ಹೈದರಾಬಾದ್: (Actor K. Vishwanath) ತೆಲುಗಿನ ಖ್ಯಾತ ನಿರ್ದೇಶಕ, ನಟ ಕೆ. ವಿಶ್ವನಾಥ್ ಅವರು ಹೈದರಾಬಾದ್ ನಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಂದು ಹೈದರಾಬಾದ್ ನಲ್ಲಿ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಅನೇಕ ದಿಗ್ಗಜರು ಸಂತಾಪವನ್ನು ಸೂಚಿಸಿದ್ದಾರೆ.
ತೆಲುಗು, ತಮಿಳು ಮಾತ್ರವಲ್ಲದೇ ಕನ್ನಡದಲ್ಲೂ ನಟಿಸಿದ ಇವರು, ತೆಲುಗಿನಲ್ಲಿ ಸ್ವಾತಿ ಮುತ್ಯಂ, ಶಂಕರಾಭರಣಂ, ಸಾಗರ ಸಂಗಮಮ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ವಿಶ್ವನಾಥ್ (Actor K. Vishwanath) ನೀಡಿದ್ದಾರೆ. ಇವರ ಸ್ವಾತಿ ಮುತ್ಯಂ ಸಿನಿಮಾ ಕನ್ನಡಕ್ಕೆ ಸ್ವಾತಿ ಮುತ್ತು ಹೆಸರಲ್ಲಿ ರಿಮೇಕ್ ಆಗಿತ್ತು. ಇದಲ್ಲದೇ ಇವರ ನಿರ್ದೇಶನದ ಹಲವು ಸಿನಿಮಾಗಳು ಕನ್ನಡಕ್ಕೆ ರಿಮೇಕ್ ಆಗಿವೆ.
ವಿಶ್ವನಾಥ್ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು, ದಾದಾಸಾಹೇಬ್ ಫಾಲ್ಕೆ ಸೇರಿ ಐದು ರಾಷ್ಟ್ರಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. ತೆಲುಗಿನ ಪ್ರತಿಷ್ಠಿತ ನಂದಿ ಅವಾರ್ಡ್ ಅನ್ನು ಬರೋಬ್ಬರಿ ಎಂಟು ಬಾರಿ ಪಡೆದುಕೊಂಡಿದ್ದರು.
ಇವರು (Actor K. Vishwanath) ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, 1965 ರಲ್ಲಿ ಅವರ ನಿರ್ದೇಶನದ ಮೊದಲ ಸಿನಿಮಾ ಆತ್ಮ ಗೌರವಮ್ ರಿಲೀಸ್ ಆಯ್ತು. ಈ ಚಿತ್ರಕ್ಕೆ ನಂದಿ ಪ್ರಶಸ್ತಿ ಲಭಿಸಿದೆ. ತೆಲುಗು ಮಾತ್ರವಲ್ಲದೇ ಹಿಂದಿಯಲ್ಲೂ ಕೂಡ ಅವರು ನಿರ್ದೇಶನ ಮಾಡಿದ್ದರು. 1995 ರಲ್ಲಿ ನಿರ್ದೇಶನಕ್ಕೆ ಕಾಲಿಟ್ಟ ಮೂವತ್ತು ವರ್ಷಗಳ ಬಳಿಕ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು.
ಇದನ್ನೂ ಓದಿ : ಶಾರುಖ್ ಖಾನ್ ಜೊತೆ ಸಿನಿಮಾ ಸದ್ಯಕ್ಕಿಲ್ಲ ಎಂದ ವಿಜಯ್ ಕಿರಗಂದೂರು
ಇದನ್ನೂ ಓದಿ : Kavyashree Gowda : ಬಿಗ್ ಬಾಸ್ ಕಾವ್ಯಶ್ರೀ ಹೊಸ ಪೋಟೋಶೂಟ್ ಗುಟ್ಟೇನು ? ಸಿನಿಮಾಕ್ಕೆ ಎಂಟ್ರಿ ಕೊಡ್ತಾರಾ ಮಂಗಳಗೌರಿ
ಇದನ್ನೂ ಓದಿ : ಫ್ಯಾನ್ಸ್ ಗೆ ಗುಡ್ ನ್ಯೂಸ್ ಕೊಟ್ಟ ಯಶ್ : ರಾಕಿಂಗ್ ಸ್ಟಾರ್ ಮೀಟ್ ಮಾಡಿದ ಅಭಿಮಾನಿಗಳು
2018 ರಲ್ಲಿ ತೆರೆಗೆ ಬಂದ ಕನ್ನಡದ ಪ್ರೇಮ ಬರಹ ಹಾಗೂ 2022 ರ ಒಪ್ಪಂದ ಸಿನಿಮಾದಲ್ಲಿ ಅವರು ಬಣ್ಣ ಹಚ್ಚಿದರು. ಇದೀಗ ಚಿತ್ರರಂಗ ಖ್ಯಾತ ಕಲೆಗಾರರನ್ನು ಕಳೆದುಕೊಂಡಿದ್ದು, ಅವರ ನಿಧನಕ್ಕೆ ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಚಿತ್ರರಂಗದ ಅನೇಕ ದಿಗ್ಗಜರು ಸಂತಾಪ ಸೂಚಿಸಿದ್ದರು.
Actor K. Vishwanath: Kalathapasvi famous actor, director K. Vishwanath is no more