ಚೆನ್ನೈ : ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರದಲ್ಲಿ ಪತ್ನಿಯ ಶೀಲದ ಬಗ್ಗೆ ಪತಿ ಮಹಾಶಯನಿಗೆ ಅನುಮಾನ ಮೂಡಿತ್ತು. ಇದೇ ಕಾರಣಕ್ಕೆ ಕುಡಿದ ಮತ್ತಲ್ಲಿ ಪತ್ನಿಯನ್ನು (Wife Murder ) ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಆರೋಪಿ ಆಟೋ ಚಾಲಕ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನ ಸುಂದರಪುರಂನ ನಿವಾಸಿಯಾಗಿರುವ ಶರ್ಮಿಳಾ (27 ವರ್ಷ ) ಎಂಬಾಕೆಯೇ ಕೊಲೆಯಾದ ದುರ್ದೈವಿ. ಆರೋಪಿಯಾಗಿರುವ ಪತಿ ನಾಗಾರ್ಜುನನ್ ( 30 ವರ್ಷ ) ಆಟೋ ಚಾಲಕನಾಗಿದ್ದ. 4 ತಿಂಗಳ ಹಿಂದೆಯಷ್ಟೇ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೇ ಬಾಡಿಗೆ ಮನೆಯೊಂದನ್ನು ಮಾಡಿಕೊಂಡು ವಾಸವಾಗಿದ್ದರು.
ಆಟೋ ಚಾಲಕನಾಗಿದ್ದ ನಾಗಾರ್ಜುನ್ಗೆ ವಿಪರೀತ ಕುಡಿತದ ಚಟವಿತ್ತು. ಪ್ರತಿನಿತ್ಯ ಕುಡಿದು ಬಂದು ಪತ್ನಿಯ ಜೊತೆ ಜಗಳವಾಡುತ್ತಿದ್ದ. ಅಲ್ಲದೇ ನಾಗಾರ್ಜುನ ಪತ್ನಿಯ ವರ್ತನೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ದೈಹಿಕ, ಮಾನಸಿಕವಾಗಿಯೂ ಹಲ್ಲೆಯನ್ನು ನಡೆಸುತ್ತಿದ್ದ. ನಿನ್ನೆ ಮಧ್ಯಾಹ್ನ 2.30ರ ಸುಮಾರಿಗೆ ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ನಾಗಾರ್ಜುನ ಅಲ್ಲೇ ಇದ್ದ ಚಾಕುವಿನಿಂದ ತನ್ನ ಪ್ರೀತಿಯ ಪತ್ನಿ ಶರ್ಮಿಳಾಗೆ (Wife Murder ) ಇರಿದಿದ್ದಾನೆ. ಕುತ್ತಿಗೆ, ಎದೆ, ಹೊಟ್ಟೆ ಸೇರಿದಂತೆ 8 ಕಡೆ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ ಶರ್ಮಿಳಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ನಾಗಾರ್ಜುನ ಮನೆಯಿಂದ ಓಡಿ ಹೋಗಿದ್ದರಿಂದ ಶರ್ಮಿಳಾ ಮನೆಯಲ್ಲಿಯೇ ಸಾವನ್ನಪ್ಪಿದ್ದಾಳೆ ಎಂಬುದು ಯಾರಿಗೂ ತಿಳಿದಿಲ್ಲ. ಇದೇ ವೇಳೆ ರಾತ್ರಿ 8 ಗಂಟೆ ಸುಮಾರಿಗೆ ಸ್ನೇಹಿತರೊಂದಿಗೆ ಮತ್ತೆ ಕುಡಿದು ಬಂದ ನಾಗಾರ್ಜುನ ಮತ್ತೆ ಕೂಗಾಡೋದಕ್ಕೆ ಶುರು ಮಾಡಿದ್ದಾನೆ. ಈ ವೇಳೆಯಲ್ಲಿ ಶರ್ಮಿಳಾ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿದೆ. ಮಾಹಿತಿ ಪಡೆದ ಬೋತನೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಶರ್ಮಿಳಾ ಮೃತದೇಹವನ್ನು ಹೊರತೆಗೆದು ಶವಪರೀಕ್ಷೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ನಾಗಾರ್ಜುನನನ್ನು ಆ ಪ್ರದೇಶದಲ್ಲಿ ಹೊಂಚು ಹಾಕಿ ಪೊಲೀಸರು ಬಂಧಿಸಿದರು. ಶರ್ಮಿಳಾ ಮದುವೆಯಾಗಿ ಇನ್ನು 4 ತಿಂಗಳಾಗಿರುವುದರಿಂದ ಆರ್ಡಿಒ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : Tuition teacher : ಟ್ಯೂಷನ್ ಟೀಚರ್ ಸ್ನಾನದ ವೀಡಿಯೋ ಸೆರೆ : ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು
ಇದನ್ನೂ ಓದಿ : Ghanavi : ಹಬ್ಬದ ದಿನದಂದೇ ನವ ವಿವಾಹಿತೆ ಗಾನವಿ ಸಂಶಯಾಸ್ಪದ ಸಾವು
Wife Murder : Husband who killed his wife within 4 months of getting married
Comments are closed.