ಬೆಂಗಳೂರು : ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಎರಡು ಅಲೆಯಿಂದಾಗಿ ಜನಜೀವನ ಅಕ್ಷರಷಃ ಕುಸಿದು ಹೋಗಿದೆ .ಜನರು ವ್ಯಾಪಾರ ವಹಿವಾಟಿನ ಮೇಲೆ ಕೊರೋನಾದಿಂದಾದ ವ್ಯತಿರಿಕ್ತ ಪರಿಣಾಮ ತಡೆಯಲಾರದೇ ಕಂಗಲಾಗಿದ್ದಾರೆ. ಈ ಮಧ್ಯೆ ರಾಜ್ಯಕ್ಕೆ ಕೊರೋನಾ ಮೂರನೇ ಅಲೆ ಕಾಲಿಟ್ಟಿರೋದು ಜನರ ಆತಂಕಕ್ಕೆಕಾರಣವಾಗಿತ್ತು. ಹೀಗಾಗಿ ಸರ್ಕಾರವೂ ಮೂರನೆ ಅಲೆಯ ಪ್ರಾರಂಭದಲ್ಲೇ ಸಾವು ನೋವಿನ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ( relaxation in Karnataka )ಕಠಿಣ ರೂಲ್ಸ್ ಜಾರಿಗೆ ತಂದಿದೆ.
ಸದ್ಯಕ್ಕೆ ವೀಕೆಂಡ್ ಕರ್ಪ್ಯೂ ರದ್ದುಗೊಳಿಸಲಾಗಿದ್ದರೂ ನೈಟ್ ಕರ್ಪ್ಯೂ ಜಾರಿಯಲ್ಲಿದೆ. ಈ ನೈಟ್ ಕರ್ಪ್ಯೂನಿಂದ ಬಾರ್ ರೆಸ್ಟೋರೆಂಟ್ ಹಾಗೂ ಹೊಟೇಲ್ ಮಾಲೀಕರು ವ್ಯಾಪಾರ ವಹಿವಾಟು ಕುಸಿಯುವ ಭೀತಿಯಲ್ಲಿದ್ದಾರೆ. ಈ ಮಧ್ಯೆ ಜನರಿಗೆ ಬಿಡುಗಡೆಯಾಗಿರುವ ಕೊರೋನಾದ ಅಂಕಿಅಂಶ ಕೊಂಚ ನೆಮ್ಮದಿ ತಂದಿದೆ. ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆಗಿಂತ ಆಸ್ಪತ್ರೆಗೆ ದಾಖಲಾಗುವವರ ಆಧಾರದ ಮೇಲೆ ಟಫ್ ರೂಲ್ಸ್ ತರಲು ಸರ್ಕಾರ ತೀರ್ಮಾನಿಸಿದೆ.
ಹೀಗಾಗಿ ರಾಜ್ಯದಲ್ಲಿ ಸದ್ಯ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರೋದರಿಂದ ಸದ್ಯದಲ್ಲೇ ಜನರಿಗೆ ಟಫ್ ರೂಲ್ಸ್ ಗಳಿಂದ ಮುಕ್ತಿ ಸಿಗೋ ಸಾಧ್ಯತೆ ಇದೆ. ಕೊರೋನಾ ಮೂರನೇ ಅಲೆ ರಾಜ್ಯಕ್ಕೆ ಕಾಲಿಟ್ಟರೂ ಕೇವಲ ಶೀತ,ಜ್ವರ,ಗಂಟಲುನೋವು,ಮೈಕೈನೋವಿಗಷ್ಟೇ ಸೀಮಿತವಾಗುತ್ತಿದೆ. ಅದನ್ನು ಹೊರತುಪಡಿಸಿ ಯಾವುದೇ ಗಂಭೀರ ಪ್ರಮಾಣದ ಪ್ರಭಾವ ಬೀರಿಲ್ಲ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 50 ಸಾವಿರದ ಗಡಿದಾಟಿದರೂ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಕಡಿಮೆಇದೆ. ಹಾಗಿದ್ರೇ ಬೆಂಗಳೂರು ಹಾಗೂ ರಾಜ್ಯದಲ್ಲಿ ಆಸ್ಪತ್ರೆ ದಾಖಲಾತಿ ಎಷ್ಟಿದೆ ಅನ್ನೋದನ್ನು ನೋಡೋದಾದರೇ,
ಬೆಂಗಳೂರು ನಗರ :
ದಿನಾಂಕ ಕೇಸ್ ಆಸ್ಪತ್ರೆ ದಾಖಲಾತಿ
ಜ.16 21,071 72
ಜ.17 15,947 81
ಜ.18 25,595 84
ಜ.19 24,135 80
ಜ.20 30,540 81
ಜ.21 29,068 87
ಜ.22 17,266 71
ಇನ್ನು ಒಟ್ಟು ಕರ್ನಾಟಕದಲ್ಲಿ ಈ ಸಂಖ್ಯೆ ಕೊಂಚ ಏರಿಕೆ ಕಂಡಿದೆ.
ಕರ್ನಾಟಕ :
ದಿನಾಂಕ ಕೇಸ್ ಆಸ್ಪತ್ರೆ ದಾಖಲಾತಿ
ಜ.16 34,047 717
ಜ.17 27,156 192
ಜ.18 41,457 213
ಜ.19 40,499 447
ಜ.20 47,754 102
ಜ.21 48,049 185
ಜ.22 42,470 292
ಹೀಗಾಗಿ ಮುಂದಿನ ವಾರದ ಆಸ್ಪತ್ರೆ ದಾಖಲಾತಿ ಸಂಖ್ಯೆ ಆಧರಿಸಿ ರಾಜ್ಯ ಸರ್ಕಾರ ಸದ್ಯ ಚಾಲ್ತಿಯಲ್ಲಿರುವ ಶೇಕಡಾ ೫೦ ರಷ್ಟು ಮಾತ್ರ ಗ್ರಾಹಕರಿಗೆ ಅವಕಾಶ ಕಲ್ಪಿಸುವುದು ಹಾಗೂ ನೈಟ್ ಕರ್ಪ್ಯೂನಿಯಮವನ್ನು ಕೈಬಿಡೋ ಸಾಧ್ಯತೆ ಇದೆ.
ಇದನ್ನೂ ಓದಿ : ಕೊರೋನಾ ಆತಂಕಕ್ಕೆ ಎದುರಾಯ್ತು ಅಂತ್ಯ: ಆರೋಗ್ಯ ಸಚಿವರು ಕೊಟ್ರು ಸಿಹಿಸುದ್ದಿ
ಇದನ್ನೂ ಓದಿ : Covid-19 cases : ಐದು ದಿನಗಳ ಬಳಿಕ ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ
( Corona virus 3rd wave decrease, relaxation for tough rules in Karnataka)