ಸೋಮವಾರ, ಜೂನ್ 16, 2025
HomeCinemaರೆಬೆಲ್ ಸ್ಟಾರ್ ಗೆ ಗುಡಿ….! ಕಂಚಿನ ಪುತ್ಥಳಿ ಅನಾವರಗೊಳಿಸಿದ ಅಂಬಿ ಕುಟುಂಬ..!

ರೆಬೆಲ್ ಸ್ಟಾರ್ ಗೆ ಗುಡಿ….! ಕಂಚಿನ ಪುತ್ಥಳಿ ಅನಾವರಗೊಳಿಸಿದ ಅಂಬಿ ಕುಟುಂಬ..!

- Advertisement -

ಮಂಡ್ಯ: ಮಂಡ್ಯದ ಗಂಡಿನ ಮೇಲೆ ಅಭಿಮಾನದ ಹೊಳೆ ಯನ್ನೇ ಹರಿಸಿರೋ ಮಂಡ್ಯದ ಜನತೆ ಮದ್ದೂರು ತಾಲೂಕಿನ ಹೊಟ್ಟೆ ಗೌಡನ ದೊಡ್ಡಿಯಲ್ಲಿ ಅಂಬಿಗಾಗಿ ಗುಡಿ ಕಟ್ಟಿ ಕಂಚಿನ ಪುತ್ಥಳಿ ನಿರ್ಮಿಸಿದ್ದಾರೆ.

Ambi 3

ಅಂದಾಜು ೮ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಗುಡಿಗೆಯನ್ನು ಇಂದು ನಟ ಅಂಬರೀಶ್ ಎರಡನೇ ಪುಣ್ಯತಿಥಿ ಅಂಗವಾಗಿ ನಟ ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ ಅಂಬರೀಶ್ ಹಾಗೂ ಅಂಬಿ ಪುತ್ರನಂತಿರೋ ದರ್ಶನ್ ಉದ್ಘಾಟಿಸಿದರು. ಅಷ್ಟೇ ಅಲ್ಲ ಜಲಾಲನ ಕಂಚಿನ ಪುತ್ಥಳಿ ಅನಾವರಣಗೊಳಿಸಿದರು.

(adsbygoogle = window.adsbygoogle || []).push({});
Ambi 5

ಅಂಬಿ ಪುತ್ಥಳಿ ಅನಾವರಣಕ್ಕೆ ಬಂದ ಪತ್ನಿ ಹಾಗೂ ಪುತ್ರನಿಗೆ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜನತೆ ಹೂವಿನ ಮಳೆಗರೆದು ಅದ್ದೂರಿ ಸ್ವಾಗತ ಕೋರಿದರು.

(adsbygoogle = window.adsbygoogle || []).push({});
Ambi 4 E1606218388235

ಇದಕ್ಕೂ ಮುನ್ನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ತೆರಳಿದ ಸುಮಲತಾ ಅಂಬರೀಶ್, ಅಭಿಷೇಕ ಅಂಬರೀಶ್ ಹಾಗೂ ದರ್ಶನ್ ಪೂಜೆ ಸಲ್ಲಿಸದರು. ಈ ವೇಳೆ ಮಾತನಾಡಿದ ಸುಮಲತಾ ಅಂಬರೀಶ್ , ಅಂಬಿಗೆ ಜನರು ತಮ್ಮ ಹೃದಯದಲ್ಲಿ ಸ್ಥಾನನೀಡಿದ್ದಾರೆ. ಅದು ಅವರ ಪ್ರೀತಿಗೆ ಸಾಕ್ಷಿ ಎಂದರು.

(adsbygoogle = window.adsbygoogle || []).push({});
01 Ambi 1605593871 1

ಅಂಬರೀಶ್ ಮಗನಾಗಿ ಹುಟ್ಟಿದ್ದೇ ನನ್ನ ಪುಣ್ಯ ಎಂದು ಅಭಿಷೇಕ ಭಾವುಕರಾದರು. ಸಮಾಧಿ ಬಳಿ ಮಾತನಾಡಿದ ದರ್ಶನ್, ಅಂಬಿಸಮಾಧಿ ನಮಗೆ ದೇವಸ್ಥಾನ ಇದ್ದಂಗೆ. ನಾವು ಆಗಾಗ ಬರ್ತಾ ಇರ್ತಿವಿ.ಸೀನಿಯರ್ ಹೋದ ಮೇಲೆ ನನಗೆ ಯಾರು ಬೈಯ್ಯೋರೇ ಇಲ್ಲದಂತಾಗಿದೆ ಎಂದರು.

RELATED ARTICLES

Most Popular