ಬುಧವಾರ, ಏಪ್ರಿಲ್ 30, 2025
Homehoroscopeನಿತ್ಯಭವಿಷ್ಯ : 14-05-2020

ನಿತ್ಯಭವಿಷ್ಯ : 14-05-2020

- Advertisement -

ಮೇಷರಾಶಿ
ಉದ್ಯಮ, ವ್ಯಾಪಾರ, ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಕಿರಿಕಿರಿ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರವಾಸ ಯೋಗದಿಂದ ಸಂತಸ ತರಲಿದೆ. ಕುಟುಂಬದ ಸದಸ್ಯರ ಬಗ್ಗೆ ಗಮನಹರಿಸಿರಿ. ವ್ಯಾಪಾರಿ ವರ್ಗದವರು ತಮ್ಮ ವ್ಯವಹಾರದಲ್ಲಿ ತೀವ್ರ ಸ್ಪರ್ಧೆ ಎದುರಿಸಬೇಕು. ಮಾನಸಿಕ ವ್ಯಥೆ, ದೇಹಾಲಸ್ಯ, ಸೋಲು ನಷ್ಟ ನಿರಾಸೆ, ಇಲ್ಲ ಸಲ್ಲದ ಅಪವಾದ, ಆಕಸ್ಮಿಕ ಲಾಭ, ವರಮಾನ, ಅವಕಾಶಗಳು ಕೈ ತಪ್ಪುವ ಆತಂಕ, ಗುಪ್ತದೋಷಗಳಿಂದ ಅನಾರೋಗ್ಯ.

ವೃಷಭರಾಶಿ
ಪ್ರಯಾಣದಲ್ಲಿ ಬೇಸರ, ಮಕ್ಕಳ ಸಂಬಂಧ ಕೆಲಸ ಕಾರ್ಯಗಳು ಕೈಗೂಡುವುವು. ಪುಣ್ಯ ಸಂಪಾದನೆಯ ಸಲಹೆ ವೈದಿಕರಿಂದ ಬಂದೀತು. ಹೊಸ ಸ್ಥಳಗಳ ಸಂದರ್ಶನದ ಭಾಗ್ಯದಿಂದ ಸಂತಸವಾದೀತು. ಉದ್ಯಮದಲ್ಲಿ ಅಲ್ಪ ಸುಧಾರಣೆ, ಯಂತ್ರೋಪಕರಣಗಳಿಗಾಗಿ ಖರ್ಚು, ಉದ್ಯೋಗದಲ್ಲಿ ಪ್ರಗತಿ, ಕೆಲಸದಲ್ಲಿ ಹೆಚ್ಚಿನ ಒತ್ತಡ, ನೆರೆಹೊರೆಯವರಿಂದ ಕಿರಿಕಿರಿ, ಸಂಗಾತಿಯಿಂದ ಅನುಕೂಲ, ಹೊಸ ವಸ್ತು ಖರೀದಿಯಿಂದ ನಷ್ಟ.

ಮಿಥುನರಾಶಿ
ಅಧಿಕವಾದ ಉಷ್ಣ ಬಾಧೆ, ಮೈಗ್ರೇನ್, ಗುಪ್ತವ್ಯಾಧಿ, ಹಣಕಾಸು ಸಮಸ್ಯೆ, ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆಯ ಸಾಧ್ಯತೆ ಇರುತ್ತದೆ. ಆರ್ಥಿಕವಾಗಿ ನಾನಾ ರೀತಿಯ ಖರ್ಚುವೆಚ್ಚಗಳಿರುತ್ತವೆ. ರಾಜಕೀಯ ವರ್ಗವರಿಗೆ ಮನಸ್ಸು ಸ್ಥಿರವಿರದು. ಸಾಲ ಬಾಧೆ, ಶತ್ರುಕಾಟ, ತಂದೆ ಜೊತೆ ವೈಮನಸ್ಸು, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ಮಿತ್ರರಿಂದ ಸಹಕಾರ, ಪ್ರೇಮಿಗಳಲ್ಲಿ ಕಿರಿಕಿರಿ, ನೀವಾಡುವ ಮಾತಿನಿಂದ ಕಲಹ, ಕುಟುಂಬದಲ್ಲಿ ಬೇಸರ.

ಕಟಕರಾಶಿ
ಕಾರ್ಯಕ್ಷೇತ್ರದಲ್ಲಿ ಶತ್ರುಗಳಿಗೆ ಹಿನ್ನಡೆ ತರಲಿದೆ. ವಾಹನ ಚಾಲನೆಯ ಬಗ್ಗೆ ಜಾಗ್ರತೆ ಇರಲಿ. ವಿದ್ಯಾರ್ಥಿಗಳಿಗೆ ನಿರುತ್ಸಾಹ ಕಾಡಲಿದೆ. ವ್ಯಾಪಾರಿಗಳಿಗೆ ತುಸು ಚೇತರಿಕೆ ಕಂಡು ಬಂದೀತು. ಕೋರ್ಟ್ ಕೇಸ್‍ಗಳಲ್ಲಿ ಜಯದ ಸೂಚನೆ, ದಾಯಾದಿಗಳ ಕಲಹ, ಸ್ಥಿರಾಸ್ತಿ-ವಾಹನದಿಂದ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಮಕ್ಕಳೊಂದಿಗೆ ಕಿರಿಕಿರಿ, ಉದ್ಯೋಗ ನಷ್ಟ ಭೀತಿ, ಕಾಲು, ಹೊಟ್ಟೆ ನೋವು, ಉಸಿರಾಟದ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಸಂಕಷ್ಟ.

ಸಿಂಹರಾಶಿ
ದಾಂಪತ್ಯದಲ್ಲಿ ಜಗಳ, ಹಠಮಾರಿತನ, ಕೋಪ, ಸಂಗಾತಿಯಿಂದ ದೂರಾಗುವ ಚಿಂತೆ, ಪಾಲುದಾರಿಕೆಯಲ್ಲಿ ಸಮಸ್ಯೆ, ನಿರುದ್ಯೋಗಿಗಳಿಗೆ ಧಾರಾಳ ಅವಕಾಶಗಳು ಒದಗಿ ಬರುವುದು. ವೃತ್ತಿರಂಗದಲ್ಲಿ ಕೊರತೆಗಳನ್ನು ಹೊಂದಾಣಿಕೆಯಿಂದ ಸರಿಪಡಿಸಿಕೊಳ್ಳಿರಿ. ವಿದ್ಯಾರ್ಥಿಗಳ ಕುಶಲತೆಗೆ ಉತ್ತಮ ಫ‌ಲಿತಾಂಶವು ದೊರಕಲಿದೆ. ಸ್ಥಿರಾಸ್ತಿ ವಾಹನದಿಂದ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ಸ್ಥಳದಲ್ಲಿ ಒತ್ತಡ, ಅನಗತ್ಯ ಚಿಂತೆಯಿಂದ ನಿದ್ರಾಭಂಗ, ಗ್ಯಾಸ್ಟ್ರಿಕ್, ಹಾರ್ಮೋನ್ಸ್ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಅನುಕೂಲ.

ಕನ್ಯಾರಾಶಿ
ದಾಯಾದಿಗಳ ಕಲಹ, ನೆರೆಹೊರೆಯವರಲ್ಲಿ ಶತ್ರುತ್ವ, ಆರ್ಥಿಕ ಅಡಚಣೆಯಿಂದ ಪಾರಾಗಲು ಉತ್ತಮ ಆದಾಯದ ಮೂಲವನ್ನು ಕಂಡುಕೊಳ್ಳಬೇಕಾಗುತ್ತದೆ. ಧರ್ಮಬಾಹಿರ ಕೆಲಸಗಳ ಬಗ್ಗೆ ಯೋಚಿಸಬೇಕಾಗುತ್ತದೆ. ವೃತ್ತಿರಂಗದಲ್ಲಿ ಅಸಮಾಧಾನಕರ ವಾತಾವರಣ. ಆರೋಗ್ಯ ಸಮಸ್ಯೆ, ಆಯುಷ್ಯಕ್ಕೆ ಕಂಟಕದ ಭೀತಿ, ಸ್ನೇಹಿತರಿಂದ ಬೇಸರ, ಮಕ್ಕಳ ಭವಿಷ್ಯ ಬಗ್ಗೆ ಚಿಂತೆ, ಅನಿರೀಕ್ಷಿತ ಸಾಲ ಮಾಡುವ ಪರಿಸ್ಥಿತಿ, ಸೇವಕರಿಂದ ತೊಂದರೆ.

ತುಲಾರಾಶಿ
ಮಕ್ಕಳಿಂದ ಧನಾಗಮನ, ಸಂಗಾತಿಯಿಂದ ಅನುಕೂಲ, ವೃತ್ತಿರಂಗದಲ್ಲಿ ಸ್ಥಗಿತಗೊಂಡ ಕಾರ್ಯಗಳು ಪುನಃ ಚಾಲನೆಗೆ ಬರಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶದಿಂದ ಸಂತಸ ತರಲಿದೆ. ಹಿರಿಯರ ಮಾರ್ಗದರ್ಶನ ಸೂಕ್ತ ಸಲಹೆಗೆ ಸ್ಪಂದಿಸಿರಿ.ಸ್ಥಿರಾಸ್ತಿ ಯೋಗ, ಭೂ ವ್ಯವಹಾರಗಳಲ್ಲಿ ಜಯ, ಉದ್ಯೋಗದಲ್ಲಿ ಬೇಸರ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದುಷ್ಟ ಆಲೋಚನೆಗಳಿಂದ ತೊಂದರೆ, ವ್ಯವಹಾರಗಳಿಂದ ನಷ್ಟ, ಸ್ಪರ್ಧಾತ್ಮಕ ವಿಚಾರದಲ್ಲಿ ಜಯ, ರಕ್ತ ದೋಷ, ದುಶ್ಚಟ ಹೆಚ್ಚು.

ವೃಶ್ಚಿಕರಾಶಿ
ಸ್ಥಿರಾಸ್ತಿ-ಪತ್ರ ವ್ಯವಹಾರಗಳಲ್ಲಿ ತೊಂದರೆ, ವಾಹನದಿಂದ ನಷ್ಟ, ಯೋಗ್ಯ ವಯಸ್ಕರು ಭಾಗ್ಯಶಾಲಿಗಳಾದಾರು. ವ್ಯಾಪಾರ ವ್ಯವಹಾರಗಳಲ್ಲಿ ಸಾಲ ವಾಪಸಾತಿಯಿಂದ ನೆಮ್ಮದಿ ಸಿಗಲಿದೆ. ನಿರೀಕ್ಷಿತ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿವೆ. ಧನಾಗಮನ ಉತ್ತಮವಿರುತ್ತದೆ. ಮಾನಸಿಕ ಒತ್ತಡ, ತಲೆ ನೋವು, ಉಷ್ಣ ಬಾಧೆ, ಸ್ತ್ರೀಯರಿಗೆ ಮಾಸ ದೋಷ, ಸೊಂಟ ನೋವು, ದಾಂಪತ್ಯದಲ್ಲಿ ಕಲಹ, ಭವಿಷ್ಯದ ಚಿಂತೆ, ಉದ್ಯಮ ವ್ಯವಹಾರದಲ್ಲಿ ಅನುಕೂಲ, ಅದೃಷ್ಟ ಕೈ ಕೊಡುವುದು.

ಧನಸ್ಸುರಾಶಿ
ದಾಯಾದಿಗಳೊಂದಿಗೆ ಮನಃಸ್ತಾಪ, ತಾಳ್ಮೆ ಸಮಾಧಾನದಿಂದ ಮುಂದುವರಿಯಿರಿ. ಹಿತೈಷಿಗಳ ಸಹಕಾರವು ಮುನ್ನಡೆಗೆ ಸಾಧಕವಾಗಲಿದೆ. ಯೋಗ್ಯ ವಯಸ್ಕರಿಗೆ ಅದೃಷ್ಟವು ಒದಗಿ ಬಂದೀತು. ದೇವತಾ ಕಾರ್ಯಗಳಿಗೆ ಖರ್ಚುವೆಚ್ಚ ಬರಲಿದೆ. ಗೌರವಕ್ಕೆ ಧಕ್ಕೆ, ಮಕ್ಕಳ ಜೀವನ ಉಜ್ವಲಿಸುವ ಭರವಸೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಅಗತ್ಯ, ನೀವಾಡುವ ಮಾತಿನಿಂದ ಸಮಸ್ಯೆ, ಉದ್ಯೋಗ, ಸ್ಥಳ ಬದಲಾವಣೆಗೆ ಚಿಂತೆ, ಮೊಂಡುತನ, ಧೈರ್ಯದಿಂದ ಆಪತ್ತು, ಶಕ್ತಿದೇವತೆಯ ಆರಾಧನೆ ಮಾಡಿ, ಆಧ್ಯಾತ್ಮಿಕ ಚಿಂತನೆಗಳು.

ಮಕರರಾಶಿ
ಹಣಕಾಸು ಅನುಕೂಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಧನಾದಾಯ ಉತ್ತಮವಿದ್ದರೂ ಅನಿರೀಕ್ಷಿತ ಖರ್ಚು ಆತಂಕಕ್ಕೆ ಕಾರಣವಾದೀತು. ವೃತ್ತಿರಂಗದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ. ಗೃಹದಲ್ಲಿ ನೆಮ್ಮದಿ ತಂದೀತು. ಬೇಜವಾಬ್ದಾರಿ ನಡವಳಿಕೆ, ದೈವ ನಿಂದನೆ, ಅಪಪ್ರಚಾರ ಮಾಡುವಿರಿ, ಸ್ಥಿರಾಸ್ತಿಯಿಂದ ಧನಾಗಮದ ನಿರೀಕ್ಷೆ, ಸ್ವಯಂಕೃತ ಅಪರಾಧದಿಂದ ನಷ್ಟ, ಹೊಗಳಿಕೆಗೆ ಮಾತಿಗೆ ಮರುಳಾಗುವಿರಿ.

ಕುಂಭರಾಶಿ
ಕೋಪದಿಂದ ಅಶಾಂತಿ ವಾತಾವರಣ, ನಿದ್ರೆಯಲ್ಲಿ ದುಃಸ್ವಪ್ನಗಳು, ವಾಹನ ಚಾಲನೆಯಲ್ಲಿ ಎಚ್ಚರ, ಸಾಲ ಬಾಧೆ, ನಿಮ್ಮ ಅಭಿವೃದ್ಧಿಗೆ ಶತ್ರುಗಳು ಅಸೂಯೆ ಪಟ್ಟಾರು. ಉದರ ಸಂಬಂಧಿ, ನರಗಳ ಸಂಬಂಧ ಜಾಗ್ರತೆ ವಹಿಸಿರಿ. ರಾಜಕೀಯ ವರ್ಗದವರಿಗೆ ಅನೇಕ ಗೊಂದಲಗಳು ಕಂಡು ಬರುತ್ತವೆ. ದಿನಾಂತ್ಯ ಶುಭ. ನಿದ್ರಾಭಂಗ, ಸ್ವಯಂಕೃತ್ಯಗಳಿಂದ ಗೌರವಕ್ಕೆ ಧಕ್ಕೆ, ಉದ್ಯೋಗ ಬದಲಾವಣೆಗೆ ಮನಸ್ಸು, ದಂಡ ಕಟ್ಟುವ ಸಾಧ್ಯತೆ, ಪ್ರತಿಷ್ಠೆಗಾಗಿ ಸಮಸ್ಯೆ ಸಿಲುಕುವಿರಿ.

ಮೀನರಾಶಿ
ದೂರದ ವ್ಯಕ್ತಿಗಳಿಂದ ಅನುಕೂಲ, ಉದ್ಯೋಗಿಗಳಿಗೆ ಉದ್ಯೋಗದ ಬದಲಾವಣೆಯ ಸಾಧ್ಯತೆ ಇದೆ. ಅನ್ಯರ ಮಾತಿನಿಂದ ಅನಾವಶ್ಯಕ ತಪ್ಪು ಅಭಿಪ್ರಾಯ ತೋರಿಬರುತ್ತದೆ. ಉತ್ತಮ ಆದಾಯದಿಂದ ಪರಿಸ್ಥಿತಿ ಸುಧಾರಿಸಲಿದೆ. ನಿದ್ರಾಭಂಗ, ದೂರ ಪ್ರಯಾಣ ನಿರೀಕ್ಷೆ, ಸ್ತ್ರೀ ಜೊತೆ ಮನಃಸ್ತಾಪ, ಆರೋಗ್ಯದಲ್ಲಿ ವ್ಯತ್ಯಾಸ, ಮೈಕೈ ನೋವು, ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಲ್ಲಿ ಹಠ, ಪಿತ್ರಾರ್ಜಿತ ಸ್ವತ್ತಿನಿಂದ ಖರ್ಚು, ಭೂ ವ್ಯವಹಾರಗಳಲ್ಲಿ ನಷ್ಟ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular