ಸೋಮವಾರ, ಜೂನ್ 16, 2025
HomeBreakingಅಪರೂಪದ ಪೋಟೋಗೆ ಥ್ಯಾಂಕ್ಸ್...! ಚಿರು ಬಾಲ್ಯವನ್ನು ಕಣ್ತುಂಬಿಕೊಂಡು ಭಾವುಕರಾದ ಮೇಘನಾರಾಜ್...!!

ಅಪರೂಪದ ಪೋಟೋಗೆ ಥ್ಯಾಂಕ್ಸ್…! ಚಿರು ಬಾಲ್ಯವನ್ನು ಕಣ್ತುಂಬಿಕೊಂಡು ಭಾವುಕರಾದ ಮೇಘನಾರಾಜ್…!!

- Advertisement -

ಚಿರಂಜೀವಿ ಸರ್ಜಾ ದೈಹಿಕವಾಗಿ ಸ್ಯಾಂಡಲ್‌ ವುಡ್, ತನ್ನ ಕುಟುಂಬ,ಅಭಿಮಾನಿಗಳನ್ನು ಅಗಲಿದ್ದರೂ ಎಲ್ಲರ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ. ನಿನ್ನೆಯಷ್ಟೇ ಅನು ಪ್ರಭಾಕರ್ ಹಂಚಿಕೊಂಡ ಪೋಟೋ ಇದಕ್ಕೆ ಸಾಕ್ಷಿ. ಈ ಸುಂದರ ಪೋಟೋಗೆ ಮೇಘನಾ ರಾಜ್ ಹೃದಯಸ್ಪರ್ಶಿ ಧನ್ಯವಾದ ಹೇಳಿದ್ದಾರೆ.

ಚಿರು ಎಲ್ಲಿರುತ್ತಾರೋ ಅಲ್ಲಿ ಸೆಲಿಬ್ರೇಶನ್ ಅಂತ ಚಿರಂಜೀವಿ ಸರ್ಜಾ ಹೇಳಿದ್ದರು. ಈ ಮಾತು ನಿಜವಾಗಿತ್ತು. ಚಿರು ಸ್ನೇಹಿತರ ಪಾಲಿಗೆ ಆಪ್ತ ರಾಗಿದ್ದರು. ಹೀಗಾಗಿ ಅವರು ಅಗಲಿ ಆರು ತಿಂಗಳು ಕಳೆದರೂ ಇನ್ನೂ ಚಿರು ನೆನಪಿನ ಬುತ್ತಿ ಹಸಿರಾಗೇ ಇದೆ.

ಅನುಪ್ರಭಾಕರ್ ಚಿರು ಸ್ನೇಹಿತೆ ಮಾತ್ರವಲ್ಲ ಸಂಬಂಧಿ ಕೂಡ. ಚಿರು ಜೊತೆ ಬಾಲ್ಯ ಕಳೆದ ಅನು ನಿನ್ನೆ ಆ ನೆನಪಿನ ಪೋಟೋ ಹಂಚಿಕೊಂಡು ನೀ ಎಲ್ಲಿದ್ದರೂ ಸುಖವಾಗಿ, ಶಾಂತವಾಗಿ ಇದ್ದೀಯಾ ಎಂಬ ನಂಬಿಕೆ ಇದೆ ಎಂದಿದ್ದರು.

ಅನು ಪ್ರಭಾಕರ್ ಹಾಕಿದ ಈ ಮನಮುಟ್ಟುವ ಪೋಸ್ಟ್ ಗೆ ಚಿರು ಪತ್ನಿ ಮೇಘನಾರಾಜ್ ಧನ್ಯವಾದ ಹೇಳಿದ್ದು, ಅತ್ಯಂತ ಅಮೂಲ್ಯವಾದ ಪೋಟೋ ಶೇರ್ ಮಾಡಿದ ಅನು ಪ್ರಭಾಕರ್ ಮುಖರ್ಜಿಗೆ ಧನ್ಯವಾದ ಎಂದಿದ್ದಾರೆ.

ಅರ್ಜುನ್ ಸರ್ಜಾ ನಿಶ್ಚಿತಾರ್ಥದ ವೇಳೆ ಮಗುವಾಗಿದ್ದ ಚಿರು ಹಾಗೂ ಅನುವಿನ ಪೋಟೋವನ್ನು ಅನು ಪ್ರಭಾಕರ್ ಹಂಚಿಕೊಂಡಿದ್ದರು.

ಇದಕ್ಕೆ ಸರ್ಜಾ ಕುಟುಂಬದ ಎಲ್ಲರೂ ಕಮೆಂಟ್ ಮಾಡಿದ್ದು ಐಶ್ವರ್ಯಾ ಅರ್ಜುನ್, ಹಾರ್ಟ್ ಇಮೋಜಿ ಬಳಸಿದ್ದರು.

ಚಿರು ನಿಧನರಾಗಿ ೬ ತಿಂಗಳು ಕಳೆದಿದ್ದರೂ ಇನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಚಿರುವಿಗೆ ಸಂಬಂಧಿಸಿದ ನೂರಾರು ಪೋಟೋಗಳು, ಸುದ್ದಿಗಳು ಶೇರ್ ಆಗುತ್ತಲೇ ಇದ್ದು, ಅಭಿಮಾನಿಗಳಿಗೆ ಚಿರು ಇಲ್ಲೇ ಇದ್ದಾನೆ ಎಂಬ ಸಮಾಧಾನ ತರುತ್ತಿದೆ.

RELATED ARTICLES

Most Popular