ಭಾನುವಾರ, ಏಪ್ರಿಲ್ 27, 2025
HomeBreakingಮಂಗಳೂರಲ್ಲಿ ಮತ್ತೆ ವಿವಾದಿತ ಗೋಡೆ ಬರಹ : ಪೊಲೀಸರ ನಿದ್ದೆಗೆಡಿಸಿದ ಕಿಡಿಗೇಡಿಗಳ ಕೃತ್ಯ

ಮಂಗಳೂರಲ್ಲಿ ಮತ್ತೆ ವಿವಾದಿತ ಗೋಡೆ ಬರಹ : ಪೊಲೀಸರ ನಿದ್ದೆಗೆಡಿಸಿದ ಕಿಡಿಗೇಡಿಗಳ ಕೃತ್ಯ

- Advertisement -

ಮಂಗಳೂರು : ಕಳೆದೆರಡು ದಿನಗಳ ಹಿಂದೆಯಷ್ಟೇ ಉಗ್ರರ ಪರ ಗೋಡೆ ಬರಹ ರಾರಾಜಿಸಿದ ಬೆನ್ನಲ್ಲೇ, ಇದೀಗ ಮಂಗಳೂರಿನ ಮತ್ತೊಂದು ಕಡೆಯಲ್ಲಿ ವಿವಾದಾತ್ಮಕ ಗೋಡೆ ಬರಹವನ್ನು ಬರೆಯಲಾಗಿದೆ.

ನಗರದ ಕೋರ್ಟ್ ರಸ್ತೆಯಲ್ಲಿರುವ ಹಳೆಯ ಪೊಲೀಸ್ ಔಟ್ ಪೋಸ್ಟ್ ನ ಗೋಡೆಯ ಮೇಲೆ ಉರ್ದು ಭಾಷೆಯಲ್ಲಿ ಪ್ರವಾದಿಗಳಿಗೆ ಕೋಪ ಬಂದರೆ ಒಂದೆ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂಬ ಅರ್ಥದಲ್ಲಿ ಗೋಡೆ ಬರಹವನ್ನು ಬರೆಯಲಾಗಿದೆ. ನಗರದಲ್ಲಿ ಎರಡನೇ ಬಾರಿಗೆ ಗೋಡೆ ಬರಹ ರಾರಾಜಿಸಿರುವ ಬೆನ್ನಲ್ಲೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಗಣಿಸಿದ್ದಾರೆ.

ಈ ಹಿಂದೆ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ನ ಗೋಡೆಯ ಮೇಲೆ ಉಗ್ರರ ಪರವಾಗಿ ಗೋಡೆ ಬರಹವನ್ನು ಬರೆಯಲಾಗಿತ್ತು. ನಂತರದಲ್ಲಿ ಪೊಲೀಸರು ಗೋಡೆ ಬರಹಕ್ಕೆ ಬಣ್ಣ ಬಳಿಯುವ ಕಾರ್ಯವನ್ನು ಮಾಡಿದ್ದರು. ಇದೀಗ ಎರಡನೇ ಬಾರಿಗೆ ಗೋಡೆ ಬರಹ ಕಾಣಿಸಿಕೊಂಡಿದೆ. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಕಲೆ ಹಾಕುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular