ದೆಹಲಿ : ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (PM Ujjwala Yojana ) ಸುಮಾರು 9 ಕೋಟಿ ಫಲಾನುಭವಿಗಳಿಗೆ ಪ್ರತಿ ಎಲ್.ಪಿ.ಜಿ ಸಿಲಿಂಡರ್ಗೆ ( LPG Price Drop) 200 ರೂಪಾಯಿ ಸಬ್ಸಿಡಿಯನ್ನು ಸರ್ಕಾರ ಪಾವತಿಸಲಿದೆ ಎಂದು ಶನಿವಾರ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಜೊತೆಗೆ ಧನಸಹಾಯವನ್ನು ವರ್ಷಕ್ಕೆ 12 ಸಿಲಿಂಡರ್ಗಳಿಗೆ ಸೀಮಿತಗೊಳಿಸಲಾಗುವುದು ಎಂದು ಹೇಳಿದ್ದಾರೆ. ಸಾಂಕ್ರಾಮಿಕ ಮತ್ತು ಉಕ್ರೇನ್ನಲ್ಲಿನ (Ukraine) ಬಿಕ್ಕಟ್ಟಿನ ಪರಿಣಾಮವಾಗಿ ಭಾರತದಲ್ಲಿ ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ಎದುರಿಸುತ್ತಿದ್ದೇವೆ, ಇದು ಪ್ರಪಂಚದಾದ್ಯಂತ ತೈಲ ಮತ್ತು ಆಹಾರ ವೆಚ್ಚವನ್ನು ಹೆಚ್ಚಿಸಿದೆ.
ಒಂದು ತಿಂಗಳಲ್ಲಿ ಎರಡನೇ ಬಾರಿಗೆ LPG ಬೆಲೆ 3.50 ರೂ ಹೆಚ್ಚಳವಾಗಿದೆ. ಈ ಸಬ್ಸಿಡಿಯನ್ನು ವಾರ್ಷಿಕವಾಗಿ 12 ಸಿಲಿಂಡರ್ಗಳಿಗೆ ಮಾತ್ರ ನೀಡಲಾಗುವುದು ಎಂದು ವಿತ್ತ ಸಚಿವಾಲಯ ಮಾಹಿತಿ ನೀಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ‘ಪ್ರಧಾನಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಈ ವರ್ಷ ಪ್ರತಿ ಗ್ಯಾಸ್ ಸಿಲಿಂಡರ್ಗೆ (12 ಸಿಲಿಂಡರ್ಗಳವರೆಗೆ) 200 ರೂಪಾಯಿ ಸಬ್ಸಿಡಿ ನೀಡಲಿದ್ದಾರೆ.
ಇಂದಿನ ಘೋಷಣೆಗೂ ಮುನ್ನ ಬೆಂಗಳೂರಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 1,005.50 ಮತ್ತು ಮೈಸೂರುನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 954.50 , ಮಂಗಳೂರುನಲ್ಲಿ 912.50. ರೂ, ಮತ್ತು ಹುಬ್ಬಳ್ಳಿನಲ್ಲಿ 919 ರೂ. ಆಗಿದೆ. ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 12 ಸಿಲಿಂಡರ್ಗಳವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಕ್ರಮವು ನಮ್ಮ ಮಹಿಳಾ ಸಮುದಾಯಕ್ಕೆ ಒಂದು ದೊಡ್ಡ ವರದಾನವಾಗಲಿದೆ. ‘ಜನರ’ ಮತ್ತು ‘ಜನರಿಗಾಗಿ’ಯೇ ನಮ್ಮ ಸರ್ಕಾರ,” ಎಂದು ಸಿಎಂ ಮತ್ತೊಂದು ಟ್ವೀಟ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.
ಸೀತಾರಾಮನ್ ಅವರು ಇಂಧನ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಕ್ರಮವಾಗಿ ಲೀಟರ್ಗೆ 8 ಮತ್ತು ಲೀಟರ್ಗೆ 6 ರೂ ಹೆಚ್ಚಳ ಮಾಡಲಾಗಿದೆ. ಇನ್ನೂ ಉಕ್ರೇನ್ ಬಿಕ್ಕಟ್ಟಿನ ನಂತರ ಕಚ್ಚಾ ತೈಲ ಬೆಲೆ ಏರಿಕೆಯಾದ ನಂತರ, ದೇಶದ ಹಲವಾರು ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್ಗೆ 100 ರೂ. ಹೆಚ್ಚು ಮಾಡಿದ್ದಾರೆ.
ಸಚಿವರ ಪ್ರಕಾರ, ಈ ಇಂಧನ ಬೆಲೆ ಹಾಗೂ ಡೀಸೆಲ್ ಬೆಲೆ ಸದ್ಯಕ್ಕೆ ಕಡಿಮೆ ಆಗುವ ಸಾಧ್ಯತೆ ಇಲ್ಲ.ಹೆಚ್ಚುವರಿಯಾಗಿ, ಭಾರತವು ಹೆಚ್ಚು ಆಮದು ಮಾಡಿಕೊಳ್ಳುವ ಪ್ಲಾಸ್ಟಿಕ್, ಕಬ್ಬಿಣ ಮತ್ತು ಉಕ್ಕಿನ ಸರಕುಗಳಿಗೆ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸರ್ಕಾರ ಕಡಿಮೆ ಮಾಡುತ್ತದೆ ಎಂದು ಹಣಕಾಸು ಸಚಿವರು ಭರವಸೆ ನೀಡಿದರು. ಇದು ಅಂತಿಮ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳುತ್ತಾರೆ.
ಸೀತಾರಾಮನ್ ಟ್ವೀಟ್
” ಪ್ರಪಂಚಾದ್ಯಂತ ಇದೀಗ ಭಯಾನಕ ಅವಧಿಯನ್ನು ಎದುರಿಸುತ್ತಿದೆ. ಕೋವಿಡ್ -19 ಸೋಂಕಿನ ನಂತರ, ಏಕಾಏಕಿ ಜಗತ್ತು ಚೇತರಿಸಿಕೊಂಡಿದ್ದರೂ ಸಹ, ಉಕ್ರೇನ್ ಬಿಕ್ಕಟ್ಟು ಪೂರೈಕೆ ಸರಪಳಿ ಅಡೆತಡೆಗಳು ಮತ್ತು ವಿವಿಧ ವಸ್ತುಗಳ ಕೊರತೆಯನ್ನು ಉಂಟುಮಾಡಿದೆ. ಅನೇಕ ದೇಶಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ” ಎಂದು ಸೀತಾರಾಮನ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : Mouth Ulcer : ಬಾಯಿ ಹುಣ್ಣಿನಿಂದ ನೋವು ಅನುಭವಿಸುತ್ತಿದ್ದೀರಾ? ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ!!
ಇದನ್ನೂ ಓದಿ :ಚೇತನಾ ರಾಜ್ ಸಾವಿನ ಬೆನ್ನಲ್ಲೇ ಮಾದರಿಯಾದ ಬ್ರಹ್ಮಗಂಟು ಗುಂಡಮ್ಮ: ಇಲ್ಲಿದೆ ನೋಡಿ ಗೀತಾ ಭಾರತಿ ಭಟ್ ಪಾಸಿಟಿವ್ ವೇಟ್ ಲಾಸ್ ಜರ್ನಿ
(LPG Price Drop Government announces Rs 200 subsidy per LPG gas)