ಮಂಡ್ಯ: ಮಂಡ್ಯದ ಗಂಡಿನ ಮೇಲೆ ಅಭಿಮಾನದ ಹೊಳೆ ಯನ್ನೇ ಹರಿಸಿರೋ ಮಂಡ್ಯದ ಜನತೆ ಮದ್ದೂರು ತಾಲೂಕಿನ ಹೊಟ್ಟೆ ಗೌಡನ ದೊಡ್ಡಿಯಲ್ಲಿ ಅಂಬಿಗಾಗಿ ಗುಡಿ ಕಟ್ಟಿ ಕಂಚಿನ ಪುತ್ಥಳಿ ನಿರ್ಮಿಸಿದ್ದಾರೆ.

ಅಂದಾಜು ೮ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಗುಡಿಗೆಯನ್ನು ಇಂದು ನಟ ಅಂಬರೀಶ್ ಎರಡನೇ ಪುಣ್ಯತಿಥಿ ಅಂಗವಾಗಿ ನಟ ದಿ.ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ ಅಂಬರೀಶ್ ಹಾಗೂ ಅಂಬಿ ಪುತ್ರನಂತಿರೋ ದರ್ಶನ್ ಉದ್ಘಾಟಿಸಿದರು. ಅಷ್ಟೇ ಅಲ್ಲ ಜಲಾಲನ ಕಂಚಿನ ಪುತ್ಥಳಿ ಅನಾವರಣಗೊಳಿಸಿದರು.
(adsbygoogle = window.adsbygoogle || []).push({});
ಅಂಬಿ ಪುತ್ಥಳಿ ಅನಾವರಣಕ್ಕೆ ಬಂದ ಪತ್ನಿ ಹಾಗೂ ಪುತ್ರನಿಗೆ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜನತೆ ಹೂವಿನ ಮಳೆಗರೆದು ಅದ್ದೂರಿ ಸ್ವಾಗತ ಕೋರಿದರು.
(adsbygoogle = window.adsbygoogle || []).push({});
ಇದಕ್ಕೂ ಮುನ್ನ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ತೆರಳಿದ ಸುಮಲತಾ ಅಂಬರೀಶ್, ಅಭಿಷೇಕ ಅಂಬರೀಶ್ ಹಾಗೂ ದರ್ಶನ್ ಪೂಜೆ ಸಲ್ಲಿಸದರು. ಈ ವೇಳೆ ಮಾತನಾಡಿದ ಸುಮಲತಾ ಅಂಬರೀಶ್ , ಅಂಬಿಗೆ ಜನರು ತಮ್ಮ ಹೃದಯದಲ್ಲಿ ಸ್ಥಾನನೀಡಿದ್ದಾರೆ. ಅದು ಅವರ ಪ್ರೀತಿಗೆ ಸಾಕ್ಷಿ ಎಂದರು.
(adsbygoogle = window.adsbygoogle || []).push({});
ಅಂಬರೀಶ್ ಮಗನಾಗಿ ಹುಟ್ಟಿದ್ದೇ ನನ್ನ ಪುಣ್ಯ ಎಂದು ಅಭಿಷೇಕ ಭಾವುಕರಾದರು. ಸಮಾಧಿ ಬಳಿ ಮಾತನಾಡಿದ ದರ್ಶನ್, ಅಂಬಿಸಮಾಧಿ ನಮಗೆ ದೇವಸ್ಥಾನ ಇದ್ದಂಗೆ. ನಾವು ಆಗಾಗ ಬರ್ತಾ ಇರ್ತಿವಿ.ಸೀನಿಯರ್ ಹೋದ ಮೇಲೆ ನನಗೆ ಯಾರು ಬೈಯ್ಯೋರೇ ಇಲ್ಲದಂತಾಗಿದೆ ಎಂದರು.