ಮೇಕೆದಾಟು ಯೋಜನೆ ಯಾವತ್ತೂ ಜಾರಿಯಾಗಲ್ಲ…! ನಮಗೆ ಕೇಂದ್ರದ ಅಭಯವಿದೆ ಎಂದ ಸಿಎಂ ಸ್ಟಾಲಿನ್…!!

ಮೇಕದಾಟು ಪ್ರಕರಣದಲ್ಲಿ ಕರ್ನಾಟಕವನ್ನು ಹತ್ತಿಕ್ಕುವ  ಶತ ಪ್ರಯತ್ನ ನಡೆಸಿರುವ ತಮಿಳುನಾಡು ಮೇಕದಾಟು ವಿಚಾರದಲ್ಲಿ ಕರ್ನಾಟಕದ ಜೊತೆ ಮಾತನಾಡುವುದರಲ್ಲಿ ಅರ್ಥವಿಲ್ಲ. ಯೋಜನೆ ಜಾರಿ ಆಗೋದಿಲ್ಲ ಎಂದು ನಮಗೆ ಕೇಂದ್ರ ಭರವಸೆ ನೀಡಿದೆ ಎನ್ನುವ ಮೂಲಕ ತಮಿಳುನಾಡಿ ಸಿಎಂ ಹೊಸ ಬಾಂಬ್ ಸಿಡಿಸಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತಮಿಳುನಾಡಿನ ಸಿಎಂ ಸ್ಟಾಲಿನ್, ನಮ್ಮ ಜನಸಂಪನ್ಮೂಲ ಸಚಿವರು ಕರ್ನಾಟಕದ ಜೊತೆ ಮಾತುಕತೆಯ ಬಗ್ಗೆ ತಮ್ಮ ಅಭಿಪ್ರಾಯ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.

ಮೇಕೆದಾಟು ಯೋಜನೆಯನ್ನು ಮುಂದುವರೆಸಲು ಕರ್ನಾಟಕಕ್ಕೆಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಜಲಸಂಪನ್ಮೂಲ ಶಕ್ತಿ  ಸಚಿವರು ತಮಿಳುನಾಡಿಗೆ ಅಭಯ ನೀಡಿದ್ದಾರೆ ಎಂದು ಸ್ಟಾಲಿನ್ ಹೇಳುವ ಮೂಲಕ ಕರ್ನಾಟಕದ  ಮೇಕೆದಾಟು ಯೋಜನೆ ಜಾರಿಯಾಗೋಲ್ಲ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಮೇಕೆದಾಟಿನ ಕುರಿತು ಇನ್ನು ಕರ್ನಾಟಕದೊಂದಿಗೆ ಯಾವುದೇ ಮಾತುಕತೆಯ ಅಗತ್ಯವಿಲ್ಲ. ಮಾತ್ರವಲ್ಲ ಇದಕ್ಕಾಗಿ ತಮಿಳುನಾಡು, ಪುದುಚೇರಿ ಸಿಎಂಗಳ ಜೊತೆಗಿನ ಜಂಟಿ ಕಾರ್ಯತಂತ್ರದ ಅಗತ್ಯವೂ ಇಲ್ಲ. ಮೇಕೆದಾಟು ಯೋಜನೆಬಗ್ಗೆ ಕೇಂದ್ರದ ಅಭಯವಿದೆ. ಅಲ್ಲದೇ ಈ ವಿಚಾರ ಸುಪ್ರೀಂ ಕೋರ್ಟ್ ಮುಂದಿದೆ ಹೀಗಾಗಿ ನಾವು ಈ ವಿಚಾರವನ್ನು ಕಾನೂನು ಹೋರಾಟದ ಮೂಲಕ ಎದುರಿಸುತ್ತೇವೆ ಎಂದಿದ್ದಾರೆ.

Comments are closed.