Mangalore News : ಆಟ ಆಡುತ್ತಿದ್ದಾಗ ಉಯ್ಯಾಲೆ ಹಗ್ಗ ಕುತ್ತಿಗೆ ಸಿಕ್ಕಿ ಬಾಲಕ ಸಾವು

ಮಂಗಳೂರು : Mangalore News : ಮನೆಯ ಹತ್ತಿರದ ತೂಗು ಉಯ್ಯಾಲೆಯಲ್ಲಿ ಬಾಲಕನೊರ್ವ ಆಟವಾಡುತ್ತಿದ್ದಾಗ, ಆಕಸ್ಮಿಕವಾಗಿ ಉಯ್ಯಾಲೆಯ ಹಗ್ಗಕ್ಕೆ ಮಗುವಿನ ಕುತ್ತಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಶಾ (14 ವರ್ಷ) ಎಂಟನೇ ತರಗತಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಎಂಬಲ್ಲಿನ ಮನೆಯ ಬಳಿ ಆಟವಾಡುತ್ತಿದ್ದಾಗ ಹಗ್ಗಕ್ಕೆ ಕತ್ತು ಸಿಕ್ಕಿಹಾಕಿಕೊಂಡಿದ್ದು, ತಂಗಿ ಗಮನಿಸಿದಾಗ ಉಯ್ಯಾಲೆಯಿಂದ ಕೆಳಗೆ ಬಿದ್ದಿದ್ದಾನೆ.

ಇದನ್ನೂ ಓದಿ : Bhopal-Delhi Vande Bharat Express : ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲ್‌ನಲ್ಲಿ ಬೆಂಕಿ ಅವಘಡ

ಇದನ್ನೂ ಓದಿ : Crime News : ಬಸ್ ಕಂದಕಕ್ಕೆ ಬಿದ್ದು 12 ಸಾವು, 10 ಜನರಿಗೆ ಗಾಯ

ಪೋಷಕರಿಗೆ ವಿಷಯ ತಿಳಿಸಿದ ಅವರು ಬಾಲಕನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Mangalore News : A boy died after getting caught in a swing rope while playing a game

Comments are closed.