ಮಂಗಳವಾರ, ಏಪ್ರಿಲ್ 29, 2025
HomeCinemaಡಾ. ರಾಜಕುಮಾರ್‌ ಹುಟ್ಟುಹಬ್ಬ : ಅಪ್ಪಾಜಿ ಬರ್ತಡೆಗೆ ವಿಶೇಷ ಪತ್ರ ಬರೆದ ಮಗ ಶಿವ ರಾಜ್‌ಕುಮಾರ್‌

ಡಾ. ರಾಜಕುಮಾರ್‌ ಹುಟ್ಟುಹಬ್ಬ : ಅಪ್ಪಾಜಿ ಬರ್ತಡೆಗೆ ವಿಶೇಷ ಪತ್ರ ಬರೆದ ಮಗ ಶಿವ ರಾಜ್‌ಕುಮಾರ್‌

- Advertisement -

ಸ್ಯಾಂಡಲ್‌ವುಡ್‌ನಲ್ಲಿ ಡಾ.ರಾಜಕುಮಾರ್‌ (Dr. Rajkumar’s birthday) ಅವರಿಗೆ ಅವರೇ ಸಾಟಿ. ಯಾಕೆಂದರೆ ಅವರ ನಟನೆಯನ್ನು ಮೀರಿಸುವ ಇನ್ನೊಬ್ಬ ನಟರು ಯಾರಿಲ್ಲ ಎನ್ನುವಂತೆ ಮಿಂಚಿ ಮರೆಯಾದ ಧ್ರುವತಾರೆ ಆಗಿದ್ದಾರೆ. ಇಂದು (ಏಪ್ರಿಲ್‌ 24) ಡಾ.ರಾಜಕುಮಾರ್‌ ಅವರ 94ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಅವರ ಹುಟ್ಟುಹಬ್ಬದ ಸಲುವಾಗಿ ಕಂಠಿರವ ಸ್ಟುಡಿಯೋದಲ್ಲಿ ಇರುವ ಸಮಾಧಿ ಬಳಿ ಕುಟುಂಬಸ್ಥರು, ಅಭಿಮಾನಿಗಳು ಸೇರಿದಂತೆ ಅನೇಕರು ಬಂದು ಪುಷ್ಪ ನಮನ ಸಲ್ಲಿಸಲ್ಲಿದ್ದಾರೆ. ಡಾ. ರಾಜಕುಮಾರ್‌ ಅವರ ಹಿರಿಯ ಮಗ ಶಿವಣ್ಣ ತಮ್ಮ ತಂದೆಯ ಹುಟ್ಟುಹಬ್ಬದ ಸವಿ ನೆನಪಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಪತ್ರಯೊಂದು ಬರೆದು ಹಂಚಿಕೊಂಡಿದ್ದಾರೆ.

ನಟ ಶಿವರಾಜ್‌ಕುಮಾರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಒಬ್ಬ ಮಗನಿಗೆ ತನ್ನ ತಂದೆಯೇ ಮೊದಲ ಹೀರೋ. ಆದರೆ ನಾನು ಹುಟ್ಟುವ ಮುನ್ನವೇ ಬೆಳ್ಳಿಪರದೆಯಲ್ಲಿ ಮಿಂಚಿ ಪ್ರತಿ ಕನ್ನಡ ಕಲಾಭಿಮಾನಿಯ ಮನಸ್ಸಿನಲ್ಲಿ ಹೀರೋ ಆದವರು ನೀವು. ನಟನೆಯ ರಾಜನಾಗಿ, ನಾಡಿನ ಹೆಮ್ಮೆಯಾಗಿ, ಅಭಿಮಾನಿ ದೇವರುಗಳ ಧ್ರುವತಾರೆಯಾಗಿ, ಗಾಜನೂರಿನ ಮುತ್ತುರಾಜನಿಂದ ಬಿರುದುಗಳನ್ನು ಮೀರಿದ ಕನ್ನಡದ ರಾಜಕುಮಾರನಾದ ನಿಮ್ಮ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡಿದ ಅದೃಷ್ಟ ನನ್ನದು.

ಇದನ್ನೂ ಓದಿ : ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಗೆ 94ನೇ ಹುಟ್ಟು ಹಬ್ಬ : ಎಲ್ಲೆಲ್ಲೂ ಸಂಭ್ರಮಾಚರಣೆ

ಇದನ್ನೂ ಓದಿ : ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿಕೊಟ್ಟ ನಟಿ ಶಿಲ್ಪಾ ಶೆಟ್ಟಿ ದಂಪತಿ

ನಿಮ್ಮ ಸಾಧನೆ ನಮಗೆ ಸ್ಫೂರ್ತಿ, ನಿಮ್ಮ ಜೀವನ ನಮಗೆ ಮಾರ್ಗದರ್ಶನ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪಾಜಿ. ಶಿವು” ಎಂದು ಸುದೀರ್ಘವಾದ ಪತ್ರ ಬರೆದು ಪೋಸ್ಟ್‌ ಮಾಡಿದ್ದಾರೆ. ಶಿವರಾಜ್‌ಕುಮಾರ್‌ ಬರೆದಿರುವ ಸಾಲುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗೆಯೇ ಅಣ್ಣಾವ್ರಿಗೆ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.

ಡಾ.ರಾಜಕುಮಾರ್‌ ಅವರು ತಮ್ಮ 76ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಡಾ. ರಾಜಕುಮಾರ್‌ ಅವರಿಗೆ ಆರಂಭಿಕ ದಿನಗಳಲ್ಲಿ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಅವರು ಕನ್ನಡ ಮಾತನಾಡುವ ಕುಟುಂಬದಲ್ಲಿ ಏಪ್ರಿಲ್‌ 24, 1929 ರಂದು ತಾಳವಡಿ ತಾಲೂಕಿನ ದೊಡ್ಡ ಗಾಜನೂರಿನಲ್ಲಿ ಜನಿಸಿದರು. ಅವರ ತಂದೆ ಪುಟ್ಟಸ್ವಾಮಯ್ಯ ಮತ್ತು ತಾಯಿ ಲಕ್ಷ್ಮಮ್ಮ ಸಿಂಗಾನಲ್ಲೂರಿನ ಬಡ ರಂಗಭೂಮಿ ಕಲಾವಿದರಾಗಿದ್ದರು.

ಇವರ ತಂದೆ ಪುಟ್ಟಸ್ವಾಮಯ್ಯ ಅವರು ಕಂಸ , ರಾವಣ , ಮತ್ತು ಹಿರಣ್ಯಕಶಿಪು ಮುಂತಾದ ಪೌರಾಣಿಕ ಪಾತ್ರಗಳನ್ನು ನಿರ್ವಹಿಸುವಲ್ಲಿ ಉತ್ತಮರಾಗಿದ್ದರು. ಇನ್ನು ಮುತ್ತುರಾಜ್ ಎಂಟು ವರ್ಷಕ್ಕೆ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ನಂತರ ಸಿನಿಮಾ ನಿರ್ಮಾಪಕರೊಬ್ಬರು ಸಣ್ಣ ಪಾತ್ರಗಳಲ್ಲಿ ನಟಿಸಲು ಅವಕಾಶ ನೀಡಿದ್ದರು. ಅಲ್ಲಿಂದ ಅವರು 25 ವರ್ಷದವರೆಗೂ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.

ಒಮ್ಮೆ ಮುತ್ತುರಾಜ್ ಅವರು ತಮ್ಮ ತಂದೆಯೊಂದಿಗೆ ಗುಬ್ಬಿ ವೀರಣ್ಣ ನೇತೃತ್ವದ ನಾಟಕ ತಂಡದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ದಿನಗಳಲ್ಲಿ ಸುಬ್ಬಯ್ಯ ನಾಯ್ಡು ಅವರ ನಾಟಕ ಕಂಪನಿಗೆ ಸೇರಿದರು. 1953 ರಲ್ಲಿ, ನಿರ್ದೇಶಕ ಎಚ್.ಎಲ್.ಎನ್. ಸಿಂಹ ಅವರು, ಬೇಡರ ಕಣ್ಣಪ್ಪ ಸಿನಿಮಾದಲ್ಲಿನ ಮುಖ್ಯ ಪಾತ್ರಕ್ಕಾಗಿ ಹುಡುಕಾಟದಲ್ಲಿದ್ದರು. ಆಗ ಅಂತಿಮವಾಗಿ ಮುತ್ತುರಾಜ್ ಅವರನ್ನು ಸಿನಿಮಾಕ್ಕೆ ಸಹಿ ಮಾಡಿದರು ಮತ್ತು ಅಂದಿನಿಂದ ಅವರಿಗೆ ರಾಜಕುಮಾರ ಎಂದು ಹೆಸರಿಸಿದರು. ರಾಜಕುಮಾರ್ ಅವರಿಗೆ ಬೇಡರ ಕಣ್ಣಪ್ಪ ಮೊದಲು ಸಿನಿಮಾವಾಗಿದೆ. ಅವರ ಚೊಚ್ಚಲ ಸಿನಿಮಾ ಬೇಡರ ಕಣ್ಣಪ್ಪನ ರಿಮೇಕ್ ಆಗಿದ್ದ ಕಾಳಹಸ್ತಿ ಮಹಾತ್ಯಂ ಎಂಬ ತೆಲುಗು ಸಿನಿಮಾವನ್ನು ಹೊರತುಪಡಿಸಿ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಕನ್ನಡ ಸಿನಿಮಾಗಳಲ್ಲಿ ಮಾತ್ರ ನಟಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

Dr. Rajkumar’s birthday: Son Shivrajkumar wrote a special letter to his father

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular