ಮೇಘನಾ ರಾಜ್ ಸರ್ಜಾ….ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹೆಣ್ಣುಮಗಳು. ಯಾವುದೇ ವಿವಾದ,ಹಮ್ಮು-ಬಿಮ್ಮು ಇಲ್ಲದೇ ತನ್ನದೇ ಆದ ಅಸ್ತಿತ್ವ ಕಂಡುಕೊಂಡ ಮನೆಮಗಳಂತ ಈ ನಾಯಕಿ ನಟಿ ಬದುಕಿನಲ್ಲಿ ಮಾತ್ರ ಅತ್ಯಂತ ದುಃಖದ ಕ್ಷಣಗಳನ್ನು ಕಂಡು ನೊಂದು ಹೋದರು. ಸಧ್ಯ ತಾಯ್ತನ ಖುಷಿಯಲ್ಲಿರೋ ಮೇಘನಾ ಮತ್ತೆ ನಟನೆಗೆ ಮರಳುತ್ತಾರಾ ಇಲ್ಲವಾ ಅನ್ನೋ ಆತಂಕ ಅಭಿಮಾನಿಗಳಲ್ಲಿ ಕಾಡ್ತಿದೆ.

ಕನ್ನಡದ ಹಿರಿಯ ಪೋಷಕ ನಟ-ನಟಿ ದಂಪತಿಗಳಾದ ಸುಂದರ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿಗಳ ಪುತ್ರಿ ಮೇಘನಾ ರಾಜ್, 2009 ರಲ್ಲಿ ಮಲೆಯಾಳಂ ಚಿತ್ರ ಬೆಂಡುಅಪ್ಪರಾವ್ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟವರು. ಇದುವರೆಗೂ ತೆಲುಗು,ಮಲೆಯಾಳಂ ಹಾಗೂ ಕನ್ನಡದಲ್ಲಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

2019 ರಲ್ಲಿ ಇರುವುದೆಲ್ಲವ ಬಿಟ್ಟು ಚಿತ್ರದ ನಟನೆಗಾಗಿ ಬೆಸ್ಟ್ ಆಕ್ಸ್ಟ್ರೆಸ್ ಅವಾರ್ಡ್ ಕೂಡ ಪಡೆದಿದ್ದಾರೆ. ಅಷ್ಟೇ ಅಲ್ಲ ಮಲೆಯಾಳಂ ಅತಿ ಹೆಚ್ಚಿನ ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿಯೂ ಮೇಘನಾ ರಾಜ್ ಗಿದೆ. ಅತ್ಯಂತ ಮಹತ್ವಾಕಾಂಕ್ಷೆಯ ಹುಡುಗಿ ಮೇಘನಾ ರಾಜ್ ಒಂದಿಲ್ಲ ಒಂದು ದಿನ ಕನ್ನಡದಲ್ಲೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದರು.

2020 ಅವರ ಪಾಲಿಗೆ ಅದೃಷ್ಟದ ವರ್ಷವಾಗಬೇಕಿತ್ತು. ಯಾಕಂದ್ರೆ ಈ ವರ್ಷ ಅವರ ಅಭಿನಯದ ಸೆಲ್ಪೀ ಮಮ್ಮಿ, ಗೂಗಲ್ ಡ್ಯಾಡಿ ಹಾಗೂ ಬುದ್ಧಿವಂತ ಚಿತ್ರ ಬಿಡುಗಡೆಗಿತ್ತು. ಆದರೆ 2020 ಮಾತ್ರ ಅವರ ಪಾಲಿಗೆ ಅತ್ಯಂತ ಕೆಟ್ಟ ವರ್ಷವಾಗಿ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.

ಈ ಮಧ್ಯೆ ತಂದೆಯನ್ನು ಕಳೆದುಕೊಂಡಿರುವ ತಮ್ಮ ಪುಟಾಣಿ ಕಂದನನ್ನು ನೋಡಿಕೊಳ್ಳುವಲ್ಲಿ ಯಾವುದೇ ಕೊರತೆಯಾಗಬಾರದು ಎಂದು ಕೊಂಡಿರುವ ಮೇಘನಾ ಇದೇ ಕಾರಣಕ್ಕೆ ಚಿತ್ರರಂಗ ಹಾಗೂ ನಟನೆ ತೊರೆಯುತ್ತಾರೆ ಎಂದು ರೂಮರ್ ಗಳು ಹಬ್ಬಿವೆ. ಆದರೆ ಈ ಬಗ್ಗೆ ಮೇಘನಾ ಮಾತ್ರ ಇದುವರೆಗೂ ಏನು ಹೇಳಿಲ್ಲ. ಅಷ್ಟೇ ಅಲ್ಲ ಬಹುಷಃ ಈ ವಿಷಯದಲ್ಲಿ ಈಗ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸಮಂಜಸವೂ ಅಲ್ಲ ಅಂತಿರಬಹುದು.

ಆದರೆ ಈ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಮೇಘನಾ ರಾಜ್ ತಂದೆ ಸುಂದರ ರಾಜ್, ಮೇಘನಾ ಅಭಿನಯ ಮುಂದುವರೆಸು ತ್ತಾರೋ ಇಲ್ವೋ ನನಗೆ ಗೊತ್ತಿಲ್ಲ. ಅದು ಆಕೆಯ ಸ್ವಂತ ನಿರ್ಧಾರಕ್ಕೆ ಬಿಟ್ಟ ವಿಷಯ.ಆದರೆ ನನ್ನ ಪ್ರಕಾರ ಆಕೆ ಆಕ್ಟಿಂಗ್ ಮುಂದುವರೆಸ ಬೇಕು. ಯಾಕೆಂದರೇ ಕಲೆಗೆ ಯಾವತ್ತೂ ಸಾವಿರಬಾರದು ಎಂದಿದ್ದಾರೆ
