ಮಂಗಳವಾರ, ಜೂನ್ 17, 2025
HomeBreakingVishnuvardhan: ಕಲಾವಿದರ ಭವನ ಸೇರಿ ಎಲ್ಲೆಡೆ ವಿಷ್ಣುಗೆ ಅಗೌರವ…! ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ನಟ...

Vishnuvardhan: ಕಲಾವಿದರ ಭವನ ಸೇರಿ ಎಲ್ಲೆಡೆ ವಿಷ್ಣುಗೆ ಅಗೌರವ…! ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ನಟ ಅನಿರುದ್ಧ…!!

- Advertisement -


ಕನ್ನಡ ಚಿತ್ರರಂಗ ಎಂದಾಕ್ಷಣ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಗೆ ಹೆಸರು ನೆನಪಾಗುತ್ತದೆ. ಆದರೆ ಗೌರವ ಸಲ್ಲಿಕೆ, ಪುತ್ಥಳಿ ಅನಾವರಣ ಹಾಗೂ ನಾಮಫಲಕದ ವಿಷಯ ಬಂದಾಗ ಡಾ.ವಿಷ್ಣುವರ್ಧನ್ ಅವರನ್ನು ನಿರ್ಲಕ್ಷಿಸಿ ತಾರತಮ್ಯ ತೋರಲಾಗುತ್ತಿದೆ ಎಂದು ನಟ ಅನಿರುದ್ಧ ಆರೋಪಿಸಿದ್ದು, ಅಸಮಧಾನ ತೋಡಿಕೊಂಡಿದ್ದಾರೆ.

B1 8

ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿರೋ ಅನಿರುದ್ಧ, ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಪದೇ ಪದೇ ಡಾ.ವಿಷ್ಣುವರ್ಧನ್ ಅವರಿಗೆ ಅವಮಾನ ಮಾಡಲಾಗುತ್ತಿದೆ. ವಾಣಿಜ್ಯಮಂಡಳಿಯಲ್ಲಿ ವಿಷ್ಣು ಪುತ್ಥಳಿ ಇಡಲು ನಿರಾಕರಿಸುತ್ತಾರೆ. ಕಲಾವಿದರ ಭವನಕ್ಕೆ ವಿಷ್ಣು ಹೆಸರಿಡಲು ಸಿದ್ಧವಿಲ್ಲ. ಯಾಕೆ ಈ ರೀತಿ ತಾರತಮ್ಯ ಎಂದು ಪ್ರಶ್ನಿಸಿದ್ದಾರೆ.

B2 5

ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಡಾ.ರಾಜ್ ಕುಮಾರ್ ಹಾಗೂ ಅಂಬರೀಶ್ ಅವರನ್ನು ಇಡಲಾಗಿದೆ. ಇದಕ್ಕೆ ಸಂತೋಷವಿದೆ. ಆದರೆ ಡಾ.ವಿಷ್ಣುವರ್ಧನ್ ಅವರಿಗೆ ಸಿಗಬೇಕಾದ ಗೌರವ ಸಿಕ್ಕಿಲ್ಲ. ಕಲಾವಿದರ ಸಭಾಭವನದಲ್ಲಿ ಡಾ.ವಿಷ್ಣು ಹೆಸರು ಇರಬೇಕಲ್ಲವೇ ಎಂದು ಅನಿರುದ್ಧ ಕಿಡಿಕಾರಿದ್ದಾರೆ.

https://m.facebook.com/story.php?story_fbid=4002639023185696&id=100003189122576

ಸಭಾಭವನಕ್ಕೆ ಯಾಕೆ ಹೆಸರು ಇಟ್ಟಿಲ್ಲ ಎಂದ್ರೇ ಅವರು ಮಂಡಳಿ ಅಧ್ಯಕ್ಷರಾಗಿರಲಿಲ್ಲ ಎನ್ನಬಹುದು.ಆದರೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಸಭೆಯಲ್ಲಿ ವಿಷ್ಣು ನಾಯಕತ್ವ ವಹಿಸಿದ್ದರು.

B5 4

ಅನೇಕ ಪ್ರಮುಖ ಸಭೆಗಳ ಅಧ್ಯಕ್ಷರಾಗಿ ಮುಂಚೂಣಿಯಲ್ಲಿದ್ದರು. ಆದರೂ ಈ ತಾರತಮ್ಯ ಸರಿಯೇ ಎಂದು ನೋವಿನಿಂದ ಪ್ರಶ್ನಿಸಿದ್ದಾರೆ.

B4 4

ವಾಣಿಜ್ಯ ಮಂಡಳಿಯ ಎದುರು ಡಾ.ವಿಷ್ಣು ಪುತ್ಥಳಿ ಇಡಬೇಕೆಂದು ಮನವಿ ಮಾಡಿದ್ದೆ.ಆದರೆ ಹಾಗೆಲ್ಲ ಇಡಲು ಸಾಧ್ಯವಿಲ್ಲ. ಅದಕ್ಕೆ ಸಹಿಸಂಗ್ರಹಿಸಿ ತಂದುಕೊಡಿ ಎಂದರು ಅದನ್ನು ಮಾಡಿದ್ದೇನೆ. ಆದರೂ ಪುತ್ಥಳಿ ಇಟ್ಟಿಲ್ಲ . ಡಾ. ವಿಷ್ಣುಗೆ ಮಾತ್ರ ಸೂಕ್ತಸ್ಥಾನಮಾನ ನೀಡಲು ಯಾರು ಮನಸ್ಸು ಮಾಡುತ್ತಿಲ್ಲ ಎಂದು ನೊಂದು ಮಾತನಾಡಿದ್ದಾರೆ.

RELATED ARTICLES

Most Popular