ಸೋಮವಾರ, ಜೂನ್ 16, 2025
HomeCoastal NewsTannirubavi Beach : ತಣ್ಣೀರುಬಾವಿ ಬೀಚ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದ ಐವರು ವಿದ್ಯಾರ್ಥಿಗಳ ರಕ್ಷಣೆ

Tannirubavi Beach : ತಣ್ಣೀರುಬಾವಿ ಬೀಚ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದ ಐವರು ವಿದ್ಯಾರ್ಥಿಗಳ ರಕ್ಷಣೆ

- Advertisement -

ಮಂಗಳೂರು : ತಣ್ಣೀರುಬಾವಿ ಬೀಚ್‌ನಲ್ಲಿ(Tannirubavi Beach) ಸ್ನಾನ ಮಾಡುತ್ತಿದ್ದ ವೇಳೆಯಲ್ಲಿ ಅಲೆಯ ಅಬ್ಬರಕ್ಕೆ ಸಿಲುಕಿ ನೀರು ಪಾಲಾಗುತ್ತಿದ್ದ ಐವರು ವಿದ್ಯಾರ್ಥಿ ಗಳನ್ನು ಸರ್ಫಿಂಗ್‌ ಮಾಡುತ್ತಿದ್ದವರು ರಕ್ಷಣೆ ಮಾಡಿದ್ದಾರೆ. ಎಲ್ಲಾ ಐವರು ವಿದ್ಯಾರ್ಥಿಗಳು ಕೂಡ ಮೂಡಬಿದಿರೆಯ ಕಾಲೇಜಿನವರು ಎಂದು ತಿಳಿದು ಬಂದಿದೆ.

ಮೂಡಬಿದಿರೆ ಕಾಲೇಜಿನಿಂದ ತಣ್ಣೀರುಬಾವಿ ಸಮುದ್ರ ತೀರಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ಸ್ನಾನ ಮಾಡುವ ಸಲುವಾಗಿ ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆಯಲ್ಲಿ ದೈತ್ಯ ಅಲೆಯ ಅಲೆಗಳ ಅಬ್ಬರಕ್ಕೆ ಸಿಲುಕಿ ದಡದತ್ತ ಈಜಿ ಬರಲು ಸಾಧ್ಯವಾಗಿರಲಿಲ್ಲ. ಈ ವೇಳೆಯಲ್ಲಿ ಸರ್ಫಿಂಗ್‌ ಮಾಡುತ್ತಿದ್ದ ತರಬೇತುದಾರ ತೇಜಸ್‌ ನಾಯಕ್‌, ರಾಷ್ಟ್ರೀಯ ಕ್ರೀಡಾಪಟು ಸಂಕೇತ್‌ ಬೆಂಗ್ರೆ ಮತ್ತು ಶಿಲ್ಪಾ ಬೆಂಗ್ರೆ ಹಾಗೂ ಇತರ ಸರ್ಫಿಂಗ್‌ ಮಾಡುತ್ತಿದ್ದ ಕ್ರೀಡಾಪಟುಗಳು ರಕ್ಷಣೆ ಮಾಡಿದ್ದಾರೆ.

ಎಲ್ಲಾ ವಿದ್ಯಾರ್ಥಿಗಳನ್ನು ಸರ್ಫಿಂಗ್‌ ಬೋರ್ಡ್‌ ಮೇಲೆ ಇರಿಸಿಕೊಂಡು ದಡಕ್ಕೆ ತರಲಾಯಿತು. ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿದೆ. ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಣ್ಣೀರುಬಾವಿ ಕಡಲ ತೀರ ಸಂಪೂರ್ಣವಾಗಿ ಅಪಾಯಕಾರಿಯಾಗಿದೆ. ಹೀಗಾಗಿ ಸಮುದ್ರ ತೀರದಲ್ಲಿ ಪ್ರವಾಸಿಗರು ಈಜಾಡುವುದಕ್ಕೆ ನಿಷೇಧ ಹೇರಲಾಗಿದೆ. ಆದರೂ ಕೂಡ ಪ್ರವಾಸಿಗರು ಪ್ರಾಣವನ್ನೂ ಲೆಕ್ಕಿಸದೇ ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಇದನ್ನೂ ಓದಿ : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್​ ಪಿನ್​ ರುದ್ರೇಗೌಡ ವಶಕ್ಕೆ

ಇದನ್ನೂ ಓದಿ : ಯುವತಿಗೆ ಲೈಂಗಿಕ ದೌರ್ಜನ್ಯ ಆರೋಪ : ಗ್ರಾಮಸ್ಥರಿಂದ ಕಾಮುಕನ ಬೆತ್ತಲೆ ಮೆರವಣಿಗೆ

Rescue of five students at risk at Tannirubavi Beach near Mangalore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular