ಅಗ್ನಿಸಾಕ್ಷಿಯ ಸನ್ನಿಧಿ ಖ್ಯಾತಿಯ ನಟಿ ವೈಷ್ಣವಿ ಗೌಡ ಬಿಗ್ ಬಾಸ್ ಮನೆಯ ಫೈನಲ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಶೋ ಆರಂಭದಿಂದಲೂ ತಮ್ಮ ಸಹನೆ,ತಾಳ್ಮೆಯಿಂದ ಮನೆಮಂದಿಮನಗೆದ್ದ ವೈಷ್ಣವಿಗೆ ಬಿಗ್ ಬಾಸ್ ಶೋ ಮುಗಿದಮೇಲೆ ಸಪ್ರೈಸ್ ಕಾದಿದ್ದು ಆಕೆಯ ಹೆಸರು ಬದಲಾಯಿಸಲುಹೆತ್ತವರು ನಿರ್ಧರಿಸಿದ್ದಾರಂತೆ.

ವೈಷ್ಣವಿ ಬಿಗ್ ಬಾಸ್ ಮನೆಯ ಗೆಲ್ಲುವ ಸ್ಪರ್ಧಿ ಅಂತನೇ ಎಲ್ಲರೂ ಪರಿಗಣಿಸಿದ್ದಾರೆ. ಇದಕ್ಕೆ ಕಾರಣ ವೈಷ್ಣವಿ ಸಹನೆ,ತಾಳ್ಮೆ ಹಾಗೂ ಎಲ್ಲವನ್ನು ನಿಭಾಯಿಸುವ ಶಕ್ತಿ. ನಟಿ ವೈಷ್ಣವಿಗೆ ಸುದೀಪ್ ಯಾವಾಗಲೂ ರೇಷ್ಮಾ,ರೇಷ್ಮಕ್ಕ ಎಂದೇ ಕರೆಯುತ್ತಾರೆ.

ಇದಕ್ಕೆಕಾರಣ ಸುದೀಪ್ ಹೇಳೋದು ವೈಷ್ಣವಿ ಯಾರಿಗಾದ್ರೂ ಏನಾದ್ರು ಹೇಳೋದಾದರೇ ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಹೊಡೆದಷ್ಟು ಮೃದುವಾಗಿ ಹೇಳುತ್ತಾರೆ ಅಂತ.ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಸಂಗತಿ ಯೊಂದನ್ನು ವೈಷ್ಣವಿ ತಾಯಿ ಭಾನು ರವಿಕುಮಾರ್ ಬಯಲು ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿರೋ ಮಗಳಿಗೆ ಸಪ್ರೈಸ್ ವಾಯ್ಸ್ ನೋಟ್ ಕಳಿಸಿರೋ ವೈಷ್ಣವಿ ತಾಯಿ ನೀನುನಮಗೆ ದೇವರ ಹರಕೆಯಿಂದ ಹುಟ್ಟಿದ ಮಗಳು . ಹುಟ್ಟಿದಾಗ ಗುಂಡಗೆ ಬೆಳ್ಳಗೆ ಪಿಂಕು ಪಿಂಕಾಗಿ ರೇಷ್ಮೆಯಂತೆ ಇದ್ದೆ. ಅದಕ್ಕಾಗಿ ನಿನಗೆ ರೇಷ್ಮಾ ಎಂದೇ ಹೆಸರಿಡಲು ನಿರ್ಧರಿಸಿದ್ದೇವು.ಆದರೆ ದೇವರ ಹರಕೆಯಿಂದ ಹುಟ್ಟಿದ್ದಕ್ಕೆ ವೈಷ್ಣವಿ ಎಂದು ಹೆಸರಿಟ್ಟಿದ್ದೇವೆ.

ಆದರೆ ಇನ್ಮುಂದೆ ನಿನಗೆ ರೇಷ್ಮಾ ವೈಷ್ಣವಿ ಎಂದೇ ಕರೆಯುತ್ತೇವೆ ಎಂದಿದ್ದಾರೆ. ಅಲ್ಲಿಗೆ ನಟ ಸುದೀಪ್ ವೈಷ್ಣವಿಗೆ ಇಟ್ಟ ಹೆಸರು ಅವರಿಗೆ ಫಿಕ್ಸ್ ಆಗಲಿದೆ.
ನಿನ್ನನ್ನು ಬಿಗ್ ಬಾಸ್ ಗೆ ಕಳಿಸಬೇಡ ಎಂದು ಹಲವರು ಹೇಳಿದ್ದರು.ಆದರೆ ನೀನು ನಾವು ಹೆಮ್ಮೆ ಪಡುವಂತೆ ಆಡುತ್ತಿದ್ದೀಯಾ. ನೀನು ಗೆದ್ದುಬರಲಿ ಎಂಬುದು ನಮ್ಮ ಆಸೆ ಎಂದು ವೈಷ್ಣವಿ ತಾಯಿಮಗಳಿಗೆ ಹಾರೈಸಿದ್ದಾರೆ.