karnataka : ಪುತ್ತೂರು, ಬಳ್ಳಾರಿಯಲ್ಲಿ ನಿರ್ಮಾಣವಾಗಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ಇದನ್ನೂ ಓದಿ : Raghavendra Divgi life story : ಭಾರತ ವಿಶ್ವಕಪ್ ತಂಡದಲ್ಲಿರುವ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅವರ ಮನಮಿಡಿಯುವ ಕಥೆ
Sachin Tendulkar tastes tea in road side Belagavi to Goa Highway