ಕನ್ನಡ ಚಿತ್ರರಂಗ ಎಂದಾಕ್ಷಣ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಗೆ ಹೆಸರು ನೆನಪಾಗುತ್ತದೆ. ಆದರೆ ಗೌರವ ಸಲ್ಲಿಕೆ, ಪುತ್ಥಳಿ ಅನಾವರಣ ಹಾಗೂ ನಾಮಫಲಕದ ವಿಷಯ ಬಂದಾಗ ಡಾ.ವಿಷ್ಣುವರ್ಧನ್ ಅವರನ್ನು ನಿರ್ಲಕ್ಷಿಸಿ ತಾರತಮ್ಯ ತೋರಲಾಗುತ್ತಿದೆ ಎಂದು ನಟ ಅನಿರುದ್ಧ ಆರೋಪಿಸಿದ್ದು, ಅಸಮಧಾನ ತೋಡಿಕೊಂಡಿದ್ದಾರೆ.

ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿರೋ ಅನಿರುದ್ಧ, ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಪದೇ ಪದೇ ಡಾ.ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಲಾಗುತ್ತಿದೆ. ವಾಣಿಜ್ಯಮಂಡಳಿಯಲ್ಲಿ ವಿಷ್ಣು ಪುತ್ಥಳಿ ಇಡಲು ನಿರಾಕರಿಸುತ್ತಾರೆ. ಕಲಾವಿದರ ಭವನಕ್ಕೆ ವಿಷ್ಣು ಹೆಸರಿಡಲು ಸಿದ್ಧವಿಲ್ಲ. ಯಾಕೆ ಈ ರೀತಿ ತಾರತಮ್ಯ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಡಾ.ರಾಜ್ ಕುಮಾರ್ ಹಾಗೂ ಅಂಬರೀಶ್ ಅವರನ್ನು ಇಡಲಾಗಿದೆ. ಇದಕ್ಕೆ ಸಂತೋಷವಿದೆ. ಆದರೆ ಡಾ.ವಿಷ್ಣುವರ್ಧನ್ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಕಲಾವಿದರ ಸಭಾಭವನದಲ್ಲಿ ಡಾ.ವಿಷ್ಣು ಹೆಸರು ಇರಬೇಕಲ್ಲವೇ ಎಂದು ಅನಿರುದ್ಧ ಕಿಡಿಕಾರಿದ್ದಾರೆ.
https://m.facebook.com/story.php?story_fbid=4002639023185696&id=100003189122576
ಸಭಾಭವನಕ್ಕೆ ಯಾಕೆ ಹೆಸರು ಇಟ್ಟಿಲ್ಲ ಎಂದ್ರೇ ಅವರು ಮಂಡಳಿ ಅಧ್ಯಕ್ಷರಾಗಿರಲಿಲ್ಲ ಎನ್ನಬಹುದು.ಆದರೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಸಭೆಯಲ್ಲಿ ವಿಷ್ಣು ನಾಯಕತ್ವ ವಹಿಸಿದ್ದರು.

ಅನೇಕ ಪ್ರಮುಖ ಸಭೆಗಳ ಅಧ್ಯಕ್ಷರಾಗಿ ಮುಂಚೂಣಿಯಲ್ಲಿದ್ದರು. ಆದರೂ ಈ ತಾರತಮ್ಯ ಸರಿಯೇ ಎಂದು ನೋವಿನಿಂದ ಪ್ರಶ್ನಿಸಿದ್ದಾರೆ.

ವಾಣಿಜ್ಯ ಮಂಡಳಿಯ ಎದುರು ಡಾ.ವಿಷ್ಣು ಪುತ್ಥಳಿ ಇಡಬೇಕೆಂದು ಮನವಿ ಮಾಡಿದ್ದೆ.ಆದರೆ ಹಾಗೆಲ್ಲ ಇಡಲು ಸಾಧ್ಯವಿಲ್ಲ. ಅದಕ್ಕೆ ಸಹಿಸಂಗ್ರಹಿಸಿ ತಂದುಕೊಡಿ ಎಂದರು ಅದನ್ನು ಮಾಡಿದ್ದೇನೆ. ಆದರೂ ಪುತ್ಥಳಿ ಇಟ್ಟಿಲ್ಲ . ಡಾ. ವಿಷ್ಣುಗೆ ಮಾತ್ರ ಸೂಕ್ತಸ್ಥಾನಮಾನ ನೀಡಲು ಯಾರು ಮನಸ್ಸು ಮಾಡುತ್ತಿಲ್ಲ ಎಂದು ನೊಂದು ಮಾತನಾಡಿದ್ದಾರೆ.