ಸೋಮವಾರ, ಏಪ್ರಿಲ್ 28, 2025
HomeCoastal NewsUdupi New DC : ಉಡುಪಿ ಡಿಸಿ ಜಗದೀಶ್‌ ವರ್ಗಾವಣೆ, ನೂತನ ಡಿಸಿಯಾಗಿ ಕೂರ್ಮ‌ ರಾವ್

Udupi New DC : ಉಡುಪಿ ಡಿಸಿ ಜಗದೀಶ್‌ ವರ್ಗಾವಣೆ, ನೂತನ ಡಿಸಿಯಾಗಿ ಕೂರ್ಮ‌ ರಾವ್

- Advertisement -

ಉಡುಪಿ : ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಜಿ.ಜಗದೀಶ್‌ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಇಂದು ಆದೇಶ ಹೊರಡಿಸಿದೆ. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಎಂ. ಕೂರ್ಮರಾವ್‌ ಅವರನ್ನು ನೇಮಕ ಮಾಡಿದೆ.

ಜಿ. ಜಗದೀಶ್‌ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ಭಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ರೆ, ಕಲಬುರಗಿಯಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಕೂರ್ಮರಾವ್‌ ಅವರನ್ನು ಉಡುಪಿಗೆ ವರ್ಗಾವಣೆ ಮಾಡಲಾಗಿದೆ. 2019 ರಿಂದ ಅಗಸ್ಟ್‌ 20ರಂದು ಉಡುಪಿ ಜಿಲ್ಲಾಧಿಕಾರಿಯಾಗಿ ಜಿ.ಜಗದೀಶ್‌ ಅವರು ಅಧಿಕಾರ ಸ್ವೀಕಾರ ಮಾಡಿದ್ದರು.

ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಜಿ.ಜಗದೀಶ್‌ ಅವರು ಜಿಲ್ಲೆಯಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಅನುಪಸ್ಥಿತಿಯಲ್ಲಿಯೂ ಕೊರೊನಾ ವೈರಸ್‌ ನಿಯಂತ್ರಣ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಮಾತ್ರವಲ್ಲದೇ ಕಂದಾಯ ಇಲಾಖೆಯಲ್ಲಿಯೂ ಜಿಲ್ಲೆಗೆ ಹಲವು ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ಶ್ರಮಿಸಿದ್ದಾರೆ.

ಇದನ್ನೂ ಓದಿ : PUC : ದ್ವಿತೀಯ ಪಿಯು ಆರಂಭಕ್ಕೆ ಮಾರ್ಗಸೂಚಿ ಪ್ರಕಟ : ದ.ಕ ಡಿಸಿ ಕೆ.ವಿ.ರಾಜೇಂದ್ರ

ಇದನ್ನೂ ಓದಿ : Ravi Katapadi : ಡಾರ್ಕ್ ಅಲೈಟ್ ವೇಷ ತೊಟ್ಟು 6 ಮಕ್ಕಳ ಜೀವ ಉಳಿಸಲು ಮುಂದಾದ ರವಿ ಕಟಪಾಡಿ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular