ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 22-08-2020

ನಿತ್ಯಭವಿಷ್ಯ : 22-08-2020

- Advertisement -

ಮೇಷರಾಶಿ
ಸ್ಥಿರಾಸ್ತಿ ಮತ್ತು ವಾಹನ ಸಾಲ ಲಭ್ಯ, ಕಾಂಟ್ರಾಕ್ಟ್ ವೃತ್ತಿಯವರಿಗೆ ಆರ್ಥಿಕವಾಗಿ ಜೀವನದಲ್ಲಿ ಏರುಪೇರು ಕಾಣಿಸಲಿದೆ. ನಿಮ್ಮ ದೃಢ ನಿರ್ಧಾರ ಮುನ್ನಡೆಗೆ ಸಾಧಕವಾಗಲಿದೆ. ವಿದ್ಯಾಕ್ಷೇತ್ರದಲ್ಲಿ ಮುನ್ನಡೆ ತೋರಿ ಬರಲಿದೆ. ಜಾಗ್ರತೆ ವಹಿಸುವುದು. ವಿದ್ಯಾಭ್ಯಾಸದಲ್ಲಿ ಮಿತ್ರರ ಸಹಕಾರ, ಅನಾರೋಗ್ಯ ಮತ್ತು ಬಾಲಗ್ರಹ ದೋಷಗಳು.

ವೃಷಭರಾಶಿ
ಆರೋಗ್ಯ ಆಗಾಗ ಏರುಪೇರಾದೀತು. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ದೇವತಾರಾಧನೆಗಾಗಿ ಖರ್ಚು ತಂದೀತು. ನೆರೆಹೊರೆಯವರೊಡನೆ ಕಾದಾಟಕ್ಕೆ ನಿಲ್ಲದಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅಭಿವೃದ್ಧಿ ಇದೆ. ಪ್ರಯಾಣದಲ್ಲಿ ಅನುಕೂಲ, ಸ್ಥಳ ಬದಲಾವಣೆ, ಉದ್ಯೋಗ ಬದಲಾವಣೆ, ಯತ್ನ ಕಾರ್ಯಗಳಲ್ಲಿ ಅನುಕೂಲ, ಹತ್ತಿರದ ಪ್ರಯಾಣ, ಮಕ್ಕಳಿಗೆ ಉತ್ತಮ ಅವಕಾಶ.

ಮಿಥುನರಾಶಿ
ತಾಯಿಂದ ಧನಾಗಮನ, ವಾಹನ, ಸ್ಥಿರಾಸ್ತಿ ಯೋಗ, ಉದ್ಯೋಗದಲ್ಲಿ ಪ್ರಗತಿ, ವೃತ್ತಿರಂಗದಲ್ಲಿ ಆಗಾಗ ಅಸ್ಥಿರತೆಯು ಕಾಡಲಿದೆ. ಪಾಲು ಬಂಡವಾಳದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಶ್ರೀ ದೇವತಾದರ್ಶನ ಭಾಗ್ಯಕ್ಕಾಗಿ ಸಂಚಾರ ಒದಗಿ ಬರಲಿದೆ. ಸಣ್ಣ ಪುಟ್ಟ ವಿಚಾರದಲ್ಲಿ ಮನಸ್ತಾಪ ಕಂಡೀತು. ನೆಮ್ಮದಿ ವಾತಾವರಣ, ಶುಭಕಾರ್ಯಗಳ ಯೋಗ.

ಕಟಕರಾಶಿ
ಅನಾವಶ್ಯಕವಾಗಿ ಇತರರ ವಿಚಾರದಲ್ಲಿ ತಲೆ ಹಾಕದಿರಿ. ವೃತ್ತಿರಂಗದಲ್ಲಿ ಹೆಚ್ಚಿನ ಗಮನ ಅಗತ್ಯವಿದೆ. ಕ್ರಯವಿಕ್ರಯಗಳಲ್ಲಿ ಜಾಗ್ರತೆ ವಹಿಸಿರಿ. ಸಣ್ಣ ಪುಟ್ಟ ವಿಚಾರಕ್ಕೆ ಮಡಿದಿಯೊಂದಿಗೆ ವಾಗ್ವಾದಕ್ಕೆ ಇಳಿಯದಿರಿ. ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ, ಮೈಕೈ ನೋವು ಅಜೀರ್ಣ, ಉದ್ಯೋಗ ಮತ್ತು ಗೃಹ ಬದಲಾವಣೆ, ಪತ್ರ ವ್ಯವಹಾರಗಳಿಂದ ಅನುಕೂಲ.

ಸಿಂಹರಾಶಿ
ಸಂತಾನ ದೋಷಗಳ ನಿವಾರಣೆ, ನಿಮ್ಮ ಉತ್ಸಾಹ ಮುನ್ನಡೆಗೆ ಸಾಧಕವಾಗಲಿದೆ. ಪ್ರತಿಷ್ಠಿತರ ಸ್ನೇಹ ವೃತ್ತಿರಂಗದಲ್ಲಿ ಅಭಿವೃದ್ಧಿಗೆ ಕಾರಣವಾಗಲಿದೆ. ಇತರರೊಂದಿಗೆ ಹೊಂದಾಣಿಕೆ ಕಡಿಮೆ ಯಾದಂತೆ ತೋರಲಿದೆ. ಕೆಲಸಕಾರ್ಯ ನಿರ್ವಿಘ್ನವಾಗಿ ನಡೆದೀತು.ಕುಟುಂಬದಲ್ಲಿ ಉತ್ತಮ ವಾತಾವರಣ, ಕುಟುಂಬಸ್ಥರ ಆಗಮನದ ನಿರೀಕ್ಷೆ, ಧನ ನಷ್ಟ ಸಾಧ್ಯತೆ.

ಕನ್ಯಾರಾಶಿ
ಸಾರ್ವಜನಿಕ ಸೇವಾರಂಗದಲ್ಲಿ ನಿಮ್ಮ ಶ್ರಮ ಹಾಗೂ ಗುಣ ಗುರುತಿಸಲ್ಪಡುತ್ತದೆ. ಶಾರೀರಿಕ ತೊಂದರೆಗಳಿಂದ ಕೆಲವೊಂದು ನಷ್ಟ ಉಂಟಾಗುತ್ತದೆ. ದುಡುಕಿನ ಕೆಲಸಗಳಿಂದ ವೈವಾಹಿಕ ಜೀವನಕ್ಕೆ ಅಡಿಯಾಗುತ್ತದೆ. ಸನ್ಮಾರ್ಗದಲ್ಲಿ ನಡೆಯುವುದು, ಮಿತ್ರರಿಂದ ಸಹಕಾರ, ಪಾಲುದಾರಿಕೆಯಲ್ಲಿ ಸಂಕಷ್ಟ ಸಂಭವ, ಶುಭಕಾರ್ಯಕ್ಕೆ ಚಾಲನೆ, ಸ್ಥಿರಾಸ್ತಿ, ವಾಹನ ಖರೀದಿಗೆ ಮನಸ್ಸು ಮಾಡುವಿರಿ.

ತುಲಾರಾಶಿ
ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಆತ್ಮೀಯರೊಂದಿಗೆ ಕಲಹಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಮಕ್ಕಳಿಂದ ಶುಭಫ‌ಲ, ಯಶೋಭಿವೃದ್ಧಿ ಧಾತು, ದ್ರವ್ಯದಿಂದ ಲಾಭ ಪ್ರಾಪ್ತಿಯಾಗಲಿದೆ. ನೀಚ ಜನರಿಂದ ಸಹಕಾರ ಪಡೆಯದಕ್ಕೆ ಅವಮಾನ ಆದೀತು. ಆರೋಗ್ಯದಲ್ಲಿ ವ್ಯತ್ಯಾಸ, ದೇವತಾಕಾರ್ಯಗಳಿಗೆ ಪ್ರಯಾಣ.

ವೃಶ್ಚಿಕರಾಶಿ
ಅದೃಷ್ಟದ ದಿನ, ಕಾನೂನುಬಾಹಿರ ಚಟುವಟಿಕೆಗಳಿಂದ ದೂರ ಇರಿ, ಗೃಹೋಪಕರಣಗಳ ಸಂಗ್ರಹ ಆಗಲಿದೆ. ಮನೆಯಲ್ಲಿ ಸೌಕರ್ಯಗಳು ಉಂಟಾಗುತ್ತವೆ. ಕೆಲವೊಂದು ವಿಚಾರದಲ್ಲಿ ಎಚ್ಚರಿಕೆ ಅಗತ್ಯವಿದೆ. ಹಣಕಾಸಿನ ವ್ಯವಹಾರದಲ್ಲಿ ಅಡಚಣೆಗಳು ಉಂಟಾಗಲಿವೆ. ಸಹನೆ ಅಗತ್ಯವಿದೆ. ಗುರು ಮಾರ್ಗದಲ್ಲಿ ನಡೆಯುವುದು ಸೂಕ್ತ, ಧ್ಯಾನ ಪೂಜೆಗಳಿಗೆ ಮನಸ್ಸು ಮಾಡುವಿರಿ, ಮಕ್ಕಳಿಗೆ ಉತ್ತಮ ಅವಕಾಶ.

ಧನಸ್ಸುರಾಶಿ
ಪ್ರಯಾಣದಲ್ಲಿ ಸಮಸ್ಯೆ, ವಾಹನ ಅಪಘಾತ ಸಾಧ್ಯತೆ, ದೃಷ್ಟಿಯ ತೊಂದರೆ ಯಾ ಶಿರೋವೇದನೆಯ ಸಂಭವವಿದೆ. ದಾಂಪತ್ಯದಲ್ಲಿ ಸಾಮರಸ್ಯ ವಿರುತ್ತದೆ. ಮಕ್ಕಳ ವಿಚಾರದಲ್ಲಿ ಚಿಂತೆ ವೃತ್ತಿರಂಗದಲ್ಲಿ ಪ್ರತಿಸ್ಪರ್ಧೆ ಕಂಡೀತು. ಉದ್ವೇಗ, ಸಹನೆ ಕಳೆದುಕೊಳ್ಳುವಿರಿ. ಧರ್ಮಕಾರ್ಯಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಸೋಲು, ದೈವನಿಂದನೆ, ಆಕಸ್ಮಿಕ ಧನಾಗಮನ.

ಮಕರರಾಶಿ
ಪಾಲುದಾರಿಕೆಯಲ್ಲಿ ಉತ್ತಮ ಅವಕಾಶ, ಆರ್ಥಿಕ ನೆರವು, ಕುಟುಂಬ ವರ್ಗದಿಂದ ಸ್ಫೂರ್ತಿ ಸಿಗಲಿದೆ. ಸದಾಚಾರ, ಸಂಪನ್ನತೆ, ಆತ್ಮ ಗೌರವವು ವೃದ್ಧಿಸಲಿದೆ. ಕೆಲವೊಂದು ಕಾರ್ಯಗಳು ನಡೆಯಲಿವೆ ಹಾಗೂ ಇತರರಿಂದ ಅನುಕೂಲವಾಗುತ್ತದೆ. ಮುನ್ನಡೆಯಿರಿ. ದಾಂಪತ್ಯ ಸಮಸ್ಯೆಗಳಿಗೆ ಮುಕ್ತಿ, ಬಂಧುಗಳ ಆಗಮನ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ವಿವಾಹಾದಿ ಶುಭ ಸಮಾರಂಭಗಳು ನಡೆದು ಅಚ್ಚರಿ ತಂದಾವು. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇದೆ. ಸಾರ್ವಜನಿಕ ರಂಗದಲ್ಲಿ ನಿಮ್ಮ ಸೇವೆ ಹಾಗೂ ಗುಣಗಳು ಗುರುತಿಸಲ್ಪಡುತ್ತದೆ. ಉತ್ಸಾಹ ಹೆಚ್ಚಲಿದೆ. ಅನ್ಯರಿಂದ ಸಮಸ್ಯೆ ಮತ್ತು ಕಲಹ, ಧನನಷ್ಟ, ವಸ್ತುಗಳ ಕಳವು.

ಮೀನರಾಶಿ
ಸ್ಪರ್ಧಾತ್ಮಕ ಮತ್ತು ಉನ್ನತ ವಿದ್ಯಾಭ್ಯಾಸದಲ್ಲಿ ಸಾಧನೆ, ಗುರುಬಲ ವಿಲ್ಲದಿದ್ದರೂ ತುಸು ವ್ಯತ್ಯಾಸವಾದೀತು. ಶಾರೀರಿಕ ಬಲ ಕ್ಷೀಣಿಸಿ ಕಾರ್ಯರಂಗದಲ್ಲಿ ಆಲಸ್ಯ. ದುಡುಕಿನ ಕೆಲಸದಿಂದ ವೈವಾಹಿಕ ಜೀವನಕ್ಕೆ ಅಡ್ಡಿಯಾಗ ಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಯತ್ನ ಅಗತ್ಯ. ಭಾವನೆ ಆಸೆ ಆಕಾಂಕ್ಷೆ ಕಲ್ಪನೆಗಳಿಗೆ ಬೆಲೆ ಸಿಗುತ್ತೆ, ಮಕ್ಕಳ ಜೀವನಮಟ್ಟ ಉತ್ತಮವಾಗಲಿದೆ, ಧರ್ಮಕಾರ್ಯಗಳಲ್ಲಿ ಆನಂದ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular