ಮಂಗಳವಾರ, ಏಪ್ರಿಲ್ 29, 2025
HomeBreakingವಿಷ‌‌ ಸೇವಿಸಿ ಸಿದ್ದರಾಮಯ್ಯ ಆಪ್ತ ಆತ್ಮಹತ್ಯೆ : ಸಾವಿಗೆ ಕಾರಣವಾಯ್ತು ಮೈಮುಲ್ ಚುನಾವಣೆ ಸೋಲು

ವಿಷ‌‌ ಸೇವಿಸಿ ಸಿದ್ದರಾಮಯ್ಯ ಆಪ್ತ ಆತ್ಮಹತ್ಯೆ : ಸಾವಿಗೆ ಕಾರಣವಾಯ್ತು ಮೈಮುಲ್ ಚುನಾವಣೆ ಸೋಲು

- Advertisement -

ಮೈಸೂರು : ಮೈಮುಲ್‌ ಚುನಾವಣೆ ಪ್ರತಿಷ್ಠೆಯ‌ ಕಣವಾಗಿದ್ದು, ಚುನಾವಣಾ ಸೋಲಿನಿಂದ ಮನನೊಂದು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೋರ್ವರು ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ.

ಕೆ.ಸಿ.ಬಲರಾಮ್ ಎಂಬವರೇ ಆತ್ಮಹತ್ಯೆ ‌ಮಾಡಿಕೊಂಡವರು. ಕಳೆದ ಮೂರು ದಶಕಗಳಿಂದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ, ಬಲರಾಮ್ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು.

ಇತ್ತೀಚೆಗೆ ನಡೆದ ಮೈಮುಲ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಲರಾಮ್ ಅವರು ಸೋಲನ್ನು‌ ಕಂಡಿದ್ದರು‌. ಇದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕೆ.ಸಿ.ಬಲರಾಮ್‌ ಅವರನ್ನು  ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular