ಮೇಷರಾಶಿ
ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ನಾನಾ ರೀತಿಯ ಸಂಕಷ್ಟ, ಆಪ್ತರೊಡನೆ ಮನಬಿಚ್ಚಿ ಮಾತನಾಡುವುದು ಉತ್ತಮ. ವ್ಯಾವಹಾರಿಕವಾಗಿ ಕಾರ್ಯಕ್ಷೇತ್ರದಲ್ಲಿನ ಒಪ್ಪಂದದಲ್ಲಿರುವ ವಿಚಾರವನ್ನು ಬದಲಾವಣೆ ಮಾಡಬೇಕಾದ ಅನಿವಾರ್ಯ ಸ್ಥಿತಿ ಒದಗಿ ಬರಲಿದೆ. ಆರೋಗ್ಯ ಸುಧಾರಣೆ ಇದೆ. ಅಲ್ಪ ಪ್ರಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ವ್ಯಥೆ, ಆತ್ಮೀಯರಲ್ಲಿ ವೈಮನಸ್ಸು.
ವೃಷಭರಾಶಿ
ಆಕಸ್ಮಿಕ ಅವಕಾಶಗಳು ಕೈ ತಪ್ಪುವುದು, ಆರ್ಥಿಕವಾಗಿ ಅನಗತ್ಯ ಖರ್ಚುವೆಚ್ಚಗಳ ಬಗ್ಗೆ ಹಿಡಿತವಿರಲಿ. ಪತ್ರಕರ್ತರಿಗೆ ರೋಚಕ ಸುದ್ದಿ ಕೇಳಿ ಬಂದೀತು. ಯೋಗ್ಯ ವಯಸ್ಕರಿಗೆ ವೈವಾಹಿಕ ಸಂಬಂಧಗಳು ಗಟ್ಟಿಯಾದಾವು. ಸರಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಕೃಷಿಯಲ್ಲಿ ಲಾಭ, ಕುಟುಂಬ ಸೌಖ್ಯ, ದಾಯಾದಿಗಳಲ್ಲಿ ಪ್ರೀತಿ, ಆರೋಗ್ಯದಲ್ಲಿ ವ್ಯತ್ಯಾಸ.
ಮಿಥುನರಾಶಿ
ಮಕ್ಕಳ ಭಾವನೆಗಳಿಗೆ ಸ್ಪಂದನೆ, ಅನ್ಯರಿಗೆ ಉಪಕಾರ ಮಾಡುವಿರಿ, ವಿವೇಚನೆ ಕಳೆದುಕೊಳ್ಳುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಆರ್ಥಿಕವಾಗಿ ಅನಿರೀಕ್ಷಿತ ರೂಪದಲ್ಲಿ ಹೆಚ್ಚಿನ ಧನವ್ಯಯವಾದೀತು. ಸಾಂಸಾರಿಕ ಸಮಸ್ಯೆಗಳನ್ನು ಹಿರಿಯರ ಸಮಕ್ಷಮದಲ್ಲಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಭಿನ್ನಾಭಿಪ್ರಾಯ ಪರಿಹರಿಸಿರಿ. ತಾಳ್ಮೆಯಿಂದ ಕಾರ್ಯ ಸಿದ್ಧಿ, ಮಿಶ್ರ ಫಲ ಯೋಗ.

ಕಟಕರಾಶಿ
ಕೆಲವೊಂದು ಸಮಸ್ಯೆಗಳನ್ನು ವೈಯಕ್ತಿಕವಾಗಿ ಪರಾಮರ್ಶಿಸಬೇಕಾದೀತು. ಅಧಿಕ ತಿರುಗಾಟವಿದ್ದರೂ ಆದಾಯ ಹೆಚ್ಚಲಿದೆ. ಪಾಲುಗಾರಿಕೆಯಲ್ಲಿ ಒಮ್ಮತ ಮೂಡಲಿದೆ. ಯೋಗ್ಯ ಜನರ ಸಹಕಾರದಿಂದ ಕಾರ್ಯ ಸಾಧನೆಯಾಗಲಿದೆ. ಅಮೂಲ್ಯ ವಸ್ತುಗಳ ಖರೀದಿ ಯೋಗ, ಸ್ತ್ರೀಯರಿಗೆ ಅನುಕೂಲ, ಆತ್ಮೀಯರಲ್ಲಿ ವಿರೋಧ-ವೈಮನಸ್ಸು, ಋಣ ಬಾಧೆ, ನೀವಾಡುವ ಮಾತಿನಿಂದ ಅನರ್ಥ.
ಸಿಂಹರಾಶಿ
ಯತ್ನ ಕಾರ್ಯಗಳಲ್ಲಿ ವಿಳಂಬ, ಆಲಸ್ಯ ಮನೋಭಾವ, ಹಣಕಾಸಿನ ವಿಚಾರದಲ್ಲಿ ಕಟ್ಟುನಿಟ್ಟಿನ ವರ್ತನೆ ಇರಲಿ. ಕಾರ್ಯಕ್ಷೇತ್ರದಲ್ಲಿ ಸ್ವಸಾಮರ್ಥ್ಯದಿಂದ ಮುನ್ನಡೆದಲ್ಲಿ ಹಲವಾರು ಅವಕಾಶಗಳು ದೊರಕಲಿವೆ. ಹಳೆಯ ಸಾಲವು ಪರಿಹಾರವಾಗಿ ಮನಸ್ಸಿಗೆ ಸಮಾಧಾನ ದೊರಕಲಿದೆ. ಹಿತ ಶತ್ರುಗಳ ಬಾಧೆ, ನಂಬಿಕಸ್ಥರಿಂದ ಅಶಾಂತಿ, ವಿಪರೀತ ವ್ಯಸನ, ಅಶುಭ ಫಲ ಯೋಗ,
ಕನ್ಯಾರಾಶಿ
ದಾಂಪತ್ಯದಲ್ಲಿ ಸಮಾಧಾನ ಸಿಗಲಿದೆ. ವಿದ್ಯಾರ್ಥಿ ಗಳು ಹೆಚ್ಚಿನ ಅಭ್ಯಾಸದಿಂದ ಪ್ರಗತಿ ಸಾಧಿಸಲಿದ್ದಾರೆ. ನಿಮ್ಮ ಮನೋಧರ್ಮ ಚಂಚಲತೆಗೆ ಕಾರಣವಾದೀತು. ದೃಢ ನಿರ್ಧಾರ ಕೈಗೊಂಡಲ್ಲಿ ಯಶಸ್ಸು ನಿಮ್ಮ ಪಾಲಿಗಿದೆ. ಹಿರಿಯರಿಂದ ಹಿತವಚನ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಈ ದಿನ ಶುಭ ಫಲ ಯೋಗ.

ತುಲಾರಾಶಿ
ಉದ್ಯೋಗದಲ್ಲಿ ಬಡ್ತಿ, ಆತ್ಮೀಯರಲ್ಲಿ ಉತ್ತಮ ಬಾಂಧವ್ಯ, ಸಾಧಿಸಲೇಬೇಕೆಂಬ ಛಲವಿರುವ ನಿಮಗೆ ಕಾರ್ಯಸಿದ್ಧಿಸಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನವು ಹೆಚ್ಚಾಗಲಿದೆ. ರಾಜಕೀಯ ಪುಢಾರಿಗಳು ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತಾದೀತು. ಮುನ್ನಡೆಯಿರಿ. ಇಲ್ಲ ಸಲ್ಲದ ಅಪವಾದ, ಪರಸ್ತ್ರೀ ವ್ಯಾಮೋಹದಿಂದ ದೂರವಿರಿ, ಹಣಕಾಸು ವಿಚಾರದಲ್ಲಿ ಎಚ್ಚರ.
ವೃಶ್ಚಿಕರಾಶಿ
ಪ್ರಯತ್ನದಿಂದ ಕಾರ್ಯ ಸಫಲ, ಸಕಾಲ ಭೋಜನ ಲಭಿಸುವುದಿಲ್ಲ, ಸ್ವಂತ ಮನೆ ಖರೀದಿಯ ಚಿಂತನೆ ಕಾರ್ಯಗತವಾಗಲಿದೆ. ಆರ್ಥಿಕವಾಗಿ ವ್ಯಾಪಾರ, ವ್ಯವಹಾರಗಳು ತಕ್ಕಮಟ್ಟಿಗೆ ಲಾಭದಾಯಕವಾಗಲಿವೆ. ಕೆಲಸ ಕಾರ್ಯಗಳಲ್ಲಿ ಪ್ರವೃತ್ತಿ ವಿಸ್ತಾರಗೊಂಡಾವು. ಸಾಂಸಾರಿಕವಾಗಿ ನೆಮ್ಮದಿ ಇದೆ. ಋಣ ಬಾಧೆ ಕಾಡುವುದು, ತಾಳ್ಮೆಯಿಂದ ಯಶಸ್ಸು ಪ್ರಾಪ್ತಿ, ನೆಮ್ಮದಿಯ ದಿನ ನಿಮ್ಮದಾಗುವುದು.
ಧನಸ್ಸುರಾಶಿ
ಆದಾಯಕ್ಕಿಂತ ಖರ್ಚು ಹೆಚ್ಚು, ಧನಾದಾಯಕ್ಕೂ ಕಾರ್ಯಸಿದ್ಧಿಗೂ ದಾರಿ ಸುಗಮ ವಾದರೂ ಜಾಗ್ರತೆ ಬೇಕೇ ಬೇಕಾಗುತ್ತದೆ. ವರ್ತಕ ವರ್ಗಕ್ಕೆ ಹೆಚ್ಚಿನ ಲಾಭವಿಲ್ಲದಿದ್ದರೂ ಮೂಲಧನಕ್ಕೆ ಮೋಸವಾಗದು. ಸಾಂಸಾರಿಕವಾಗಿ ಅಡಚಣೆ ಕಂಡರೂ ಸುಧಾರಿಸಬೇಕು. ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಣಕಾಸು ವಿಚಾರದಲ್ಲಿ ಎಚ್ಚರ, ಅತಿಯಾದ ಕೋಪ, ಮಕ್ಕಳ ಬಗ್ಗೆ ಯೋಚನೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಮಕರರಾಶಿ
ಆಕಸ್ಮಿಕ ಧನ ಲಾಭ, ಮಾನಸಿಕ ನೆಮ್ಮದಿ ಪ್ರಾಪ್ತಿ, ಆಗಾಗ ತೊಂದರೆಗಳು ತೋರಿಬಂದರೂ ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ಮುಖ್ಯ ಗುರಿಯನ್ನು ಪರಾಮರ್ಶಿಸಲು ಸೂಕ್ತ ಸಮಯವಿದೆ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಕ್ಕಳಿಂದ ಸಂತಸವಿದೆ. ಗುರು ಹಿರಿಯರಲ್ಲಿ ಭಕ್ತಿ, ಮಾತಿನ ಮೇಲೆ ಹಿಡಿತವಿರಲಿ, ಚಿನ್ನಾಭರಣ ಯೋಗ, ವ್ಯವಹಾರ ಒಪ್ಪಂದ ಮುಂದೂಡುವುದು ಉತ್ತಮ.
ಕುಂಭರಾಶಿ
ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ, ವೃತ್ತಿರಂಗದಲ್ಲಿ ಹೆಚ್ಚಿನ ಜವಾಬ್ದಾರಿ ತಂದೀತು. ರಾಜಕೀಯ ವರ್ಗದವರು ಜನರ ಸಂಪರ್ಕ ಇಟ್ಟುಕೊಂಡಲ್ಲಿ ಉತ್ತಮ. ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಿರಿ. ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ಮಾಡಿರಿ. ಅಧಿಕಾರಿಗಳಿಗೆ ಕೆಲಸದಲ್ಲಿ ಒತ್ತಡ, ಆತುರ ನಿರ್ಧಾರದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ.
ಮೀನರಾಶಿ
ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಆರ್ಥಿಕವಾಗಿ ಹಳೆಯ ಬಾಕಿ ವಸೂಲಿಯಾಗಲಿದೆ. ಅನಿರೀಕ್ಷಿತ ಧನಾಗಮನದಿಂದ ಕಾರ್ಯ ಸಿದ್ಧಿಯಾದೀತು. ಸಾರ್ವಜನಿಕವಾಗಿ ಹೆಚ್ಚಿನ ಸಂಪರ್ಕ ಭವಿಷ್ಯಕ್ಕೆ ಫಲಕಾರಿಯಾಗಲಿದೆ. ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಶತ್ರುಗಳ ಬಾಧೆ, ಆತ್ಮೀಯರಲ್ಲಿ ಮನಃಸ್ತಾಪ, ಅಲ್ಪ ಅಶುಭ ಫಲ.