ಮಂಗಳವಾರ, ಏಪ್ರಿಲ್ 29, 2025
HomeCinemaತುಳುನಾಡ ದೈವ ಕೊರಗಜ್ಜನಿಗೆ ಹರಿಕೆ ಸಲ್ಲಿಸಿದ ನಟಿ ರಕ್ಷಿತಾ ಪ್ರೇಮ್‌ ದಂಪತಿ

ತುಳುನಾಡ ದೈವ ಕೊರಗಜ್ಜನಿಗೆ ಹರಿಕೆ ಸಲ್ಲಿಸಿದ ನಟಿ ರಕ್ಷಿತಾ ಪ್ರೇಮ್‌ ದಂಪತಿ

- Advertisement -

ಮಂಗಳೂರು : ತುಳುನಾಡ ಕಾರ್ಣಿಕ ದೈವ ಎನಿಸಿರುವ ಕೊರಗಜ್ಜ ಬೇಡಿ ಬರುವ ಭಕ್ತರ ಸಂಕಷ್ಟವನ್ನು ಕಳೆಯುತ್ತಾರೆ. ಕರಾವಳಿ ಮಾತ್ರವಲ್ಲದೇ ದೂರದ ಊರು ಗಳಿಂದ ಭಕ್ತರು ಕೊರಗಜ್ಜನ ಸನ್ನಿಧಿಗೆ ಆಗಮಿಸುತ್ತಾರೆ. ಇದೀಗ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್‌ ಅವರಿಗೆ ಇಷ್ಟಾರ್ಥವನ್ನು ಕರುಣಿಸಿದ್ದಾನೆ. ಹೀಗಾಗಿ ಸ್ಯಾಂಡಲ್‌ವುಡ್‌ ದಂಪತಿ ಅಜ್ಜನ ಪುಣ್ಯ ಕ್ಷೇತ್ರಕ್ಕೆ ಬಂದು ಹರಿಕೆಯನ್ನು ಸಲ್ಲಿಸಿದ್ದಾರೆ.

ರಕ್ಷಿತಾ ಹಾಗೂ ಪ್ರೇಮ್‌ ದಂಪತಿ ಅಜ್ಜನಿಗೆ ಹರಿಕೆಯೊಂದನ್ನು ಹೊತ್ತುಕೊಂಡಿದ್ದರು. ಅದರಂತೆಯೇ ತಮ್ಮ ಇಷ್ಟಾರ್ಥ ಈಡೇರಿದೆ. ಹೀಗಾಗಿಯೇ ಮಂಗಳೂರು ಹೊರವಲಯದಲ್ಲಿರುವ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕೊರಗಜ್ಜನಿಗೆ ಹರಿಕೆಯ ರೂಪದಲ್ಲಿ ಬೆಳ್ಳಿಯ ದೀಪ ಹಾಗೂ ಗಂಟೆಯನ್ನು ಸಮರ್ಪಿಸಿದ್ದಾರೆ.

ಕರಾವಳಿ ಮೂಲದ ನಟಿ ರಕ್ಷಿತಾ ಪ್ರೇಮ್‌ ದಂಪತಿ ಕೊರಗಜ್ಜನ ಸನ್ನಧಿಗೆ ಭೇಟಿ ನೀಡುವ ಮೊದಲು ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಭೇಟಿಯನ್ನು ನೀಡಿದ್ದರು. ಧಾರ್ಮಿಕ ಕ್ಷೇತ್ರಗಳ ಭೇಟಿಯ ಬಳಿಕ ಒಂದಿಷ್ಟು ಹೊತ್ತು ಬೀಚ್‌ನಲ್ಲಿ ಕಾಲ ಕಳೆದಿದ್ದಾರೆ.

ಇದನ್ನೂ ಓದಿ : ಬಿಡುಗಡೆಗೂ ಮುನ್ನ ಸಖತ್‌ ಸದ್ದು ಮಾಡುತ್ತಿದೆ ಸಲಗ

ಇದನ್ನೂ ಓದಿ : ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ತೆರೆ ಮೇಲೆ ಬರಲು ಡೇಟ್‌ ಫೀಕ್ಸ್‌

( Sandalwood Actress Rakshitha Pream Visit Koragajja Temple Kuttar Near Mangalore )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular