ಮಂಗಳವಾರ, ಏಪ್ರಿಲ್ 29, 2025
HomeCrimeCrime News : ಹಳೆ ದ್ವೇಷ ಚಾಕುನಿಂದ ಇರಿದು ಯುವಕನ ಹತ್ಯೆ

Crime News : ಹಳೆ ದ್ವೇಷ ಚಾಕುನಿಂದ ಇರಿದು ಯುವಕನ ಹತ್ಯೆ

- Advertisement -

ದೆಹಲಿ : ಹಳೆ ದ್ವೇಷದ ಹಿನ್ನೆಲೆ ನಾಲ್ಕೈದು ಹುಡುಗರ ತಂಡವೊಂದು 18 ವರ್ಷದ ಯುವಕನನ್ನು ಚಾಕುನಿಂದ (Crime News) ಇರಿದು ಕೊಲೆಗೈದಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಪೂರ್ವ ದೆಹಲಿಯ ಕಲ್ಯಾಣಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆದರೆ ಕೊಲೆಗಾರರು ಯಾರು ಅನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ತ್ರಿಲೋಕಪುರಿ ನಿವಾಸಿ ಅಂಶು ಅಲಿಯಾಸ್ ಬಂದಾ ಎಂಬಾತನಿಗೆ ಅನೇಕ ಇರಿತದ ಗಾಯಗಳ ಬಗ್ಗೆ ಬೆಳಿಗ್ಗೆ 5.11 ಕ್ಕೆ ಮಾಹಿತಿ ಪಡೆದರು. ಪಿಸಿಆರ್ ವ್ಯಾನ್ ಮೂಲಕ ಅವರನ್ನು ಎಲ್ ಬಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ 21 ಬಾರಿ ಇರಿತದ ಗಾಯಗಳೊಂದಿಗೆ ಯುವಕನನ್ನು ದೆಹಲಿಯ ಏಮ್ಸ್‌ ಆಸ್ಪತ್ರಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ (ಪೂರ್ವ) ಅಮೃತ ಗುಗುಲೋತ್ ಹೇಳಿದ್ದಾರೆ. ನಾಲ್ಕೈದು ಹುಡುಗರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಂಶು ಬಹಿರಂಗಪಡಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ : Rain Death : ಸತತ 2 ದಿನ ಸುರಿದ ಭಾರೀ ಮಳೆಗೆ 13 ಮಂದಿ ಸಾವು

ದಾಳಿಕೋರರು ಮತ್ತು ಮೃತ ಯುವಕನೊಂದಿಗೆ ಹಳೆ ದ್ವೇಷವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ, ಆರೋಪಿಯನ್ನು ಯಾವಾಗ ಬಂಧಿಸಲಾಗುವುದು ಎಂದು ನಿಖರ ಕಾರಣವನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.

Mumbai murder : ಹೊಡೆದು ವ್ಯಕ್ತಿಯೋರ್ವನ ಹತ್ಯೆ, ಐವರ ಬಂಧನ

ಮುಂಬೈ : ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಕ್ಕೆ ಐವರನ್ನು (Mumbai murder)‌ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮೃತಪಟ್ಟ ಯುವಕ ಕಳ್ಳತನ ಮಾಡಿದ್ದಾನೆಂದು ಅನುಮಾನಿಸಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಈ ದುರ್ಘಟನೆ ಮುಂಬೈನ ಬೊರಿವಲಿಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ 29 ವರ್ಷದ ಯುವಕನನ್ನು ಹೊಡೆದು ಕೊಂದ ಆರೋಪದ ಮೇಲೆ ಶುಕ್ರವಾರ ಕನಿಷ್ಠ 5 ಜನರನ್ನು ಬಂಧಿಸಲಾಗಿದೆ ಆರೋಪಿಗಳು ಕಳ್ಳತನದ ಶಂಕೆಯಲ್ಲಿ ಜನರ ಗುಂಪೊಂದು ವ್ಯಕ್ತಿಗೆ ಥಳಿಸಿದ ಘಟನೆ ಗುರುವಾರ (ಮೇ 25) ನಡೆದಿದೆ. ಈ ಹಿಂದೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

“ಕಸ್ತೂರ್ಬಾ ಮಾರ್ಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನದ ಶಂಕೆಯ ಮೇಲೆ 29 ವರ್ಷದ ಯುವಕನನ್ನು ಹೊಡೆದು ಕೊಂದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ” ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಪ್ರವೀಣ್ ಲಹಾನೆ ಎಂದು ಗುರುತಿಸಲಾಗಿದ್ದು, ಈತ ಪೊಲೀಸ್ ಅಧಿಕಾರಿಯ ಸಹೋದರ ಆಗಿರುತ್ತಾನೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304, 143, 144, 147, 148 ಮತ್ತು 149 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Crime News : Young man stabbed to death by an old grudge

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular