ಬುಧವಾರ, ಏಪ್ರಿಲ್ 30, 2025
HomeCoastal NewsTawar Chand Gehlot : ಉಡುಪಿ ಶ್ರೀ ಕೃಷ್ಣ, ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ರಾಜ್ಯಪಾಲ...

Tawar Chand Gehlot : ಉಡುಪಿ ಶ್ರೀ ಕೃಷ್ಣ, ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್

- Advertisement -

ಉಡುಪಿ /ಕುಂದಾಪುರ : ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ (Tawar Chand Gehlot) ಅವರು ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯಪಾಲರು ಉಡುಪಿಯ ಶ್ರೀ ಕೃಷ್ಣ ಮಠ (Udupi Shri Krishna ) ಹಾಗೂ ಕೊಲ್ಲೂರು ಮೂಕಾಂಬಿಕೆಯ (kollur mookambika) ದರ್ಶನ ಪಡೆದು ನಂತರ ಮುರುಡೇಶ್ವರಕ್ಕೆ ತೆರಳಿದ್ದಾರೆ.

Udupi Shri Krishna, kollur mookambika temple visit govenor Tawar Chand Gehlot
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಗೌರವ ಸ್ವೀಕರಿಸಿದ ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋತ್

ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಕಡೆಗೋಲು ಶ್ರೀಕೃಷ್ಣ ನ ವಿಶೇಷ ದರ್ಶನ ಪಡೆದಿದ್ದಾರೆ. ನಂತರ ಮಠದಲ್ಲಿ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರನ್ನು ಭೇಟಿಯಾದ ರಾಜ್ಯಪಾಲರು ಮಠದಲ್ಲಿ ಕೆಲವು ಹೊತ್ತು ಸ್ವಾಮೀಜಿಗಳ ಜೊತೆಗೆ ಸಮಾಲೋಚನೆಯನ್ನು ನಡೆಸಿದ್ದಾರೆ.

Udupi Shri Krishna, kollur mookambika temple visit govenor Tawar Chand Gehlot
ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರನ್ನು ಭೇಟಿಯಾದ ರಾಜ್ಯಪಾಲರು ಮಠದಲ್ಲಿ ಕೆಲವು ಹೊತ್ತು ಸ್ವಾಮೀಜಿಗಳ ಜೊತೆಗೆ ಸಮಾಲೋಚನೆಯನ್ನು ನಡೆಸಿದ್ದಾರೆ.

ಈ ವೇಳೆಯಲ್ಲಿ ಪರ್ಯಾಯ ಅದಮಾರು ಮಠದಿಂದ ರಾಜ್ಯಪಾಲರಿಗೆ ಗೌರವ ಸಲ್ಲಿಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್‌ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.

Udupi Shri Krishna, kollur mookambika temple visit govenor Tawar Chand Gehlot
ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ರಾಜ್ಯಪಾಲರು

ಉಡುಪಿಯ ಶ್ರೀಕೃಷ್ಣನ ದರ್ಶನ ಪಡೆದ ನಂತರ ರಾಜ್ಯಪಾಲರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಯನ್ನು ನೀಡಿದ್ದಾರೆ. ಮೂಕಾಂಬಿಕೆಯ ದರ್ಶನ ಪಡೆದ ನಂತರದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

Udupi Shri Krishna, kollur mookambika temple visit govenor Tawar Chand Gehlot
ಕೊಲ್ಲೂರಿನಲ್ಲಿ ರಾಜ್ಯಪಾಲರು

ಉಡುಪಿ, ಕೊಲ್ಲೂರು ದೇವರ ದರ್ಶನದ ನಂತರ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ಮುರುಡೇಶ್ವರಕ್ಕೆ ತೆರಳಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯಪಾಲರು ಕರಾವಳಿ ಜಿಲ್ಲೆಗಳ ಪ್ರವಾಸವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ : Omicron emergency meeting : ಓಮಿಕ್ರಾನ್‌ ಪತ್ತೆ ಹಿನ್ನೆಲೆ : ತುರ್ತು ಸಭೆ ಕರೆದ ಸಿಎಂ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : ಬಿಜೆಪಿಗೆ ಮತ್ತೊಂದು ಶಾಕ್​ ನೀಡಿತಾ ಟಿಎಂಸಿ..? ಕುತೂಹಲ ಮೂಡಿಸಿದ ಗೌತಮ್ ಅದಾನಿ-ಮಮತಾ ಬ್ಯಾನರ್ಜಿ ಭೇಟಿ..!

( Udupi Shri Krishna, kollur mookambika temple visit govenor Tawar Chand Gehlot )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular