ಮಂಗಳವಾರ, ಜೂನ್ 17, 2025
HomeCoastal NewsCooperative Society of Udupi : ಉಡುಪಿಯ ಸಹಕಾರ ಸಂಘದಿಂದ ಗ್ರಾಹಕರಿಗೆ ನೂರಾರು ಕೋಟಿ ವಂಚನೆ...

Cooperative Society of Udupi : ಉಡುಪಿಯ ಸಹಕಾರ ಸಂಘದಿಂದ ಗ್ರಾಹಕರಿಗೆ ನೂರಾರು ಕೋಟಿ ವಂಚನೆ : ಕಛೇರಿ ಮುಂದೆ ಜಮಾಯಿಸಿದ ಗ್ರಾಹಕರು

- Advertisement -

ಉಡುಪಿ : ಉಡುಪಿಯ ಸಹಕಾರ ಸಂಘದಿಂದ (Cooperative Society of Udupi) ಗ್ರಾಹಕರಿಗೆ ನೂರಾರು ಕೋಟಿ ವಂಚನೆ ನಡೆಸಿದ ಹಿನ್ನಲೆಯಲ್ಲಿ ಇಂದು ಮುಂಜಾನೆಯಿಂದಲೇ ಠೇವಣಿದಾರರು ಕಛೇರಿ ಮುಂದೆ ಜಮಾಯಿಸಿದ್ದಾರೆ.

ಮುಂಜಾನೆಯೇ ಗ್ರಾಹಕರು ಕಚೇರಿ ಮುಂದೆ ಬಂದರೂ ನಿಗದಿತ ಸಮಯಕ್ಕೆ ಕಚೇರಿಯ ಬಾಗಿಲು ತೆಗೆದಿರಲಿಲ್ಲ. ನಂತರ ಕಚೇರಿ ಬಾಗಿಲು ತೆಗೆದ ಕೂಡಲೇ ಗ್ರಾಹಕರು ಕಚೇರಿ ಒಳನುಗ್ಗಿ ನ್ಯಾಯಕ್ಕಾಗಿ ಅಗ್ರಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಸೊಸೈಟಿ ಸಿಬ್ಬಂದಿಯೊಬ್ಬರು ಗ್ರಾಹಕರ ಎದುರಿಗೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೂಡ ನಡೆದಿದೆ. ಆ ನಂತರ ಅಲ್ಲಿ ಹಾಜರಿದ್ದ ಗ್ರಾಹಕರೇ ಸಿಬ್ಬಂದಿ ನುಂಗಿದ ಮಾತ್ರೆಗಳನ್ನು ವಾಂತಿ ಮಾಡಿಸುವ ಮೂಲಕ ರಕ್ಷಣೆ ಮಾಡಿದ್ದಾರೆ.
ಆದರೆ ಇಲ್ಲಿ ಇಷ್ಟೊಂದು ಸಮಸ್ಯೆಗಳು ನಡೆಯುತ್ತಿದ್ದರೂ ಸ್ಥಳಕ್ಕೆ ಯಾವುದೇ ಪೊಲೀಸರು ಬಂದಿಲ್ಲ ಎಂದು ಗ್ರಾಹಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘದ ಮಾಲೀಕರ ವಿರುದ್ಧ ವಂಚನೆಗೆ ಒಳಗಾದ ಗ್ರಾಹಕರು ನಗರ ಪೊಲೀಸ್‌ ಠಾಣೆಗೆ ದೂರನ್ನು ದಾಖಲಿಸಿದ್ದಾರೆ. ಗ್ರಾಹಕರು ತಮ್ಮ ದೂರಿನಲ್ಲಿ ಸಂಘದಲ್ಲಿ ಇಟ್ಟ ಠೇವಣಿಯ ಬಡ್ಡಿ, ವಾಯಿದೆ ಮುಗಿದ ಹಾಗೂ ವಾಯಿದೆ ಪೂರ್ವ ಠೇವಣಿಯ ಮೊತ್ತವನ್ನು ಮರುಪಾವತಿಸದೇ ವಂಚನೆ ಮಾಡುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಈ ಸಹಕಾರಿ ಸಂಘವು ಉಡುಪಿ ಕೃಷ್ಣಾಪುರ ಮಠದ ಕಟ್ಟಡದಲ್ಲಿ ಕಾರ್ಯಚರಣೆ ನಡೆಸುತ್ತಿದೆ. ಗ್ರಾಹಕರು ತಮ್ಮ ಭವಿಷ್ಯಕ್ಕಾಗಿ ತಾವು ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ತಿಂಗಳಿಗೆ ೧೨% ರ ಬಡ್ಡಿ ದರದಂತೆ ನಿರಖು ಠೇವಣಿ ಖಾತೆಯಲ್ಲಿ ಇಟ್ಟಿದ್ದರು. ಈ ಖಾತೆಗೆ ಕಳೆದ ಜೂನ್‌ವರೆಗೆ ಸಂಸ್ಥೆಯವರು ಸರಿಯಾಗಿ ಬಡ್ಡಿಯನ್ನು ಪಾವತಿಸಿದ್ದು, ನಂತರದ ದಿನಗಳಲ್ಲಿ ಬಡ್ಡಿಯನ್ನು ಪಾವತಿಸಿರುವುದಿಲ್ಲ. ಅಷ್ಟೇ ಅಲ್ಲದೇ ವಾಯಿದೆ ಮುಗಿದ ನಿರಖು ಠೇವಣಿಯನ್ನು ಗ್ರಾಹಕರಿಗೆ ಮರಳಿ ಕೊಡದೇ ಸತಾಯಿಸುತ್ತಿದ್ದಾರೆ ಎಂದು ಸಹಕಾರಿ ಸಂಘವನ್ನು ಆರೋಪಿಸಿದ್ದಾರೆ.

ಈ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ವಿ.ಲಕ್ಷ್ಮೀನಾರಾಯಣ ಕಳೆದ ತಿಂಗಳು ಬೋರ್ಡ್‌ ಮೀಟಿಂಗ್‌ ಕರೆದು ಎಲ್ಲಾ ಗ್ರಾಹಕರ ಹಣ ಹಿಂತಿರುಗಿಸುವ ಬಗ್ಗೆ ಹೇಳಿದರು. ಆದರೆ ಆ
ಸಭೆಯಲ್ಲಿ ಡಿ.ಆರ್‌ ಆಫೀಸಿನಿಂದ ಬರಬೇಕಾದ ಆಫೀಸರ್‌ ಬಾರದೇ ಇದ್ದುದರಿಂದ ಸಭೆ ರದ್ದುಪಡಿಸಲಾಗಿದೆ ಎಂದು ಗ್ರಾಹಕರನ್ನು ನಂಬಿಸಿದರು. ಆದರೆ ಈ ಕುರಿತು ಡಿ.ಆರ್‌ ಆಫೀಸ್‌ನಲ್ಲಿ ವಿಚಾರಿಸಿದರೆ, ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಇದಾದ ಮೇಲೆ ಗ್ರಾಹಕರು ಪ್ರತಿದಿನ ಕಚೇರಿಗೆ ಹೋದಾಗಲೂ ದಿನಕ್ಕೊಂದು ರೀತಿ ದಿನಾಂಕ ಹೇಳಿ ಕಳುಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ICICI Bank Interest Rate : ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದ ICICI ಬ್ಯಾಂಕ್‌

ಇದನ್ನೂ ಓದಿ : Reserve Bank of India: ಗ್ರಾಹಕರಿಗೆ ಬಿಗ್ ಶಾಕ್ ನೀಡಿದ ಎಸ್‌ಬಿಐ: ಇಂದಿನಿಂದ ಹೋಮ್‌ ಲೋನ್‌ ಬಡ್ಡಿದರ ಹೆಚ್ಚಳ

ಈ ಸಹಕಾರಿ ಸಂಘವು ಒಂದು ಕುಟುಂಬದ ಸದಸ್ಯರನ್ನು ಒಳಗೊಂಡ ಸಹಕಾರ ಸಂಘಟನೆಯಾಗಿದೆ. ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಬಿವಿ ಲಕ್ಷ್ಮೀನಾರಾಯಣ, ಬಿ.ಕೆ.ವೆಂಕಯ್ಯ, ಕಮಲ ನೇತ್ರ ಹಾಗೂ ಟ್ರಸ್ಟಿಗಳಾದ ಬಡಗು ಪೇಟೆಯ ರವಿ ಉಪಾಧ್ಯ, ಬಿ.ವಿ. ಬಾಲಕೃಷ್ಣ, ಭಾಸ್ಕರ ಉಪಾಧ್ಯ, ಉದಯ ಉಪಾಧ್ಯ, ರಾಧಿಕಾ, ಸುಜಾತ ಮೊದಲಾದವರು ಕುಟುಂಬ ಸದಸ್ಯರಾಗಿದ್ದಾರೆ. ಕುಟುಂಬ ಸದಸ್ಯರನ್ನು ಒಳಗೊಂಡ ಈ ಸಂಸ್ಥೆಯಲ್ಲಿ ಊರಿನ ಹಾಗೂ ಪರಊರಿನ ನೂರಾರು ಜನರು ಇಟ್ಟಿರುವ ಠೇವಣಿಯ ಕೋಟಿಗಟ್ಟಲೆ ಹಣವನ್ನು ಮೋಸ ಮಾಡುತ್ತಿರುವುದನ್ನು ಗಮನಿಸಿದರೆ ಇದರ ಹಿಂದೆ ದೊಡ್ಡ ಮೋಸದ ಜಾಲವೇ ಇದೇ ಎಂದು ಗ್ರಾಹಕರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

Hundreds of crores of fraud to customers by cooperative society of Udupi: Customers gathered in front of the office

RELATED ARTICLES

Most Popular