ಸೋಮವಾರ, ಏಪ್ರಿಲ್ 28, 2025
HomeCrimecop steal Goats : ಭರ್ಜರಿ ಬಾಡೂಟಕ್ಕೆ ಎರಡು ಮೇಕೆಕದ್ದು ಸಿಕ್ಕಿಬಿದ್ದ ಎಎಸ್‌ಐ ಸಸ್ಪೆಂಡ್‌

cop steal Goats : ಭರ್ಜರಿ ಬಾಡೂಟಕ್ಕೆ ಎರಡು ಮೇಕೆಕದ್ದು ಸಿಕ್ಕಿಬಿದ್ದ ಎಎಸ್‌ಐ ಸಸ್ಪೆಂಡ್‌

- Advertisement -

ಒಡಿಶಾ: ಹೊಸ ವರ್ಷವನ್ನು ಬಹುತೇಕರು ಸಂಭ್ರಮದಿಂದಲೇ ಆಚರಿಸುತ್ತಾರೆ. ಅಂತೆಯೇ ಭರ್ಜರಿ ಬಾಡೂಟ ಮಾಡುವ ಸಲುವಾಗಿ ಪೊಲೀಸ್‌ ಅಧಿಕಾರಿಯೋರ್ವ ಕುರಿಕದ್ದು ಸಿಕ್ಕಿ ಬಿದ್ದಿರುವ ( cop steal Goats) ಘಟನೆ ಒಡಿಶಾದಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಎಎಸ್‌ಐನನ್ನು ಸಸ್ಪೆಂಡ್‌ ಮಾಡಿದ್ದಾರೆ.

ಎಎಸ್‌ಐ ಸುಮನ್ ಮಲ್ಲಿಕ್ ಎಂಬಾತನೇ ಕುರಿ ಕದ್ದ ಸಬ್ ಇನ್ಸ್‌ಪೆಕ್ಟರ್. ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೇಕೆಲಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ತನ್ನ ಸ್ನೇಹಿತರ ಜೊತೆಗೆ ಪಾರ್ಟಿ ಮಾಡೋದಕ್ಕೆ ಫ್ಲ್ಯಾನ್‌ ಮಾಡಿದ್ದ ಸುಮನ್‌ ಮಲ್ಲಿಕ್‌ ಎರಡು ಕುರಿಗಳನ್ನು ಕದ್ದಿದ್ದಾರೆ. ಈ ವಿಚಾರ ಕುರಿಗಳ ಮಾಲೀಕರಿಗೆ ತಿಳಿದ ಕೂಡಲೇ ಕುರಿಗಳನ್ನು ಬಿಟ್ಟುಬಿಡುವಂತೆ ಎಎಸ್‌ಐ ಸುಮನ್‌ ಬಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆದರೆ ಸುಮನ್‌ ಕುರಿಗಳ ಮಾಲೀಕನ ಮನವಿಯನ್ನು ತಿರಸ್ಕರಿಸಿದ್ದಾರೆ. ಅಲ್ಲದೇ ಕುರಿಗಳನ್ನು ಕಡಿದು ಸ್ನೇಹಿತರ ಜೊತೆಗೆ ಭರ್ಜರಿ ಬಾಡೂಟ ಮಾಡಿ ಸವಿದಿದ್ದಾರೆ. ಇದರಿಂದ ಬೇಸರಗೊಂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸಿಂಧೇಕೆಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿಯು ಸುಮನ್ ಮಲ್ಲಿಕ್‍ನನ್ನು ಅಮಾನತುಗೊಳಿಸಿ, ಹಿರಿಯ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದಾರೆ. ಇದೀಗ ಕುರಿಗಳನ್ನು ಕದ್ದು ಹೊಸ ವರ್ಷದ ಪಾರ್ಟಿ ಮಾಡಿದ ಪೊಲೀಸ್‌ ಅಧಿಕಾರಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಯಿ ಅಡುಗೆ ಮಾಡುತ್ತಿದ್ದಾಗ ಎಲ್‌ಪಿಜಿ ಸಿಲಿಂಡರ್ ಸ್ಫೋಟ, ಐದು ಮಕ್ಕಳು ಸಾವು

ಬಿಹಾರ : ತಾಯಿ ಅಡುಗೆ ಮಾಡುತ್ತಿದ್ದ ವೇಳೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಪೋಟಗೊಂಡು ಐವರು ಮಕ್ಕಳು ಸುಟ್ಟು ಕರಕಲಾಗಿ, ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯ ರಾಜಾವರ ಗ್ರಾಮದಲ್ಲಿ ನಡೆದಿದೆ. ಘಟನೆಯ ಬೆನ್ನಲ್ಲೇ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ನಂತರದಲ್ಲಿ ಜಿಲ್ಲಾಡಳಿತ ಉನ್ನತಮಟ್ಟದ ತನಿಖೆಗೆ ಆದೇಶಿಸಿದೆ.

ಛೋಟು ಪಾಸ್ವಾನ್ ಅವರ ಪುತ್ರ ಅಂಕುಶ್ (12 ವರ್ಷ), ನಾಲ್ವರು ಪುತ್ರಿಯರಾದ ಅಂಶು ಕುಮಾರಿ (8 ವರ್ಷ), ಸೀಮಾ ಕುಮಾರಿ (4 ವರ್ಷ), ಶಿವನಿ ಕುಮಾರಿ (6 ವರ್ಷ) ಮತ್ತು ಸೋನಿ ಕುಮಾರಿ (3 ವರ್ಷ) ಮೃತ ದುರ್ದೈವಿಗಳಾಗಿದ್ದಾರೆ. ಅಡುಗೆ ಮನೆಯಲ್ಲಿ ಮಕ್ಕಳ ತಾಯಿ ಅಡುಗೆ ಮಾಡುತ್ತಿದ್ದು, ಪಕ್ಕದಲ್ಲೇ ಮಕ್ಕಳು ಆಟವಾಡುತ್ತಿದ್ದರು. ಇದೇ ವೇಳೆ ತಾಯಿ ಯಾವುದೋ ಕೆಲಸದ ನಿಮಿತ್ತ ಕೊಠಡಿಯಿಂದ ಹೊರಗೆ ಹೋದಾಗ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದೆ. ಐವರು ಮಕ್ಕಳು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ತಾಯಿ ಮನೆಯೊಳಗೆ ಬರುವ ಹೊತ್ತಿಗಾಗಲೇ ಮಕ್ಕಳ ಪ್ರಾಣಪಕ್ಷಿ ಹಾರಿ ಹೋಗಿತ್ತು. ಬೆಂಕಿಯ ತೀವ್ರತೆ ಅಕ್ಕಪಕ್ಕದ ಸ್ಥಳಕ್ಕೂ ವ್ಯಾಪಿಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟ ಹಾಗೂ ಬೆಂಕಿ ಅವಘಡದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಗ್ರಾಮದ ಜನರು ಸ್ಥಳಕ್ಕೆ ಆಗಮಿಸಿದರು. ಬೆಂಕಿ ನಂದಿಸಿದ ನಂತರ, ಸುಟ್ಟ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು, ಆದರೆ ಅದಕ್ಕೂ ಮೊದಲು ಐವರೂ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಪಡೆದ ಬಂಕಾ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ಗುಪ್ತಾ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಸಿಲಿಂಡರ್‌ ಸ್ಪೋಟದ ಕುರಿತು ರಾಜೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಸಿಲಿಂಡರ್‌ ಸ್ಪೋಟಗೊಂಡಿದೆ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣದ ಸಂಖ್ಯೆ ಹೆಚ್ಚುತ್ತಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ.

ಇದನ್ನೂ ಓದಿ : ಮಾಟ ಮಂತ್ರದ ಮೋಹಕ್ಕೆ ಮನೆ ಬಿಟ್ಟ ಮಗಳು : 17 ಬಾಲಕಿ ಪತ್ತೆಗೆ ಪೊಲೀಸರ ಮೊರೆ ಹೋದ ಪೋಷಕರು

ಇದನ್ನೂ ಓದಿ : ದೇವಾಲಯದ ಪ್ರಸಾದ ಸೇವಿಸಿ 53 ಮಂದಿ ಭಕ್ತರು ಅಸ್ವಸ್ಥ

( cop steal Goats To Throw New Year Feast Suspended Police)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular