ಆಯಮ್ಮ ಏನು ಕೆಲಸ ಮಾಡಲ್ಲ ಬಿಡಿ….! ಸಂಸದೆ ಸುಮಲತಾ ವಿರುದ್ಧ ಸಂಸದ ಪ್ರತಾಪ್ ಸಿಂಹ ಟೀಕೆ…!!

ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗೋ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪಸಿಂಹ್ ಇದೀಗ ಮಂಡ್ಯ ಸಂಸದೆ ಸುಮಲತಾ ವಿರುದ್ಧ ಲಘುವಾಗಿ ಮಾತನಾಡುವ ಮೂಲಕ ಅಂಬಿ ಅಭಿಮಾನಿಗಳು ಆಕ್ರೋಶಕ್ಕೆ ತುತ್ತಾಗಿದ್ದಾರೆ. ಸುಮಲತಾ ಅವರ ವಿರುದ್ಧ ಏಕವಚನದಲ್ಲಿ ಪ್ರತಾಪಸಿಂಹ್ ನಡೆಸಿರೋ ವಾಗ್ದಾಳಿ ವಿವಾದ ಸೃಷ್ಟಿಸಿದೆ.

ಮಂಡ್ಯ ಜಿಲ್ಲೆಯ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಆಯಮ್ಮ ಏನು ಕೆಲಸ ಮಾಡೋದಿಲ್ಲ. ಸುಮ್ನೇ ಆಯಮ್ಮ ದೇವೇಗೌಡರ್ ಕುಟುಂಬದ ವಿರುದ್ಧ ಇದ್ದಿದ್ದರಿಂದ ಗೆಲ್ಲಿಸಿದ್ವಿ ಎಂದು ಟೀಕಿಸಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿಯ ವೇಳೆ ಅಧಿಕಾರಿಯೊಬ್ಬರ ಜೊತೆ ಮಾತನಾಡುವ ವೇಳೆ ಸಂಸದ ಪ್ರತಾಪ್ ಸಿಂಹ್,  ಆಯಮ್ಮ ಏನು ಕೆಲಸ ಮಾಡೋದಿಲ್ಲ ಎಂದು ಬಹಿರಂಗವಾಗಿ ಎಲ್ಲರ ಸಮ್ಮುಖದಲ್ಲಿ ಮಾತನಾಡಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಅಧಿಕಾರಿಯೊಬ್ಬರು ಸಂಸದೆ ಸುಮಲತಾ ಏನು ಕೆಲಸ ಮಾಡಿಕೊಡುವುದಿಲ್ಲ ಎಂದು ಹೇಳಿದಾಗ ಸಂಸದ ಪ್ರತಾಪ್ ಸಿಂಹ್, ಅಧಿಕಾರಿ ಪರವಾಗಿ ಮಾತನಾಡುತ್ತಾ, ಆಯಮ್ಮ ಯಾರಿಗೂ ಏನು ಕೆಲಸ ಮಾಡಿ ಕೊಡಲ್ಲ ಬಿಡಿ ಎಂದು ಹೇಳಿದ್ದಾರೆ. ಮಂಡ್ಯ ತಾಲೂಕಿನ ಯಲಿಯೂರು ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡುವ ವೇಳೆ ಪ್ರತಾಪ್ ಸಿಂಹ್ ಹೀಗೆ ಹೇಳಿದ್ದು ವಿವಾದ ಸೃಷ್ಟಿಯಾಗಿದೆ.

ಪ್ರತಾಪ್ ಸಿಂಹ್ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸುಮಲತಾ ಹಾಗೂ ಅಂಬರೀಶ್ ಅಭಿಮಾನಿಗಳು ಸಂಸದ ಪ್ರತಾಪ್ ಸಿಂಹ್ ವಿರುದ್ಧ ತಿರುಗಿ ಬಿದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪ್ರತಾಪ್ ಸಿಂಹ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ ವೈಯಕ್ತವಾಗಿಯೂ ಟೀಕೆ ಮುಂದುವರಿಸಿದ್ದಾರೆ.

Comments are closed.