ಸೋಮವಾರ, ಏಪ್ರಿಲ್ 28, 2025
HomeCinemaಬೆಳಕಿನ ಹಬ್ಬವನ್ನು ಸಿಂಪಲ್ ಬೆಡಗಿ ಶ್ವೇತ ಶ್ರೀವಾತ್ಸವ್ ಆಚರಿಸಿದ್ದು ಹೇಗೆ ಗೊತ್ತಾ..?

ಬೆಳಕಿನ ಹಬ್ಬವನ್ನು ಸಿಂಪಲ್ ಬೆಡಗಿ ಶ್ವೇತ ಶ್ರೀವಾತ್ಸವ್ ಆಚರಿಸಿದ್ದು ಹೇಗೆ ಗೊತ್ತಾ..?

- Advertisement -

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಶ್ವೇತಾ ಶ್ರೀವಾತ್ಸವ್,‘ಕಿರಗೂರಿನ ಗಯ್ಯಾಳಿಗಳು’, ‘ಫೇರ್‌ ಅಂಡ್‌ ಲವ್ಲಿ’ ಚಿತ್ರಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದು, ತಾಯ್ತನದ ಕಾರಣಕ್ಕೆ ಚಿತ್ರರಂಗದಿಂದ ಮೂರು ವರ್ಷಗಳಿಂದ ಬಿಡುವು ಪಡೆದಿದ್ದರು.

ಸ್ಯಾಂಡಲ್ ವುಡ್ ನಟಿ ಶ್ವೇತಾ ಶ್ರೀವತ್ಸವ್ ಸದ್ಯ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಮಗಳ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತ ಸಂತಸ ವ್ಯಕ್ತಪಡಿಸುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ವೀಟ್ ಆಗಿರುವ ಶ್ವೇತಾ ಸಿನಿಮಾದಿಂದ ದೂರ ಇದ್ದರು ಪ್ರೇಕ್ಷಕರ ಜೊತೆ ಸಂಪರ್ಕದಲ್ಲಿ ಇದ್ದರು.

ಈಗ ಮಗಳು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದಾಡುತ್ತಿದ್ದಾಳೆ. ಶ್ವೇತಾ ಮತ್ತೆ ನಟನೆಯತ್ತ ಮುಖಮಾಡಲು ಸಜ್ಜಾಗಿದ್ದಾರೆ. ಈಗ ಅವರು ಒಬ್ಬರೇ ಚಿತ್ರರಂಗಕ್ಕೆ ಮರಳಲು ಸಜ್ಜಾಗಿಲ್ಲ, ಒಳ್ಳೆಯ ಸ್ಕ್ರಿಪ್ಟ್‌ ಸಿಕ್ಕಿದರೆ ಮಗಳು ಅಶ್ಮಿತಾ ಶ್ರೀವಾತ್ಸವ್‌ ಜತೆಗೆ ಇನಿಂಗ್ಸ್‌ ಆರಂಭಿಸಲು ತಯಾರಿಯಲ್ಲಿದ್ದಾರೆ.

ಶ್ವೇತಾ, ಎರಡು ವರ್ಷಗಳಿಂದ ಮಗಳ ಜತೆಗೆ 24X7 ಎನ್ನುವಂತೆ ಸಮಯ ಕಳೆಯುತ್ತಿದ್ದಾರೆ. ಅವರ ಮಗಳು ಅಶ್ಮಿತಾ ಅವರಿಗಷ್ಟೇ ವಿಶೇಷ ಮಗು ಎನಿಸಿಲ್ಲ, ಆ ಪುಟಾಣಿಯು ತನ್ನ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ಗೂ ತುಂಬಾ ವಿಶೇಷವೇ ಆಗಿ ಕಾಣಿಸುತ್ತಿದ್ದಾಳೆ. ಆಕೆಗೆ ಲಕ್ಷಾಂತರ ಅಭಿಮಾನಿಗಳ ಸಮೂಹವೇ ಇದೆ.

ಅಶ್ಮಿತಾಗೆ ಆರು ತಿಂಗಳು ತುಂಬಿದಾಗ ಆಕೆಗಾಗಿ ಶ್ವೇತಾ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತ್ಯೇಕ ಖಾತೆ ತೆರೆದಿದ್ದರು. ಅಶ್ಮಿತಾಗೆ ಎರಡನೇ ವರ್ಷ ತುಂಬುವುದರೊಳಗೆ ಆಕೆಯ ಫಾಲೋವರ್ಸ್‌ಗಳ ಸಂಖ್ಯೆ ಒಂದು ಲಕ್ಷ ದಾಟಿದೆ! ಅಂದರೆ, ಯಾರು ಬೇಕಾದರೂ ಊಹಿಸಬಹುದು ಈ ‘ಬೇಬಿ ಸೆಲೆಬ್ರಿಟಿ’ ಸಾಮಾಜಿಕ ಜಾಲತಾಣದಲ್ಲಿ ಎಷ್ಟೊಂದು ಫೇಮಸ್ಸು ಅಂಥ.

ಚಿತ್ರರಂಗದಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಕುಟುಂಬದ ಜೊತೆಗೆ ಕಾಲ ಕಳೆದಿದ್ದ ಶ್ವೇತ ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ರೂ, ಮಗಳ ಜೊತೆಗಿನ ಪ್ರತಿ ಕ್ಷಣವನ್ನೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡೋದನ್ನು ಮರೆತಿಲ್ಲ.

ಸದ್ಯ ದೀಪಾವಳಿ ಹಬ್ಬವಾಗಿರುವುದರಿಂದ ಮಗಳೊಂದಿಗಿನ ಹಬ್ಬದ ಸಂಭ್ರಮವನ್ನು ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ಶ್ವೇತಾ ಸಾಂಪ್ರದಾಯಕ ಧರಿಸಿನಲ್ಲಿ ಮಿಂಚಿದ್ದಾರೆ. ಸೀರೆ ತೊಟ್ಟು ಆಭರಣ ಧರಿಸಿ ಶ್ವೇತಾ ಕ್ಯಾಮರಾಗೆ ಪೋಸ್ ನೀಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಮುದ್ದು ಮಗಳನ್ನು ಮೊಗ್ಗಿನ ಜಡೆ ಹಾಕಿ, ಲಂಗ, ಕುಪ್ಪಸ ತೊಡಿಸಿ ಸಿಂಗರಿಸಿರುವ ಫೋಟೋವಂತೂ ಎಲ್ಲರ ಮೆಚ್ಚುಗೆ ಗಳಿಸಿದೆ. ಅಮ್ಮನಂತೆ ಮಗಳು ಕೂಡ ಕ್ಯಾಮರಾಗೆ ಪೋಸ್ ನೀಡಿದ್ದು, ಎಲ್ಲರ ಚಿತ್ತ ಅಶ್ಮಿತಾಳತ್ತ ಎನ್ನುವಂತಾಗಿದೆ.

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular