ಬುಧವಾರ, ಏಪ್ರಿಲ್ 30, 2025
HomeCinemaMandira Bedi : ಸ್ನೇಹಿತನೊಂದಿಗೆ ಫೋಟೋ ಶೇರ್​ ಮಾಡಲು ಹೋಗಿ ಯರ್ರಾಬಿರ್ರಿ ಟ್ರೋಲ್​ ಆದ ಮಂದಿರಾ ಬೇಡಿ

Mandira Bedi : ಸ್ನೇಹಿತನೊಂದಿಗೆ ಫೋಟೋ ಶೇರ್​ ಮಾಡಲು ಹೋಗಿ ಯರ್ರಾಬಿರ್ರಿ ಟ್ರೋಲ್​ ಆದ ಮಂದಿರಾ ಬೇಡಿ

- Advertisement -

Mandira Bedi : ಇದು ಸೋಶಿಯಲ್​ ಮೀಡಿಯಾ ಯುಗ. ನೀವು ಹಾಕುವ ಒಂದೊಂದು ಪೋಸ್ಟ್​​ಗಳು ಪ್ರಪಂಚದ ಇನ್ಯಾವುದೋ ಮೂಲೆಯಲ್ಲಿ ಕುಳಿತ ವ್ಯಕ್ತಿ ಕೂಡ ತನ್ನ ಮೊಬೈಲ್​ ಪರದೆಯ ಮೇಲೆ ನೋಡಬಹುದು. ಅದರಲ್ಲೂ ಸೆಲೆಬ್ರಿಟಿಗಳ ಮೇಲೆಂತೂ ಜನರ ಕಣ್ಣು ಇದ್ದೇ ಇರುತ್ತದೆ. ಬಹುಶಃ ಇದೇ ಕಾರಣಕ್ಕೆ ಬಾಲಿವುಡ್​ ನಟಿ ಹಾಗೂ ಟೆಲಿವಿಷನ್​ ನಿರೂಪಕಿ ಮಂದಿರಾ ಬೇಡಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಯರ್ರಾಬಿರ್ರಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.


ಬಾಲಿವುಡ್​ ನಟಿ ಹಾಗೂ ನಿರೂಪಕಿ ಮಂದಿರಾ ಬೇಡಿ ಕಳೆದ ವರ್ಷ ಜುಲೈ ತಿಂಗಳಲ್ಲಿ ತಮ್ಮ ಪತಿ ಹಾಗೂ ನಿರ್ಮಾಪಕ ರಾಜ್​ ಕೌಶಲ್​ರನ್ನು ಕಳೆದುಕೊಂಡಿದ್ದರು. ಈ ವೇಳೆಯಲ್ಲಿ ಮಂದಿರಾ ಬೇಡಿಗೆ ಸೋಶಿಯಲ್​ ಮೀಡಿಯಾದಲ್ಲಿ ಅನುಕಂಪಗಳ ಸುರಿಮಳೆಯೇ ಹರಿದುಬಂದಿತ್ತು . ಆದರೆ ಇದೀಗ ಇದೇ ಮಂದಿರಾ ಬೇಡಿಗೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಹಿಡಿಶಾಪ ಹಾಕ್ತಿದ್ದಾರೆ.ಇದಕ್ಕೆ ಕಾರಣ ಅವರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ ಫೋಟೋಗಳು.


ಇನ್​ಸ್ಟಾಗ್ರಾಂನಲ್ಲಿ ಸದಾ ಸಕ್ರಿಯವಾಗಿರುವ ಮಂದಿರಾ ಬೇಡಿ ನೀಲಿ ಬಣ್ಣದ ಬಿಕನಿಯನ್ನು ತೊಟ್ಟು ತನ್ನ ಆತ್ಮೀಯ ಸ್ನೇಹಿತನೊಂದಿಗೆ ಪೂಲ್​ಗೆ ಇಳಿದು ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದ ಮಂದಿರಾ, ಹುಟ್ಟು ಹಬ್ಬದ ಶುಭಾಶಯಗಳು ಆದಿ.ನೀನು ನನಗೆ ಎಷ್ಟು ಮುಖ್ಯ ಎಂಬುದನ್ನು ಈ ಫೋಟೋಗಳೇ ಹೇಳುತ್ತವೆ. ನಾವು ಒಬ್ಬರನ್ನೊಬ್ಬರು ಎಷ್ಟು ಸಮಯಗಳಿಂದ ತಿಳಿದಿದ್ದೇವೆ ಹಾಗೂ ನಮ್ಮ ನಡುವಿನ ಬಾಂಧವ್ಯ ಏನು ಎಂಬುದನ್ನು ಈ ಫೋಟೋಗಳೇ ಹೇಳುತ್ತವೆ ಎಂದು ಬರೆದುಕೊಂಡಿದ್ದರು.


ನಾನು ನಿನ್ನನ್ನು ಎಷ್ಟು ನಂಬುತ್ತೇನೆ. ನಿನ್ನ ಬಳಿಕ ಪ್ರೀತಿ, ಸಂತೋಷ ಹಾಗೂ ಯಶಸ್ಸು ಹರಿದು ಬರಲಿ. ನಾನು ನಿನ್ನನ್ನು ಪ್ರೀತಿಸುತ್ತೇನೆ. 17ನೇ ವರ್ಷದಿಂದ ನನ್ನ ಪ್ರೀತಿಯ ಸ್ನೇಹಿತ ಎಂದು ಶೀರ್ಷಿಕೆ ನೀಡಿದ್ದರು. ಈ ಫೋಟೋ ಪೋಸ್ಟ್​ ಮಾಡಿದ್ದೇ ತಡ ನೆಟ್ಟಿಗರು ಮಂದಿರಾಬೇಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ನಿನ್ನ ಪತಿ ಸತ್ತು ಇನ್ನು ಒಂದು ವರ್ಷ ಕೂಡ ಕಳೆದಿಲ್ಲ. ಸ್ವಲ್ಪ ಸಮಯವಾದರೂ ಕಾಯಬಹುದಿತ್ತು ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ನಿಮ್ಮ ಗಂಡ ಸತ್ತು ಹೋಗಿದ್ದಾರೆ ಅಲ್ಲವೇ..? ಇದ್ಯಾರು ಎಂದೆಲ್ಲ ಕೆಟ್ಟದಾಗಿ ಕಮೆಂಟ್​ ಮಾಡಿದ್ದಾರೆ. ನೆಗೆಟಿವ್​ ಕಮೆಂಟ್​ಗಳಿಂದ ಬೇಸತ್ತ ಮಂದಿರಾ ಕಮೆಂಟ್​ ಆಯ್ಕೆಯನ್ನೇ ಆಫ್​ ಮಾಡಿದ್ದಾರೆ.

ಇದನ್ನು ಓದಿ : chief minister basavaraj bommai : ಪಿಎಸ್​ಐ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ಸಿಗರೇ ಬಂಧನಕ್ಕೊಳಗಾಗುತ್ತಿದ್ದಾರೆ : ಸಿಎಂ ಬೊಮ್ಮಾಯಿ

ಇದನ್ನೂ ಓದಿ : state cabinet reshuffle : ಇನ್ನೈದು ದಿನಗಳಲ್ಲಿ ರಾಜ್ಯದಲ್ಲಿ ಸಂಪುಟ ಪುನಾರಚನೆ: ಸುಧಾಕರ್​, ಆರ್​.ಅಶೋಕ್​ ಸೇರಿದಂತೆ ಪ್ರಮುಖರಿಗೆ ಕೊಕ್​​

Mandira Bedi gets brutally trolled for sharing a pool picture with male friend: ‘Arre tumhare pati ko mare huwe kuch hi samay hua ha thoda sabr kar leti’

RELATED ARTICLES

Most Popular