ಭಾನುವಾರ, ಜೂನ್ 15, 2025
HomeCinemaನಟಿ ನಯನಾ ಹಂಚಿಕೊಂಡ ಸಂತಸದ ಸುದ್ದಿ ಏನು ಗೊತ್ತಾ..?

ನಟಿ ನಯನಾ ಹಂಚಿಕೊಂಡ ಸಂತಸದ ಸುದ್ದಿ ಏನು ಗೊತ್ತಾ..?

- Advertisement -

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಸೀಸನ್ 1 ಶೋ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಟಿ ನಯನಾ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ಹೌದು, ಕಾಮಿಡಿ ಕಿಲಾಡಿ ಶೋ ನಲ್ಲಿ ಮೊದಲ ಸಂಚಿಕೆಯಲ್ಲಿಯೇ ತನ್ನ ಅಭಿನಯದ ಮೂಲಕ ಮೋಡಿ ಮಾಡಿ ಫಿನಾಲೆ ಹಂತದವರೆಗೂ ತಲುಪಿದ ಈಕೆ, ಶೋ ಮುಗಿದ ಬಳಿಕ ಸಾಲು ಸಾರು ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿಯೇ ಅಭಿನಯಿಸಿದರು.

ನಿಖಿಲ್ ಅವರ ಸೀತಾರಾಮ ಕಲ್ಯಾಣ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಡೆಯ. ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ಮಿಂಚಿದ್ದರು. ಈ ನಡುವೆಯೇ ಶರತ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನಾ,ಸಣ್ಣ ಬ್ರೇಕ್ ನ ನಂತರ ಮತ್ತೆ ತೆರೆಯ ಮೇಲೆ ಬಂದು ಸಾಲು ಸಾಲು ಶೋಗಳ ನಿರೂಪಣೆ ಜೊತೆಗೆ ಸಿನಿಮಾಗಳಲ್ಲಿಯೂ ಬ್ಯುಸಿ ಆದರು.

ಇನ್ನು ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಪ್ರಸಾರ ಆರಂಭಿಸಿದ ಕಾಮಿಡಿ ಕಿಲಾಡಿಗಳು ಹೊಸ ಸೀಸನ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ನಯನಾ ಹೊಸದೊಂದು ಸುದ್ದಿಯ ಜೊತೆಗೆ ಸಂತೋಷ ಹಂಚಿಕೊಂಡಿದ್ದಾರೆ. ಹೌದು ನಯನಾ ಅವರು ಇದೇ ಮೊದಲ ಬಾರಿಗೆ ಧಾರಾವಾಹಿಯೊಂದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಎಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ ಪ್ರಸಾರವಾಗುತ್ತಿರುವ ಶ್ರೀ ಯಡಿಯೂರು ಸಿದ್ದಂಲಿಂಗೇಶ್ವರ ಸ್ವಾಮಿ ಧಾರಾವಾಹಿಯಲ್ಲಿ ನಯನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ತಿಳಿಸಿ ಸಂತೋಷ ಹಂಚಿಕೊಂಡಿದ್ದಾರೆ.

ಹೌದು, ನಟ ನಿರ್ದೇಶಕ ನವೀನ್ ಕೃಷ್ಣ ಅವರು ನಿರ್ದೇಶನ ಮಾಡುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಹರೀಶ್ ರಾಜ್. ನಯನಾ ಸೇರಿದಂತೆ ಬಹಳಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ಇನ್ನು ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಮಹದೇಶ್ವರ. ರಾಧಾ ಕಲ್ಯಾಣ ಧಾರಾವಾಹಿ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನವೀನ್ ಕೃಷ್ಣ ಅವರು ಇದೀಗ ಸ್ಟಾರ್ ಸುವರ್ಣ ವಾಹಿನಿಗೆ ಬಂದಿದ್ದು ಮತ್ತೊಮ್ಮೆ ಭಕ್ತಿ ಪ್ರಧಾನವಾದ ಧಾರಾವಾಹಿ ನಿರ್ದೇಶನ ಮಾಡುವ ಮೂಲಕ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಕತೆಯನ್ನು ಜನರ ಮುಂದೆ ಇಡುತ್ತಿದ್ದಾರೆ.

ಅದಾಗಲೇ ಕೆಲ ದಿನಗಳ ಹಿಂದಷ್ಟೇ ಬದಲಾವಣೆಯ ಬೆಳಕು ಎಂಬ ಕಾರ್ಯಕ್ರಮ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿಯೇ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಧಾರಾವಾಹಿಯನ್ನು ಉದ್ಘಾಟನೆ ಮಾಡಿಸಿದ್ದು ಸಿದ್ಧಗಂಗಾ ಶ್ರೀಗಳು. ಧರ್ಮಸ್ಥಳದ ಧರ್ಮಾಧಿಕಾರಿ ಗಳಾದ ಶ್ರೀ ವಿರೇಂದ್ರ ಹೆಗ್ಗಡೆ ಅವರು ಸೇರಿದಂತೆ ನಾಡಿನ ಅನೇಕ ಸ್ವಾಮಿಜಿಗಳು ಧಾರಾವಾಹಿಗೆ ಶುಭ ಹಾರೈಸಿದ್ದು ಪ್ರತಿದಿನ ರಾತ್ರಿ ಎಂಟು ಗಂಟೆಗೆ ಧಾರಾವಾಹಿ ಪ್ರಸಾರವಾಗುತ್ತಿದೆ..

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular