ಸೋಮವಾರ, ಏಪ್ರಿಲ್ 28, 2025
HomebusinessPM Kisan eKYC deadline extended: ಪಿಎಂ ಕಿಸಾನ್ ಇಕೆವೈಸಿ ಗಡುವು ವಿಸ್ತರಣೆ, ಇಲ್ಲಿದೆ ಹೆಚ್ಚಿನ...

PM Kisan eKYC deadline extended: ಪಿಎಂ ಕಿಸಾನ್ ಇಕೆವೈಸಿ ಗಡುವು ವಿಸ್ತರಣೆ, ಇಲ್ಲಿದೆ ಹೆಚ್ಚಿನ ಮಾಹಿತಿ

- Advertisement -

ನವದೆಹಲಿ : ಕೇಂದ್ರ ಸರಕಾರ ಕೃಷಿ ಹಾಗೂ ಕೃಷಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಿಎಂ ಕಿಸಾನ್‌ ಯೋಜನೆಯನ್ನು ಜಾರಿಗೆ ತಂದಿದೆ. ಇದೀಗ ಕೇಂದ್ರ ಸರ್ಕಾರವು ಪಿಎಂ ಕಿಸಾನ್‌ ಯೋಜನೆ e-KYC ಅನ್ನು ಪೂರ್ಣಗೊಳಿಸಲು ಒಂದು ವಾರದವರೆಗೆ ಮೇ 31, 2022 ರವರೆಗೆ ಗಡುವನ್ನು ವಿಸ್ತರಿಸಿದೆ. PM ಕಿಸಾನ್ ಪೋರ್ಟಲ್‌ನಲ್ಲಿನ ಸೂಚನೆಯ ಪ್ರಕಾರ, “ಎಲ್ಲಾ PMKISAN ಫಲಾನುಭವಿಗಳಿಗೆ eKYC ಯ ಗಡುವನ್ನು 31 ಮೇ 2022ರ ವರೆಗೆ ವಿಸ್ತರಿಸಲಾಗಿದೆ. ಪಿಎಂ ಕಿಸಾನ್ ಇಕೆವೈಸಿ (PM Kisan eKYC) ಗಡುವು ವಿಸ್ತರಿಸಲಾಗಿದೆ.

PM Kisan eKYC :ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹಂತ ಹಂತದ ಮಾರ್ಗದರ್ಶಿ

ಹಂತ 1: PM ಕಿಸಾನ್‌ನ ಅಧಿಕೃತ ವೆಬ್‌ಪುಟಕ್ಕೆ ಭೇಟಿ ನೀಡಿ: https://pmkisan.gov.in/

ಹಂತ 2: ಪುಟದ ಬಲಭಾಗದಲ್ಲಿ ಲಭ್ಯವಿರುವ eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 3: ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಿ

ಹಂತ 4: ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ

ಹಂತ 5: ‘Get OTP’ ಮೇಲೆ ಕ್ಲಿಕ್ ಮಾಡಿ ಮತ್ತು ನಿರ್ದಿಷ್ಟಪಡಿಸಿದ ಕ್ಷೇತ್ರದಲ್ಲಿ OTP ಅನ್ನು ನಮೂದಿಸಿ.

ಗಮನಿಸಿ : ಎಲ್ಲಾ ವಿವರಗಳು ಹೊಂದಾಣಿಕೆಯಾದರೆ, eKYC ಪೂರ್ಣಗೊಳ್ಳುತ್ತದೆ; ಇಲ್ಲದಿದ್ದರೆ, ಅದನ್ನು ಅಮಾನ್ಯವೆಂದು ಗುರುತಿಸಲಾಗುತ್ತದೆ. ಒಂದು ವೇಳೆ ಅಮಾನ್ಯವೆಂದು ತೋರಿದರೆ ನೀವು ಸ್ಥಳೀಯ ಆಧಾರ್ ಸೇವಾ ಕೇಂದ್ರವನ್ನು ಸಂಪರ್ಕಿಸಬೇಕಾಗುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಭಾರತ ಸರ್ಕಾರದಿಂದ 100 ಪ್ರತಿಶತ ಹಣವನ್ನು ಹೊಂದಿರುವ ಕೇಂದ್ರ ಯೋಜನೆಯಾಗಿದೆ.

ಈ ಯೋಜನೆಯನ್ನು ಡಿಸೆಂಬರ್ 2018 ರಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆಯಡಿಯಲ್ಲಿ, ಪ್ರತಿ ವರ್ಷಕ್ಕೆ ರೂ 6,000/- ಆದಾಯ ಬೆಂಬಲವನ್ನು ದೇಶದಾದ್ಯಂತ ಎಲ್ಲಾ ರೈತ ಕುಟುಂಬಗಳಿಗೆ ತಲಾ ರೂ 2,000 ರಂತೆ ಮೂರು ಸಮಾನ ಕಂತುಗಳಲ್ಲಿ ಒದಗಿಸಲಾಗುತ್ತದೆ. ಪಿಎಂ ಕಿಸಾನ್ 11ನೇ ಕಂತುಗಾಗಿ ರೈತರು ಕಾಯುತ್ತಿದ್ದಾರೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ ಇದು ಈ ತಿಂಗಳ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. 10 ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 1, 2022 ರಂದು ಬಿಡುಗಡೆ ಮಾಡಿದರು.

ಇದನ್ನೂ ಓದಿ : LPG Price Drop : ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 9 ಕೋಟಿಗೂ ಅಧಿಕ ಅಡುಗೆ ಅನಿಲಕ್ಕೆ ₹200 ಸಬ್ಸಿಡಿ

ಇದನ್ನೂ ಓದಿ : ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಸಿಎಂ ಬಸವರಾಜ್‌ ಬೊಮ್ಮಾಯಿ ಸುಳಿವು

PM Kisan eKYC deadline extended: Check last date and step by step guide

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular