ಸೋಮವಾರ, ಏಪ್ರಿಲ್ 28, 2025
HomeBreakingಮಾಸ್ಕ್‌ ಧರಿಸದನ್ನು ತಪಾಸಣೆ ಮಾಡಿದಾಗ ಪತ್ತೆಯಾಯ್ತು ನಕಲಿ ನೋಟುಗಳ ಜಾಲ!

ಮಾಸ್ಕ್‌ ಧರಿಸದನ್ನು ತಪಾಸಣೆ ಮಾಡಿದಾಗ ಪತ್ತೆಯಾಯ್ತು ನಕಲಿ ನೋಟುಗಳ ಜಾಲ!

- Advertisement -

ಬೆಂಗಳೂರು : ಮಾಸ್ಕ್ ಧರಿಸದವರ ವಿರುದ್ದ ಸಿಲಿಕಾನ್ ಸಿಟಿಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಕಾರಿನಲ್ಲಿ ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿದ್ದವರನ್ನು ತಪಾಸಣೆಗೆ ಒಳಪಡಿಸಿದಾಗ ನಕಲಿ ನೋಟು ಜಾಲವೊಂದು ಪತ್ತೆಯಾಗಿದೆ.

ತಮಿಳುನಾಡಿನಿಂದ ಬೆಂಗಳೂರಿಗೆ ನಕಲಿ ನೋಟುಗಳ ಚಲಾವಣೆಗೆ ಮತ್ತು ವಂಚನೆಗೆ ಬಂದಿದ್ದ ಮೂವರು ಖದೀಮರು, ಮಾಸ್ಕ್‌ ಧರಿಸದೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಚೆನ್ನೈನ ಎಸ್‌. ಸುಮನ್‌ (36), ತಿರುವಳ್ಳೂರಿನ ದೇವರಾಜನ್‌ (31) ಹಾಗೂ ಎಂ. ಮುನಿಶೇಖರ್‌ (29) ಬಂಧಿತರು. ಇವರಿಂದ 2,000 ರೂ. ಮುಖಬೆಲೆಯ 389 ನೋಟುಗಳು, (7.78 ಲಕ್ಷ ರೂ.). 2,000 ರೂ. ಅಳತೆಯ ಬಿಳಿ ಬಣ್ಣದ ಎರಡು ಬಂಡಲ್‌ ಪೇಪರ್‌ಗಳು, 500 ರೂ. ಮತ್ತು 2,000 ರೂ. ಅಳತೆಯ ಕಪ್ಪು ಬಣ್ಣದ ಪೇಪರ್‌ಗಳ ತಲಾ ಎರಡು ಬಂಡಲ್‌ಗಳು ಮತ್ತು ಒಂದು ಕಾರನ್ನು ಶಪಡಿಸಿಕೊಳ್ಳಲಾಗಿದೆ.

ಬಿಟಿಎಂ ಲೇಔಟ್‌ 29ನೇ ಮುಖ್ಯರಸ್ಕೆಯಲ್ಲಿ ಮಾಸ್ಕ್‌ ಧರಿಸದೆ ಓಡಾಡುವವರನ್ನು ಗುರುತಿಸಿ ಕೇಸ್‌ ದಾಖಲಿಸಲು ಪ್ರೊಬೆಷನರಿ ಪಿಎಸ್‌ಐ ರಾಜಕುಮಾರ್‌ ಜೋಡಟ್ಟಿ ಮತ್ತು ಹೆಡ್‌ ಕಾನ್ಸ್‌ಟೇಬಲ್‌ ಎಚ್‌. ಪ್ರಮೋದ್‌ ನಿಂತಿದ್ದರು. ಸಂಜೆ 6 ಗಂಟೆಗೆ ತಮಿಳುನಾಡು ನೋಂದಣಿ ಸಂಖ್ಯೆಯ ಕಾರೊಂದು ಆಗಮಿಸಿತು. ಅದರಲ್ಲಿ ಕುಳಿತವರು ಮಾಸ್ಕ್‌ ಧರಿಸಿರಲಿಲ್ಲ. ಹೀಗಾಗಿ, ಪೊಲೀಸರು ಕಾರು ತಡೆದು ನಿಲ್ಲಿಸಿ ಮಾಸ್ಕ್‌ ಧರಿಸದಿರುವುದನ್ನು ಪ್ರಶ್ನಿಸಿದ್ದಾರೆ.

ಮಾಸ್ಕ್‌ ಕುರಿತು ಪ್ರಶ್ನಿಸುವ ವೇಳೆ ಕಾರಿನ ಡ್ಯಾಷ್‌ ಬೋರ್ಡ್‌ನಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳ ಕಂತೆಯನ್ನು ಚೀಲದಲ್ಲಿ ಇಟ್ಟಿರುವುದು ಗಮನಕ್ಕೆ ಬಂದಿದೆ. ಎಚ್ಚೆತ್ತ ಪೊಲೀಸರು, ಹಣದ ಹಿನ್ನೆಲೆ ಅರಿಯಲು ವಿಚಾರಣೆ ನಡೆಸಿದಾಗ ಆರೋಪಿಗಳು ತಡಬಡಾಯಿಸಿದ್ದಾರೆ. ನಂತರ ಹಣದ ಬಂಡಲ್‌ ಕೈಗೆತ್ತಿಕೊಂಡಾಗ ಕೈಗೆ ಮಸಿ ಅಂಟಿಕೊಂಡಿದೆ. ಕೂಡಲೇ ಮೂವರು ಆರೋಪಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ನಕಲಿ ನೋಟಿನ ಜಾಲ ಬೆಳಕಿಗೆ ಬಂದಿದೆ.

ಆರೋಪಿಗಳು ನಗರದಲ್ಲಿ ನಕಲಿ ನೋಟುಗಳ ಚಲಾವಣೆಗೆ ಯತ್ನಿಸುತ್ತಿದ್ದರು. ಅಲ್ಲದೆ, ಯಾರಾದರೂ ಅಮಾಯಕರು ಸಿಕ್ಕರೆ ದಿಢೀರ್‌ ಹಣ ಮಾಧಿಡುವ ಟ್ರಿಕ್ಸ್‌ ತೋರಿಸಿಕೊಡುವುದಾಗಿ ವಂಚನೆಗೆ ಪ್ಲಾನ್‌ ಮಾಡಿದ್ದರು ಎಂದು ಪೊಲೀಸ್‌ ಅಧಿಕಾರಿಯೊಧಿಬ್ಬರು ತಿಳಿಸಿದರು. ನೀರಿ ನಲ್ಲಿ ಕಪ್ಪು ಬಣ್ಣ, ಮಸಿ ಅಂಟಿಸಿರುವ ನೋಟುಗಳನ್ನು ಹಾಕಿ ತೆಗೆದರೆ ಅವು ಹೊಸ ನೋಟುಗಳಾಗಿ ಪರಿವರ್ತನೆಯಾಗುತ್ತವೆ ಎಂದು ಯಾಮಾರಿಸುತ್ತಿದ್ದರು. ಒಂದು ಅಸಲಿ ನೋಟಿಗೆ ಮಸಿ ಅಂಟಿಸಿ ನೀರಿಗೆ ಹಾಕಿ ತೆಗೆದು ತೋರಿಸಿ ವಿಶ್ವಾಸ ಗಳಿಸುತ್ತಿದ್ದರು. ನಂತರ ಬಿಳಿ ಹಾಳೆಗೆ ಮಸಿ ಅಂಟಿಸಿದ್ದ ಬಂಡಲ್‌ ನೀಡಿ ಒಂದಷ್ಟು ಹಣ ಪಡೆದು ಪರಾರಿಯಾಗುತ್ತಿದ್ದರು ಎಂದು ಅಧಿಕಾರಿ ತಿಳಿಸಿದರು.

ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಆರೋಪಿಗಳು ಈ ಹಿಂದೆ ಇದೇ ರೀತಿ ವಂಚನೆ ಮತ್ತು ನಕಲಿ ನೋಟುಗಳ ಚಲಾವಣೆ ಮಾಡಿರುವ ಕುರಿತು ಸದ್ಯಕ್ಕೆ ಮಾಹಿತಿ ಇಲ್ಲ. ತನಿಖೆ ನಡೆಯುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಮಹದೇವ್‌ ತಿಳಿಸಿದರು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular