ಬ್ರಹ್ಮಾವರ : ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದ ಜಾಡು ಹಿಡಿದಿರೋ ಪೊಲೀಸರು ಇಬ್ಬರು ಸುಫಾರಿ ಹಂತಕರನ್ನು ಬಂಧಿಸಿದ್ದಾರೆ. ಅಲ್ಲದೇ ಪತಿಯೇ ಪತ್ನಿಯ ಹತ್ಯೆಗೆ ಸುಫಾರಿ ನೀಡಿದ್ದಾರೆ ಅನ್ನೋ ಮಾತುಗಳು ಹರಡಿ ದಾಡುತ್ತಿದೆ.

ಜುಲೈ 12ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಉಪ್ಪಿನಕೋಟೆಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ವಿಶಾಲ ಗಾಣಿಗ ಕೊಲೆ ನಡೆದಿದ್ದು, ಕೊಲೆಗಾರರು ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ಕದ್ದು ಪರಾರಿಯಾಗಿದ್ದರು. ಆದರೆ ಕೊಲೆ ಪ್ರಕರಣದ ಜಾಡು ಹಿಡಿದಿದ್ದ ಪೊಲೀಸರಿಗೆ ಹಂತಕರ ಜಾಡು ಹಿಡಿಯೋದು ಸುಲಭ ಮಾತಾಗಿರಲಿಲ್ಲ. ಇದೇ ಕಾರಣಕ್ಕೆ ಪೊಲೀಸರ ಐದು ತಂಡ ಈ ಪ್ರಕರಣದಲ್ಲ ಕಾರ್ಯನಿರ್ವಹಿಸುತ್ತಿದೆ.

ಆವತ್ತು ವಿಶಾಲ ಗಾಣಿಗ ಅಪಾರ್ಟ್ಮೆಂಟ್ ನಲ್ಲಿ ಒಬ್ಬರೇ ಇದ್ದಾಗ ಕೊಲೆ ನಡೆದಿದೆ. ಮನೆಗೆ ಬಂದಿದ್ದ ಹಂತಕರು ಯಾವುದೇ ಸುಳಿವನ್ನು ಪತ್ತೆ ಹಚ್ಚಲು ಅಪಾರ್ಟ್ಮೆಂಟ್ ನಲ್ಲಿ ಸಿಸಿ ಕ್ಯಾಮರಾ ಇರಲಿಲ್ಲ. ಹೀಗಾಗಿಯೇ ಪೊಲೀಸರು ವಿಶಾಲ ಗಾಣಿಗ ಕೊಲೆಯಾದ ದಿನ ಯಾರೊಂದಿಗೆಲ್ಲಾ ಮೊಬೈಲ್ನಲ್ಲಿ ಮಾತನಾಡಿದ್ದಾರೆ ಅನ್ನೋ ಮಾಹಿತಿಯನ್ನು ಕಲೆ ಹಾಕಿದ್ದರು. ಅಲ್ಲದೇ ಆಟೋ ಚಾಲಕ, ಗ್ಯಾಸ್ ಏಜೆನ್ಸಿಯ ಸಿಬ್ಬಂದಿಯನ್ನು ಕರೆದು ವಿಚಾರಣೆ ನಡೆಸಿದ್ದರು. ಸಾಲದಕ್ಕೆ ವಿಶಾಲ ಗಾಣಿಗ ಮನೆಯವ ರಿಂದಲೂ ಮಾಹಿತಿ ಪಡೆದುಕೊಂಡಿದ್ದರು. ಆದರೂ ಕೊಲೆಗಾರರ ಸುಳಿವು ಪತ್ತೆಯಾಗಿರಲಿಲ್ಲ.

ಆದರೆ ಕೊಲೆಯಾದ ಅಪಾರ್ಟ್ಮೆಂಟ್ ನಲ್ಲಿ ಹಂತಕರು ಹಲವು ರೀತಿಯ ಸಾಕ್ಷ್ಯಗಳನ್ನು ಬಿಟ್ಟು ಪರಾರಿಯಾಗಿದ್ದರು. ಕೊಲೆಗಾರರು ಮನೆಯಲ್ಲಿದ್ದ ಹಾಗೂ ವಿಶಾಲ ಮೈ ಮೇಲೆ ಇದ್ದ ಎಲ್ಲಾ ಚಿನ್ನಾಭರಣಗಳನ್ನು ಕದ್ದಿಲ್ಲ. ಇನ್ನು ವಿಶಾಲ ಗಾಣಿಗ ಮನೆಗೆ ಯಾರೇ ಬಂದ್ರೂ ಬಾಗಿಲು ತೆಗೆಯುತ್ತಾ ಇರಲಿಲ್ಲ. ಪತಿ ರಾಮಕೃಷ್ಣ ಗಾಣಿಗ ಅವರ ಸ್ನೇಹಿತರೇ ಬಂದ್ರೂ ವಿಡಿಯೋ ಕಾಲ್ ಮಾಡಿಯೇ ಬಾಗಿಲು ತೆಗೆಯುತ್ತಿದ್ದರು. ಹಾಗಿದ್ರೆ ಆವತ್ತು ವಿಶಾಲ ಗಾಣಿಗ ಬಾಗಿಲು ತೆಗೆದಿದ್ದಾರೆ ಅಂದ್ರೆ ಪರಿಚಿತರೇ ಈ ಕೃತ್ಯವನ್ನೆಸಗಿದ್ದಾರೆ ಅನ್ನೋ ಅನುಮಾನ ಪೊಲೀಸರಿಗೆ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪ್ರಕರಣ ತನಿಖೆ ಚುರುಕು, ಪೊಲೀಸರ 4 ತಂಡ ರಚನೆ
ಅಪಾರ್ಟ್ಮೆಂಟ್ನಲ್ಲಿ ಇಬ್ಬರು ಚಹಾ ಕುಡಿದಿರುವ ಕಪ್ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಪೊಲೀಸರು ಹೊರ ರಾಜ್ಯದಲ್ಲಿ ಅವಿತು ಕುಳಿತಿದ್ದ ಇಬ್ಬರು ಸುಫಾರಿ ಹಂತರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗುತ್ತಿದೆ. ಹಂತಕರು ನೀಡಿದ ಮಾಹಿತಿಯ ಆಧಾರದ ಮೇಲೆಯೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇನ್ನೊಂದೆಡೆ ಪತಿ ರಾಮಕೃಷ್ಣಗಾಣಿಗ ವಿರುದ್ದವೇ ಆರೋಪ ಕೇಳಿಬಂದಿದೆ. ರಾಮಕೃಷ್ಣ ಗಾಣಿಗ ತನ್ನ ಪತ್ನಿಯ ಹತ್ಯೆಗೆ ಸುಫಾರಿ ನೀಡಿದ್ದಾನೆ ಅನ್ನೋ ಮಾತು ಕೇಳಿಬರುತ್ತಿದೆ. ಕೊಲೆಯಾದ ದಿನ ಕೊನೆಯದಾಗಿ ವಿಶಾಲ ಗಾಣಿಗ ತನ್ನ ಪತಿಗೆ ವಿಡಿಯೋ ಕಾಲ್ ಮಾಡಿದ್ದಾರೆ. ಅಲ್ಲದೇ ಆಸ್ತಿ ವಿಚಾರದ ಕುರಿತು ಪತಿಗೆ ತಿಳಿಸಿದ್ದಾರೆ. ಆಸ್ತಿ, ಇಲ್ಲಾ ಕೌಟುಂಬಿಕ ವಿಚಾರಕ್ಕೆ ಈ ಕೊಲೆ ನಡೆದಿರಬಹುದು ಎನ್ನಲಾಗುತ್ತಿದೆ. ಪೊಲೀಸರು ಕೂಡ ವಿಶಾಲ ಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸುಫಾರಿ ಕಿಲ್ಲರ್ಗಳನ್ನು ಬಳಸಿ ಈ ಹತ್ಯೆ ಮಾಡಲಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಜುಲೈ 18ರಂದು ಮೂರನೇ ಬಾರಿಗೆ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಕೊಲೆ ಪ್ರಕರಣದ ಕುರಿತು ಮಹತ್ವದ ಸುಳಿವು ಪತ್ತೆಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಕಣ್ಣೇ ಅದಿರಿಂದಿ ಗಾಯಕಿಗೆ ಸಂಕಷ್ಟ….! ಮೈಸಮ್ಮ ಭಕ್ತರ ಆಕ್ರೋಶಕ್ಕೆ ಗುರಿಯಾದ ಮಂಗ್ಲಿ…!!
ಅಪಾರ್ಟ್ಮೆಂಟ್ನಲ್ಲಿ ನಿಗೂಢವಾಗಿ ಕೊಲೆಯಾಗಿರುವ ವಿಶಾಲ ಗಾಣಿಗ ಕೊಲೆ ಪ್ರಕರಣ ಇದೀಗ ಕೌಟುಂಬಿಕ ವಿಚಾರಕ್ಕೆ ತಿರುಗಿದೆ. ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆಯನ್ನು ನಡೆಸುತ್ತಿ ದ್ದಾರೆ. ಒಟ್ಟಿನಲ್ಲಿ ಕೊಲೆ ಪ್ರಕರಣವನ್ನು ಬೇಧಿಸುವ ಮೂಲಕ ಪೊಲೀಸರು ಕರಾವಳಿ ಜನರ ಆತಂಕವನ್ನು ದೂರ ಮಾಡಬೇಕಾದ ಅನಿವಾರ್ಯತೆಯಿದೆ.