ನವದೆಹಲಿ : ದೇಶದಾದ್ಯಂತ ರೈತ ಮಿತ್ರರು ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣಕ್ಕಾಗಿ (PM Kisan Yojana 13th Installment ) ಕಾಯುತ್ತಿದ್ದಾರೆ. ಇದೀಗ ಈ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ. ಕೇಂದ್ರ ಸರಕಾರ ನಕಲಿ ರೈತರನ್ನು ಕಂಡು ಹಿಡಿಯಲು ಸಂಪೂರ್ಣ ಸಿದ್ಧತೆ ನಡೆಸಿದೆ. ಈ ಸಿದ್ಧತೆಯಲ್ಲಿ ಪಿಎಂ ಕಿಸಾನ್ ಯೋಜನೆಯ ಪಟ್ಟಿಯಿಂದ 2 ಕೋಟಿ ರೈತರ ಹೆಸರನ್ನು ತೆಗೆದುಹಾಕಲಾಗಿದೆ. ಅಂದರೆ ಈ ರೈತರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ. ಈ ಬಗ್ಗೆ ಕೇಂದ್ರ ಸರಕಾರದಿಂದ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸರಕಾರದ ಈ ಯೋಜನೆ ಅಡಿಯಲ್ಲಿ ಹಲವಾರು ರಾಜ್ಯಗಳ ರೈತರ ಹೆಸರುಗಳನ್ನು ಈ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಯೋಜನೆ ಅಡಿಯಲ್ಲಿ ವಂಚನೆ ತಡೆಯಲು ಆಧಾರ್ ಲಿಂಕ್ ಇರುವ ಫಿಲ್ಟರ್ ಅಳವಡಿಸಲಾಗಿದ್ದು, ಆ ಮೂಲಕ ರೈತರನ್ನು ಗುರುತಿಸಲಾಗುತ್ತಿದೆ ಎಂದು ಸರಕಾರ ತಿಳಿಸಿದೆ. ಈ ಕಾರಣದಿಂದ ರೈತರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಹಾಗಾಗಿ ನೀವು ಸಹ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ ಮತ್ತು ಇನ್ನೂ ಆಧಾರ್ ಲಿಂಕ್ ಮಾಡಿಲ್ಲದಿದ್ದರೆ KYC (E-KYC) ಅನ್ನು ತಕ್ಷಣವೇ ಮಾಡಿ, ಇಲ್ಲದಿದ್ದರೆ ನಿಮಗೆ 13 ನೇ ಕಂತಿನ ಹಣ ಸಿಗುವುದಿಲ್ಲ.
ಈ ಯೋಜನೆ ಅಡಿಯಲ್ಲಿ ಹಲವು ನಕಲಿ ರೈತರು ಮೋಸದಿಂದ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಯೋಜನೆಯ ಲಾಭವನ್ನು ಪಡೆಯುತ್ತಿದ್ದ ಅನರ್ಹ ರೈತರನ್ನು ಗುರುತಿಸುವಲ್ಲಿ ಸರಕಾರ ನಿರಂತರವಾಗಿ ತೊಡಗಿಸಿಕೊಂಡಿದೆ. ಈ ರೈತರಿಗೆ ಈ ಯೋಜನೆಯ ಲಾಭ ಪಡೆಯುವುದನ್ನು ತಡೆಯಲು, ಸರಕಾರವು ನಾಲ್ಕು ಫಿಲ್ಟರ್ಗಳನ್ನು ಅಳವಡಿಸಿದೆ. ಇದರಿಂದ ನಕಲಿ ರೈತರನ್ನು ಸುಲಭವಾಗಿ ಗುರುತಿಸಲಾಗಿದೆ.
ಇದನ್ನೂ ಓದಿ : PM Kisan New Scheme : ರೈತರಿಗೆ ಭರ್ಜರಿ ಆಫರ್ ನೀಡಿದ ಪಿಎಂ : ಖಾತೆಗೆ ಬರಲಿದೆ ರೂ.15 ಲಕ್ಷ ಕೂಡಲೇ ಅರ್ಜಿ ಸಲ್ಲಿಸಿ
ಇದನ್ನೂ ಓದಿ : Private CEO for LIC: 66 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಲ್ ಐಸಿಗೆ ಖಾಸಗಿ ಸಿಇಒ ನೇಮಿಸಲು ಕೇಂದ್ರ ಚಿಂತನೆ
ಇದನ್ನೂ ಓದಿ : Small saving schemes Interest Rate : ಸುಕನ್ಯಾ ಸಮೃದ್ಧಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಸರಕಾರದಿಂದ ಗುಡ್ ನ್ಯೂಸ್
ಈ ರಾಜ್ಯಗಳಿಂದ ರೈತರ ಹೆಸರು ಕಟ್ :
ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ದೇಶಾದ್ಯಂತ ಸುಮಾರು 58 ಲಕ್ಷ ರೈತರ ಹೆಸರನ್ನು ತೆಗೆದುಹಾಕಲಾಗಿದೆ. ಸರಕಾರದ ಈ ಕ್ರಮದ ನಂತರ, ಪಂಜಾಬ್ನ 17 ಲಕ್ಷ ರೈತರಲ್ಲಿ 15 ಲಕ್ಷ ರೈತರ ಹೆಸರನ್ನು ತೆಗೆದು ಹಾಕಲಾಗಿದೆ. ಈಗ ಅವರ ಸಂಖ್ಯೆ 2 ಲಕ್ಷಕ್ಕೆ ಇಳಿದಿದೆ. ಕೇರಳ ಮತ್ತು ರಾಜಸ್ಥಾನದಿಂದ ಸುಮಾರು 14 ಲಕ್ಷ ರೈತರ ಹೆಸರುಗಳನ್ನು ತೆಗೆದು ಹಾಕಲಾಗಿದೆ.
PM Kisan Yojana 13th Installment: Big shock for PM Kisan beneficiaries: 2 crore farmers will not get money