ಕೋಲಾರ : ಮನೆ ಮಗಳು ಸತ್ತಳೆಂದು ಮನೆಯವರೆಲ್ಲಾ ದುಃಖದಲ್ಲಿದ್ದರು. ಚಟ್ಟವನ್ನೂ ರೆಡಿ ಮಾಡಿ ಅಂತ್ಯ ಸಂಸ್ಕಾರಕ್ಕೆ ಸಿದ್ದತೆಯನ್ನೂ ಮಾಡಿಕೊಂಡಿದ್ರು. ಆದರೆ ಸತ್ತ ಮಹಿಳೆ ಪವಾಡ ಸದೃಢವಾಗಿ ಬದುಕಿ ಬಂದಿದ್ದಾಳೆ.
ಕೆಜಿಎಫ್ ನಗರದ ಓಲ್ಡ್ ಓರಿಯಂಟಲ್ ಲೈನ್ ನಲ್ಲಿ ವಾಸವಾಗಿದ್ದ ದೀಪಾ ಪುನರ್ಜನ್ಮ ಪಡೆದವರಾಗಿದದ್ಆರೆ. ಮನೆ ಕುಸಿತದಿಂದ ದೀಪಾ ನರಳುತ್ತಿದ್ದಳು. ತಕ್ಷಣವೇ ಆಕೆಯನ್ನು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾರ್ಗ ಮಧ್ಯೆ ಈಕೆ ಸಾವನ್ನಪ್ಪಿದ್ದಾಳೆ ಅಂತ ವೈದ್ಯರು ಹೇಳಿದರು. ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಚೆಟ್ಟ ಕಟ್ಟಿ ಶವಸಂಸ್ಕಾರಕ್ಕೆ ಸಂಬಂಧಿಕರು ರೆಡಿ ಮಾಡುತ್ತಿದ್ದರು.
ಈ ಸಮಯದಲ್ಲಿ ಪವಾಡವೆಂಬಂತೆ ಉಸಿರಾಡುತ್ತಾ ದೀಪಾ ಮೇಲೆದ್ದಳು. ಸುತ್ತಮುತ್ತ ಕುಳಿತ್ತಿದ್ದವರೆಲ್ಲಾ ಆ ದೃಶ್ಯ ನೋಡಿ ಶಾಕ್ ಆದರು. ಇದೇನಪ್ಪಾ ಅಂತ ಗೊಂದಲಕ್ಕೆ ಸಿಲುಕಿದರು. ಮೇಲೆದ್ದ ದೀಪಾಳನ್ನು ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ದೀಪಾ ಆರೋಗ್ಯವಾಗಿದ್ದಾರೆಂದು ವೈದ್ಯರು ತಳಿಸಿದ್ದಾರೆ. ದೀಪಾ ಪ್ರಕರಣದ ಬೆನ್ನಲ್ಲೇ ವೈದ್ಯರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಜೀವಂತವಾಗಿರುವ ಮನೆಯ ಮಗಳನ್ನು ಅಂತ್ಯಕ್ರೀಯೆ ನಡೆಸುತ್ತಿದ್ದೇವು ಅಂತಾ ಮನೆಯವರು ವೈದ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.