ಕೈಲಾಸ ಪರ್ವತದ ಹೆಸರು ಕೇಳಿದ್ರೇ ಸಾಕು ಎಲ್ಲರ ಉತ್ತರ ಒಂದೇ ಆಗಿರುತ್ತೆ. ಅದೇ ಶಿವನ ವಾಸಸ್ಥಾನ ಎಂದು. ಹೌದು ಹಿಂದಿನ ಕಾಲದಿಂದಲೂ ಭಾರತದ ಜನ ಕೈಲಾಸ ಪರ್ವತ ವನ್ನು ಶಿವನಿರುವ ಜಾಗ, ಈಶ್ವರನ ಮನೆ ಎಂದೇ ನಂಬಿಕೊಂಡು ಬಂದಿದ್ದಾರೆ. ಅಲ್ಲದೇ ಆ ಪರ್ವತವನ್ನು ಆರಾಧಿಸುತ್ತಿದ್ದಾರೆ. ಭಾರತದ ಪ್ರಸಿದ್ಧ ಗ್ರಂಥಗಳಾದ ರಾಮಾಯಣ, ಮಹಾಭಾರತದಲ್ಲೂ ಈ ಕೈಲಾಸ ಪರ್ವತದ ಉಲ್ಲೇಖ ವಿದೆ. ಅಲ್ಲದೇ ಸಾವಿರಾರು ವರ್ಷಗಳಿಂದ ಜನರು ಇಲ್ಲಿಗೆ ಯಾತ್ರೆಗೆಂದು ತೆರಳುತ್ತಾರೆ. ಕೈಲಾಸ ಪರ್ವತದ ಬಗ್ಗೆ ವಿಜ್ಞಾನಿಗಳು ಬಹಳಷ್ಟು ಸಂಶೋಧನೆ ಗಳನ್ನು ಮಾಡಿದ್ದಾರೆ. ಸಂಶೋಧನೆ ಗಳಿಂದ ಸಾಕಷ್ಟು ರಹಸ್ಯಗಳು ಬೆಳಕಿಗೆ ಬಂದಿದೆ.

ಮೌಂಟ್ ಕೈಲಾಶ್, ಮೌಂಟ್ ಮೇರು, ಸುಮೇರು, ಕೈಲಾಸ ಪರ್ವತ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಈ ಪರ್ವತ ಹಿಮಾಲಯ ಪರ್ವತ ಶ್ರೇಣಿಯಲ್ಲಿದೆ. ಇನ್ನೊಂದು ವಿಸ್ಮಯವೆಂದರೆ ಈ ಪರ್ವತ ಭೂಮಿಯ ಮಧ್ಯ ಭಾಗದಲ್ಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ರಚಿಸಲಾದ ಗ್ರಂಥ ಎಂದು ಪಾಶ್ಚಿಮಾತ್ಯರು, ಹದಿನಾಲ್ಕು ಸಾವಿರ ವರ್ಷಗಳ ಹಿಂದೆ ರಚಿತವಾಗಿದೆ ಎಂದು ಭಾರತೀಯರು ನಂಬಿರುಬ ಸೂರ್ಯ ಸಿದ್ದಾಂತ ಅನ್ನೋ ಖಗೋಳ ವಿಜ್ಞಾನದ ಗ್ರಂಥದ ಒಂದು ಶ್ಲೋಕದಲ್ಲಿ ಈ ಮೇರು ಪರ್ವತದ ಉಲ್ಲೇಖವಿದೆ. ಈ ಶ್ಲೋಕದಲ್ಲಿ ಇನ್ನೊಂದು ವಿಷಯವನ್ನು ಹೇಳಿದ್ದಾರೆ ಅದು ಈ ಪರ್ವತ ಬೂಮಂಡಲದ ಮಧ್ಯಭಾಗದಲ್ಲಿ ಇದೇ ಎಂದು.

ಇನ್ನು ಈ ಪರ್ವತ ಮೌಂಟ್ ಎವರೆಸ್ಟ್ಗಿಂತ ಏಳು ಸಾವಿರ ಅಡಿಗೂ ಎತ್ತರದಲ್ಲಿದೆ. ಈ ಪರ್ವತದ ಸಂಶೋಧನೆ ನಡೆಸಿದ ವಿಜ್ಞಾನಿಗಳು ಈ ಪರ್ವತದ ಬಗ್ಗೆ ವಿಚಿತ್ರ ಸಂಗತಿಗಳನ್ನು ಹೇಳುತ್ತಿದ್ದಾರೆ. ಅದರಲ್ಲಿ ಮೊದಲನೆಯದ್ದು ಈ ಪರ್ವತವನ್ನು ನಿರ್ದಿಷ್ಟ ಎತ್ತರಕಿಂತ ಹೆಚ್ಚು ಏರಿದರೆ ಮುನುಷ್ಯ ಹೆಚ್ಚು ವಯಸ್ಸಾದಂತೆ ಕಾಣುತ್ತಾರಂತೆ. ಕೈಲಾಸ ಪರ್ವತವನ್ನೇರಿದ್ರೆ ಉಗುರುಗಳು ವೇಗವಾಗಿ ಬೆಳಿಯುತ್ತವಂತೆ. ಕೂದಲು ವೇಗವಾಗಿ ಬೆಳೆಯುತ್ತೆ, ಚರ್ಮ ಸುಕ್ಕು ಗಟ್ಟುತ್ತೆ ಅಲ್ಲದೇ ದೇಹ ನಿತ್ರಾಣಗೊಳ್ಳುತ್ತಂತೆ. ವಿಜ್ಞಾನಿಗಳು ಹೇಳೋ ಪ್ರಕಾರ ಈ ಕೈಲಾಸ ಪರ್ವತ ಮಾನವ ನಿರ್ಮಿತ. ಅಲ್ಲದೇ ಇದರ ಜೊತೆ ಹಲವು ಚಿಕ್ಕ ಚಿಕ್ಕ ಪಿರಮಿಡ್ ಗಳು ಇಲ್ಲಿ ಹಿಂದಿನ ಪುರಾತನ ನಾಗರೀಕತೆಯ ಜನರು ನಿರ್ಮಿಸಿರುವುದು ಕಾಲಕ್ರಮೇಣ ಇದು ಪ್ರಕೃತಿ ನಿರ್ಮಿಸಿರುವಂತೆ ಭಾಸವಾಗುತ್ತಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೇ ಈ ಪರ್ವತದ ಸುತ್ತಮುತ್ತ ರೇಡಿಯೇಶನ್ ಇದೆ ಎನ್ನುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದಾರೆ. ಇನ್ನೊಂದು ವಿಚಿತ್ರ ಸಂಗತಿ ಎಂದರೆ ಕತ್ತಲ ನಿಶ್ಯಬ್ದ. ಮಧ್ಯರಾತ್ರಿ ಯಲ್ಲಿ ಈ ಪರ್ವತದ ಒಳಗಿನಿಂದ ಶಬ್ಧಗಳು ಕೇಳಿಬರುತ್ತವೆ. ಇದರ ಒಳಗೆ ಈಗಲೂ ಜನರು ಇದ್ದಾರೆ ಎಂದು ರಶ್ಯದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಕೈಲಾಸ ಪರ್ವತದ ಬಳಿ ಇನ್ನೊಂದು ಪರ್ವತವಿದೆ. ಇದು ಓಂ ಆಕಾರದಲ್ಲಿ ಗೊಚರಿಸುತ್ತೆ. ಅದೇ ಪರ್ವತ ಸೂರ್ಯ ಮುಳುಗುವ ಸಂದರ್ಭದಲ್ಲಿ ಸ್ವಸ್ತಿಕ್ ಆಕಾರದಲ್ಲಿ ಗೋಚರಿಸುತ್ತದೆ.

ಇನ್ನೂ ಪರ್ವತರೋಹಿಗಳ ಅನುಭವನ್ನು ಕೇಳಿದರೆ ಈ ಕೈಲಾಸ ಪರ್ವತದ ಬಳಿ ನಿಂತರೆ ತನ್ನಿಂದ ತಾನೇ ಕಣ್ಣಲ್ಲಿ ನೀರು ಬರುತ್ತದೆ. ಆಧ್ಯಾತ್ಮದ ಕಡೆಗೆ ಮನಸ್ಸು ವಾಲುತ್ತೇ ಅನ್ನುವುದು ಇಲ್ಲಿಗೆ ಬಂಧ ಸಾಕಷ್ಟು ಜನರ ವಿಚಿತ್ರ ಅನುಭವ. ಈ ಪರ್ವತದ ಬಗ್ಗೆ ಇನ್ನೊಂದು ವಿಸ್ಮಯಕಾರಿ ಸಂಗತಿ ಎಂದರೆ ಈ ಪರ್ವತ ಚಲಿಸುತ್ತೆ ಎನ್ನುವುದು. ಈ ಬಗ್ಗೆ ಸಾಕಷ್ಟು ಪರ್ವತಾರೊಹಿಗಳು ತಮಗಾದ ಗೊಂದಲವನ್ನು ದಾಖಲಿಸಿದ್ದಾರೆ. ಈ ಕೈಲಾಸ ಪರ್ವತವನ್ನು ಏರುತ್ತಾ ಹೋದಷ್ಟು ಒಂದು ದಿಕ್ಕಿನಲ್ಲಿದ್ದವರು ಇನ್ನೊಂದು ದಿಕ್ಕಿನಲ್ಲಿರುತ್ತಿರುತ್ತಿದ್ದರಂತೆ ಬಾಸವಾಗುತ್ತಂತೆ. ಹೀಗಾಗಿಯೇ ಈ ಕೈಲಾಸ ಪರ್ವತವನ್ನು ಏರುವುದಕ್ಕೆ ಸಾಧ್ಯವಾಗುತ್ತಿಲ್ಲ ಅನ್ನೋದು ಹಲವರು ಮಾತು.
ಇದನ್ನೂ ಓದಿ : ವರಮಹಾಲಕ್ಷ್ಮೀ ವ್ರತ : ಆಚರಣೆ, ಹುಟ್ಟಿನ ಕಥೆ ನಿಮಗೆ ಗೊತ್ತಾ
ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?