ರಾಜ್ಯದಲ್ಲಿ ಕೊರೊನಾ ಆರ್ಭಟ : ಇಂದೇ ನಿರ್ಧಾರವಾಗುತ್ತೆ ಲಾಕ್ ಡೌನ್ ನಿರ್ಧಾರ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸೆಮಿ ಲಾಕ್ ಡೌನ್ ಹೇರಿಕೆಯ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.


ಕೊರೊನಾ ನಿಯಂತ್ರಣಕ್ಕೆ ಶಾಲೆ, ಕಾಲೇಜುಗಳನ್ನು ಬಂದ್ ಮಾಡುವುದು, ಒಳಾಂಗಣ ಕಾರ್ಯಕ್ರಮ, ಈಜುಕೊಳ, ಜಿಮ್ ಗಳಿಗೆ ನಿರ್ಬಂಧ ಹೇರಿಕೆ ಮಾಡುವುದು ಸೇರಿದಂತೆ ಹಲವು ಸಲಹೆಗಳನ್ನು ಕೋವಿಡ್ ತಾಂತ್ರಿಕ ಸಮಿತಿ ನೀಡಿದ್ದು, ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.


ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಕೂಡ ಕಠಿಣ‌ ನಿರ್ಧಾರವನ್ನು ಕೈಗೊಳ್ಳುವ ಸೂಚನೆಯನ್ನು ನೀಡಿದ್ದಾರೆ. ಮುಂದಿನ ಎರಡು ವಾರಗಳ ಕಾಲ‌ ಸೆಮಿ‌ ಲಾಕ್ ಡೌನ್ ಹೇರಿಕೆಯ ಮಾತುಗಳು ಕೂಡ ಕೇಳಿಬರುತ್ತಿದೆ. ಒಂದೊಮ್ಮೆ ಕಠಿಣ ನಿರ್ಧಾರಗಳು ಜಾರಿಯಾದ್ರೆ ಜಾತ್ರೆ,‌‌ ಮದುವೆ, ಸಭೆ,‌ಸಮಾರಂಭಗಳಿಗೆ ಬ್ರೇಕ್ ಬೀಳಲಿದೆ‌. ಅಷ್ಟೇ ಅಲ್ಲಾ ಶಾಲೆ, ಕಾಲೇಜು, ಹಾಸ್ಟೇಲ್ ಗಳಿಗೂ ಬೀಗ ಬೀಳುವ ಸಾಧ್ಯತೆಯಿದೆ.

Comments are closed.