ಸೋಮವಾರ, ಏಪ್ರಿಲ್ 28, 2025
HomeBreakingಆರ್.ಎಸ್.ಎಸ್ ನತ್ತ ವಾಲಿದ್ರಾ ಬಾಲಿವುಡ್ ಹಿರಿಯ ನಟ…! ಕುತೂಹಲ ಕೆರಳಿಸಿದ ಮೋಹನ್ ಭಾಗವತ್ - ದಾದಾ...

ಆರ್.ಎಸ್.ಎಸ್ ನತ್ತ ವಾಲಿದ್ರಾ ಬಾಲಿವುಡ್ ಹಿರಿಯ ನಟ…! ಕುತೂಹಲ ಕೆರಳಿಸಿದ ಮೋಹನ್ ಭಾಗವತ್ – ದಾದಾ ಭೇಟಿ…!!

- Advertisement -

ನವದೆಹಲಿ : ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಬಾಲಿವುಡ್ ನ ಹಿರಿಯ ನಟ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಮಿಥುನ್ ಚಕ್ರವರ್ತಿಯನ್ನು ಭೇಟಿ ಮಾಡಿದ್ದಾರೆ. ನವದೆಹಲಿಯ ಮಿಥುನ್ ಚಕ್ರವರ್ತಿ ನಿವಾಸದಲ್ಲಿ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರುವ ಮುನ್ಸೂಚನೆ ದೊರೆತಂತಾಗಿದೆ.

ಪಶ್ಚಿಮಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದೆ. ಇನ್ನೊಂದು ವಾರದಲ್ಲಿ ಪಶ್ಚಿಮ ಬಂಗಾಳ ಚುನಾವಣೆ ದಿನಾಂಕ ಘೋಷಣೆಯಾಗಲಿದೆ.

ಮೋಹನ್ ಭಾಗವತ್ ಭೇಟಿ ಹಿನ್ನೆಲೆಯಲ್ಲಿ ಮತ್ತೆ ಮಿಥುನ್ ಚಕ್ರವರ್ತಿ ಚುನಾವಣೆಗೆ ಇಳಿತಾರಾ ಅನ್ನೋ ಪ್ರಶ್ನೆ ಸೃಷ್ಟಿಯಾಗಿದೆ. ಮಿಥುನ್ ಚಕ್ರವರ್ತಿ ಹಾಗೂ ಮೋಹನ್ ಭಾಗವತ್ ಭೇಟಿಯಿಂದ ಮತ್ತೆ ಮಿಥುನ್ ದಾದಾ ಬಿಜೆಪಿ ಯಿಂದ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅನ್ನೋ ಚರ್ಚೆ ಆರಂಭವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ಮಮತಾ ಬ್ಯಾನರ್ಜಿ ಮೋದಿ ವಿರುದ್ಧ ಕಿಡಿಕಾರುತ್ತಿದ್ದಾರೆ.

ಮಿಥುನ್ ಚಕ್ರವರ್ತಿಗೆ ಪಶ್ಚಿಮ ಬಂಗಾಳದಲ್ಲಿ ಅಪಾರ ಪ್ರಮಾಣದ ಅಭಿಮಾನಿ ಬಳಗವಿದ್ದು ಈ ಅಭಿಮಾನವನ್ನು ಮತವಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಆರ್.ಎಸ್.ಎಸ್ ಬಿಜೆಪಿಯ ಪರವಾಗಿ ಸರ್ಕಸ್ ಮಾಡುತ್ತಿದೆ ಎನ್ನಲಾಗುತ್ತಿದೆ.

ಆದರೆ ಈ ಯಾವ ಉಹಾಪೋಹವನ್ನು ಮಿಥುನ್ ಚಕ್ರವರ್ತಿ ಒಪ್ಪಿಕೊಂಡಿಲ್ಲ. ಬದಲಾಗಿ ನನ್ನ ಹಾಗೂ ಮೋಹನ್ ಭಾಗವತ್ ನಡುವೆ ದೈವಿ ಸಂಬಂಧವಿದೆ. ಹಿಂದೊಮ್ಮೆ ನಾನು ಅವರನ್ನು ಭೇಟಿ ಮಾಡಿದ್ದೆ. ಮನೆಗೆ ಅಹ್ವಾನಿಸಿದ್ದೆ . ಹೀಗಾಗಿ ಬಂದಿದ್ದಾರೆ ಎಂದಿದ್ದಾರೆ. 2014 ರಲ್ಲಿ ತೃಣಮೂಲ ಕಾಂಗ್ರೆಸ್ ನಿಂದ ರಾಜ್ಯ ಸಭೆಗೆ ಆಯ್ಕೆಯಾಗಿದ್ದ ಮಿಥುನ್ ಚಕ್ರವರ್ತಿ ಬಳಿಕ2016 ರಲ್ಲಿ ರಾಜೀನಾಮೆ ನೀಡಿದ್ದರು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular