Bangalore Blast : ನಿಗೂಢ ಸ್ಪೋಟಕ್ಕೆ 3 ಬಲಿ : ಪಟಾಕಿ ಅಂಗಡಿ ಮಾಲೀಕ ಬಾಬು ಅರೆಸ್ಟ್‌

ಬೆಂಗಳೂರು : ಪಟಾಕಿ ಸ್ಪೋಟಗೊಂಡು ಮೂವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಹಲವು ಅಂಗಡಿಗಳ ಮೇಲ್ವಾವಣೆ ಹಾರಿ ಹೋಗಿದ್ದು, ಹತ್ತಕ್ಕೂ ಅಧಿಕ ಬೈಕುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪಟಾಕಿ ಅಂಗಡಿಯ ಮಾಲೀಕ ಬಾಬುವನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆ ಸಮೀಪದ ರಾಯನ್‌ ಸರ್ಕಲ್‌ನ ಬಳಿಯಲ್ಲಿರುವ ಪಟಾಕಿ ಗೋಡಾಮಿನಲ್ಲಿ ಸ್ಪೋಟ ಸಂಭವಿಸಿದೆ. ಮೇಲ್ನೋಟಕ್ಕೆ ಸಿಲಿಂಡರ್‌ ಸ್ಪೋಟ ಸಂಭವಿಸಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪಂಕ್ಚರ್‌ ಅಂಗಡಿ ಮಾಲೀಕ ಅಸ್ಲಾಂ, ಡ್ರೈವರ್‌ ಆಗಿರುವ ಮನೋಹರ್‌ ಹಾಗೂ ಅಸ್ಲಾಂ ಎಂಬವರೇ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ.

ಪಟಾಕಿ ಸ್ಪೋಟದಿಂದ ದುರಂತ !

ಪಟಾಕಿ ಗೋಡಾನಿನಲ್ಲಿ ಸ್ಪೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸುಮಾರು ಗೋಡಾನಿನಲ್ಲಿ 60 ಪಟಾಕಿ ಬಾಕ್ಸ್‌ಗಳಿದ್ದು, ಈ ಪೈಕಿ ಒಂದು ಬಾಕ್ಸ್‌ ಸ್ಪೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಪಟಾಕಿ ಗೋಡಾನಿನಲ್ಲಿ ಬೆಂಕಿ ನಂದಿಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿರುವ ಡಿಸಿಪಿ ಪಾಂಡೆ ಅವರು ತಿಳಿಸಿರುವ ಮಾಹಿತಿಯಂತೆ ಸಿಲಿಂಡರ್‌ ಸ್ಪೋಟಗೊಂಡಿಲ್ಲ ಅಲ್ಲದೇ ಕಂಪ್ರೆಸರ್‌ ಕೂಡ ಸ್ಪೋಟಗೊಂಡಿಲ್ಲ ಅನ್ನೋದು ದೃಢಪಟ್ಟಿದೆ. ಹೀಗಾಗಿ ಬೇರೆಯ ಕಾರಣಕ್ಕೆ ಸ್ಪೋಟಗೊಂಡಿರ ಬಹುದು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ನಡೆಸುತ್ತಿದ್ದೇವೆ ಎಂದಿದ್ದಾರೆ.

ಛಿದ್ರ ಛಿದ್ರವಾಯ್ತು ಮೂವರ ಮೃತದೇಹ

ಮೂವರು ಕೂಡ ಪಂಕ್ಚರ್‌ ಅಂಗಡಿಯ ಬಳಿಯಲ್ಲಿ ಕುಳಿತಿದ್ದರು. ಈ ವೇಳೆಯಲ್ಲಿ ಸ್ಪೋಟ ಸಂಭವಿಸುತ್ತಲೇ ಮೂವರ ದೇಹಗಳು ಛಿದ್ರ ಛಿದ್ರವಾಗಿದೆ. ಅಲ್ಲದೇ ಇಬ್ಬರೂ ಕೂಡ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಡಿಸಿಪಿ ಸಂಜೀವ ಪಾಟೀಲ್‌ ಹಾಗೂ ವಿವಿ ಪುರಂ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಎರಡೇ ದಿನದಲ್ಲಿ2 ಘೋರ ದುರಂತ

ಘಟನೆಯಿಂದಾಗಿ ಸಿಲಿಕಾನ್‌ ಸಿಟಿಯ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ದೇವರಚಿಕ್ಕನಹಳ್ಳಿ ಬೆಂಕಿ ದುರಂತ ಸಂಭವಿಸಿ, ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಇದೀಗ ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿಯನ್ನು ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಮತ್ತೊಂದು ಸಿಲಿಂಡರ್‌ ಸ್ಪೋಟ : ಮೂವರು ಸ್ಥಳದಲ್ಲೇ ಸಾವು

ಇದನ್ನೂ ಓದಿ : ಕೌಟುಂಬಿಕ ಕಲಹಕ್ಕೆ 2 ಬಲಿ : ಪುಟ್ಟ ಕಂದಮ್ಮನನ್ನು ಕೊಂದ ಪಾಪಿ ತಂದೆ

( Bangalore Crackers Blast 3 death, Crackers Shop Owner Babu Arrest)

Comments are closed.