ಮಂಗಳವಾರ, ಏಪ್ರಿಲ್ 29, 2025
HomeCinemaAshwini Puneethrajkumar : ಸರ್ಕಾರದ ಸಹಕಾರಕ್ಕೆ ಧನ್ಯವಾದ: ಜಿಲ್ಲಾಧಿಕಾರಿಗಳಿಗೆ ಪುನೀತ್ ಪತ್ನಿ ಅಶ್ವಿನಿ ಪತ್ರ

Ashwini Puneethrajkumar : ಸರ್ಕಾರದ ಸಹಕಾರಕ್ಕೆ ಧನ್ಯವಾದ: ಜಿಲ್ಲಾಧಿಕಾರಿಗಳಿಗೆ ಪುನೀತ್ ಪತ್ನಿ ಅಶ್ವಿನಿ ಪತ್ರ

- Advertisement -

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ನಿಧನವಾಗಿ 10 ದಿನಗಳೇ ಸಂದಿವೆ. ಆದರೂ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಆಪ್ತರ ಕಣ್ಣೀರು ಬತ್ತಿಲ್ಲ. ಈ ಮಧ್ಯೆ ಪುನೀತ್ ಅಂತ್ಯಸಂಸ್ಕಾರದ ವೇಳೆ ಸರ್ಕಾರದ ಸಹಕಾರಕ್ಕೆ ಅಶ್ವಿನಿ ಪುನೀತ್ ಧನ್ಯವಾದ ಅರ್ಪಿಸಿದ್ದಾರೆ.

ಪತಿಯ ಅಗಲಿಕೆ, ಕುಟುಂಬಸ್ಥರ ನೋವು, ಮಕ್ಕಳ ದುಃಖ ಈ ಎಲ್ಲದರ ನಡುವೆಯೂ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ತಮ್ಮ ಕರ್ತವ್ಯ ಮರೆತಿಲ್ಲ. ಪುನೀತ್ ನಿಧನದ ವೇಳೆ ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಿದ ಸರ್ಕಾರವನ್ನು ಅಶ್ವಿನಿ ಸ್ಮರಿಸಿದ್ದಾರೆ.

Dhruti, daughter of Puneet Raj Kumar, who received her father's final appearance

ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಗೆ ಪತ್ರ ಬರೆದಿರುವ ಅಶ್ವಿನಿ ಪುನೀತ್ ರಾಜಕುಮಾರ್, ಶ್ರೀಪುನೀತ್ ರಾಜ್ ಕುಮಾರ್ ನಿಧನ ಎಲ್ಲರಿಗೂ ಆಘಾತ ತಂದ ಸಂಗತಿ. ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದವರು ಪುನೀತ್ ರಾಜ್ ಕುಮಾರ್ ‌.

ನಮ್ಮ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ನಾವು ಅವರನ್ನು ಗೌರವಯುತವಾಗಿ ಕಳುಹಿಸಿಕೊಡಬೇಕಿತ್ತು. ಅಂತ್ಯ ಸಂಸ್ಕಾರಕ್ಕೆ ಎಲ್ಲ ವ್ಯವಸ್ಥೆ ಕಲ್ಪಿಸಿ ,ಭದ್ರತೆ ಒದಗಿಸಿದ್ದಿರಿ, ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದ್ದಿರಿ. ನಿಮ್ಮ ಈ ಎಲ್ಲ ಸಹಕಾರಕ್ಕ ಧನ್ಯವಾದ ಎಂದು ಅಶ್ವಿನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. .ಜಿಲ್ಲಾಧಿಕಾರಿ ಮಾತ್ರವಲ್ಲದೇ ಗೃಹ ಸಚಿವರು ಹಾಗೂ ಸರ್ಕಾರಕ್ಕೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೃತಜ್ಞತೆ ಅರ್ಪಿಸಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular