ಮಂಗಳವಾರ, ಜೂನ್ 17, 2025
HomeBreakingಬ್ರಹ್ಮಗಂಟು ನಟಿಗೆ ಡ್ರಗ್ಸ್ ಮಾಫಿಯಾ ಉರುಳು : ಆಗದವರು ಹೆಸರು ಹೇಳಿದ್ದಾರೆಂದ ಗೀತಾಭಾರತಿ ಭಟ್‍

ಬ್ರಹ್ಮಗಂಟು ನಟಿಗೆ ಡ್ರಗ್ಸ್ ಮಾಫಿಯಾ ಉರುಳು : ಆಗದವರು ಹೆಸರು ಹೇಳಿದ್ದಾರೆಂದ ಗೀತಾಭಾರತಿ ಭಟ್‍

- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದೆ. ಒಂದಡೆ ಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲರ್ ಗಳನ್ನು ಜಾಲಾಡುತ್ತಿದ್ರೆ, ಇನ್ನೊಂದೆಡೆ ಆಂತರಿಕ ಭದ್ರತಾ ದಳದ ಕೂಡ ಅಖಾಡಕ್ಕೆ ಧುಮುಕಿದೆ. ಇದೀಗ ಗಟ್ಟಿಮೇಳ ಧಾರಾವಾಹಿಯ ನಟಿ ಹಾಗೂ ನಟನಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದೆ.

Geethbharathi Bhat 1

ಆಂತರಿಕ ಭದ್ರತಾ ದಳದದ ಪೊಲೀಸರು ಈಗಾಗಲೇ ನಟ ಯೋಗಿ, ಕ್ರಿಕೆಟಿಗ ಅಯ್ಯಪ್ಪ ಸೇರಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ಇದೀಗ ಗಟ್ಟಿಮೇಳ ಧಾರವಾಗಿಯ ಗೀತಾ ಭಾರತಿ ಭಟ್ ಹಾಗೂ ವಿಕ್ರಾಂತ್ ಖ್ಯಾತಯ ಅಭಿಷೇಕ್ ದಾಸ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.

Geethbharathi Bhat 2

ಈ ಕುರಿತು ಗೀತಾ ಭಾರತಿ ಭಟ್ ಪ್ರತಿಕ್ರೀಯೆ ನೀಡಿದ್ದಾರೆ. ಡ್ರಗ್ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಬಂದಿರುವುದು ನಿಜ. ನಾನು ಈ ವಿಚಾರವಾಗಿ ಪ್ಯಾನಿಕ್ ಆಗಿದ್ದೇನೆ.

Geethbharathi Bhat

ವಿಚಾರಣೆಗೆ ಕರೆದಿದ್ದಾರೆ ಎಂದರೆ ನಾವು ತಪ್ಪು ಮಾಡಿದ್ದೇವೆ ಎಂದಲ್ಲ. ನಮಗೆ ಆಗದವರು ನನ್ನ ಹೆಸರು ಹೇಳಿರಬಹುದು. ವಿಚಾರಣೆಗೆ ಹಾಜರಾಗೋದಾಗಿ ಹೇಳಿದ್ದಾರೆ.

Geethbharathi Bhat 3

ಇಷ್ಟುದಿನ ಸ್ಯಾಂಡಲ್ ವುಡ್ ಸುತ್ತುತ್ತಿದ್ದ ಡ್ರಗ್ಸ್ ದಂಧೆ ಪ್ರಕರಣ ಇದೀಗ ಕಿರುತೆರೆಗೂ ಕಾಲಿಟ್ಟಿದ್ದು, ಒಂದೊಂದೆ ನಟ, ನಟಿಯರು ವಿಚಾರಣೆಗೆ ಹಾಜರಾಗುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular