ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ: 07-09-2020

ನಿತ್ಯಭವಿಷ್ಯ: 07-09-2020

- Advertisement -

ಮೇಷರಾಶಿ
ಆರ್ಥಿಕವಾಗಿ ಅಭಿವದ್ಧಿ ಕಂಡು ಬಂದರೂ ಹೆಚ್ಚಿನ ಜಾಗ್ರತೆ ಅಗತ್ಯ, ಇಷ್ಟ ಮಿತ್ರರ ಆಗಮನದಿಂದ ಸಂತಸ ಹಾಗೂ ಒಳ್ಳೆಯ ಸಲಹೆಗಳು ದೊರೆತು ಮನಸ್ಸಿಗೆ ಸಂತೋಷ. ಸಾಲ ಮರುಪಾವತಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಕ್ಲೇಷ, ಆಪ್ತರೊಂದಿಗೆ ಮಾತುಕತೆ, ಅನಾರೋಗ್ಯ.

ವೃಷಭರಾಶಿ
ಕುಟುಂಬದ ವಿಷಯಗಳು ಇತ್ಯರ್ಥ, ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡುಬಂದು ತುಂಬಾ ಕಠಿನ ಪರಿಸ್ಥಿತಿಯನ್ನು ನೀವು ಎದುರಿಸುವಿರಿ. ಆದರೂ ಶನಿಯ ಬಲದಿಂದ ನಿಮ್ಮಲ್ಲಿ ಆತ್ಮಸ್ಥೈರ್ಯವು ಮೂಡಿ ಬರುವುದು, ಸಾಮಾಜಿಕ ಕೆಲಸಗಳಲ್ಲಿ ಭಾಗಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ.

ಮಿಥುನರಾಶಿ
ಪಾಲುದಾರಿಕೆ ವ್ಯವಹಾರದಲ್ಲಿ ಅಲ್ಪ ಲಾಭ, ನಿಮ್ಮ ಚುರುಕುತನ ಹಾಗೂ ಅವಿರತ ಚಟುವಟಿಕೆಯಿಂದ ನಿಮಗೆ ಒಳ್ಳೆಯ ಭರವಸೆಯ ಜೀವನವು ಕೂಡಿ ಬರುವುದು. ನೀವೆಣಿಸಿದ ಕಾರ್ಯಗಳಲ್ಲಿ ನಿಮಗೆ ಜಯವು ಲಭಿಸೀತು, ಅನಿರೀಕ್ಷಿತ ಧನಲಾಭ, ಸ್ವಂತ ಉದ್ಯಮಿಗಳಿಗೆ ನಷ್ಟ.

ಕಟಕರಾಶಿ
ನಿಮ್ಮ ಒಳ್ಳೆಯತನ ದುರುಪಯೋಗ ಆಗದಂತೆ ಎಚ್ಚರವಹಿಸಿ, ಶರೀರದಲ್ಲಿ ಆಲಸ್ಯ, ಆತಂಕ ಹೆಚ್ಚಾಗುವುದು, ಮನಸ್ಸನ್ನು ಸ್ವಲ್ಪ ತಹಬದಿಗೆ ತರಲು ನೋಡುವುದು ಅತೀ ಅಗತ್ಯ. ಸ್ವಲ್ಪ ಸಮಾಧಾನಿಗಳಾದ ನೀವು ಹೆಚ್ಚು ಚಿಂತಿಸುವಿರಿ. ಚಿಂತೆ ಬಿಟ್ಟು ಬಿಡಿರಿ. ಇದ್ದುದ್ದನ್ನು ಹಾಗೆ ಸ್ವೀಕರಿಸುವುದು ಉತ್ತಮ.

ಸಿಂಹರಾಶಿ
ಮಾತಾಪಿತೃಗಳಲ್ಲಿ ಪ್ರೀತಿ, ವಾತ್ಸಲ್ಯ, ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆಯಿಂದ ಅನುಕೂಲ, ಹಿರಿಯರ ಹಾಗೂ ಸಂಬಂಧಿಕರ ಹಿತನುಡಿ ಹಾಗೂ ಸಹಾಯವು ನಿಮಗೆ ಸ್ವಲ್ಪ ಸಮಾಧಾನ ನೀಡಲಿದೆ. ಆದರೆ ಮನೆಯಲ್ಲಿ ಹಿರಿಯರ ಆರೋಗ್ಯದ ಏರುಪೇರಿನಿಂದ ಉದ್ವಿಗ್ನತೆಯು ಕಾಡಲಿದೆ.

ಕನ್ಯಾರಾಶಿ
ಮಂಗಳ ಕಾರ್ಯಗಳಲ್ಲಿ ಭಾಗಿ, ನಿಮಗೆ ಒಂದರ ಹಿಂದೆ ಒಂದೊಂದು ಜಯದ ಮೆಟ್ಟಿಲು ಲಭಿಸೀತು. ಆದರೂ ಸ್ವಯಂಕೃತ ಅಪರಾಧದ ಬಗ್ಗೆ ನಿಮಗೇ ದುಖಃವಾದೀತು. ಮಿಂಚಿದ ಕಾರ್ಯ ಇನ್ನು ಚಿಂತಿಸಿ ಪ್ರಯೋಜನವಿಲ್ಲ, ನೂತನ ವಸ್ತ್ರ ಖರೀದಿ, ಸ್ತ್ರೀ ಲಾಭ, ದುಷ್ಟ ಜನರಿಂದ ದೂರವಿರಿ.

ತುಲಾರಾಶಿ
ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಫಲ, ಶತ್ರು ಬಾಧೆ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಹಿತಶತ್ರುಗಳ ಕಿರುಕುಳವು ಸ್ವಲ್ಪ ಕಡಿಮೆಯಾದೀತು. ಆರೋಗ್ಯದ ಏರುಪೇರಿನ ಬಗ್ಗೆ ಹೆಚ್ಚಿನ ಚಿಂತೆ ಬೇಡ. ಯಾಕೆಂದರೆ ನಿಮಗೆ ಸಹನೆಯ ಅಗತ್ಯವಿದೆ. ತಾಳ್ಮೆಯಿಂದ ಮುನ್ನಡೆಯಿರಿ.

ವೃಶ್ಚಿಕರಾಶಿ
ಕ್ರಯ ವಿಕ್ರಯಗಳಲ್ಲಿ ಲಾಭ, ಕೃಷಿಕರಿಗೆ ಉತ್ತಮ ದಿನ, ವಾಹನ ಯೋಗ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಪುತ್ರ ಯಾ ಪುತ್ರಿಯ ಲಗ್ನದ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳದೆ ಮುನ್ನಡೆಯಿರಿ. ಎಲ್ಲವೂ ನಿರ್ವಿಘ್ನವಾಗಿ ನಡೆಯಲಿದೆ. ಆರೋಗ್ಯದಲ್ಲಿ ಹೆಚ್ಚಿನ ತೊಂದರೆಗಳು ಕಂಡು ಬಂದರೂ ಉಪಶಮನವಾಗಲಿದೆ.

ಧನಸ್ಸುರಾಶಿ
ಗೃಹ ನಿರ್ಮಾಣ ಯಾ ಖರೀದಿಯ ಬಗ್ಗೆ ಚಿಂತಿಸುವಿರಿ. ಸ್ವಲ್ಪ ಪ್ರಯತ್ನ ಬಲದಿಂದ ಮುನ್ನಡೆಯಿರಿ. ನಿಮ್ಮ ಪ್ರಯತ್ನವು ನಿಮಗೆ ಸಫ‌ಲತೆಯನ್ನು ಕೊಡಲಿದೆ. ಆದರೂ ಸಮಾಧಾನದಿಂದಿರಿ, ಮಿತ್ರರಲ್ಲಿ ದ್ವೇಷ, ನೌಕರಿಯಲ್ಲಿ ಕಿರಿಕಿರಿ, ಅಲ್ಪ ಲಾಭ, ಮನಕ್ಲೇಷ, ಯತ್ನ ಕಾರ್ಯಗಳಲ್ಲಿ ವಿಳಂಬ, ಧನಹಾನಿ.

ಮಕರರಾಶಿ
ಅನ್ಯ ಜನರಲ್ಲಿ ವೈಮನಸ್ಸು, ನಾನಾ ರೀತಿಯ ದುಃಖ, ವಿಪರೀತ ವ್ಯಸನ, ಅಧಿಕಾರಿಗಳಿಂದ ಪ್ರಶಂಸೆ, ಅಭಿವೃದ್ಧಿ ಕುಂಠಿತ, ಕಾರ್ಯರಂಗದಲ್ಲಿ ಉತ್ತಮ ಅಭಿವೃದ್ಧಿಯು ತೋರಿಬರುವುದು. ಆದರೂ ಚಿಂತೆಯು ನಿಮ್ಮ ಬೆಂಬಿಡದೆ ಹಿಂಬಾಲಿಸುವುದು. ಸ್ವಪ್ರಯತ್ನದಿಂದ ಮುನ್ನಡೆಯುವುದು ಅಗತ್ಯ. ಕಿರು ಸಂಚಾವಿದೆ.

ಕುಂಭರಾಶಿ
ಕುಟುಂಬದ ಸದಸ್ಯರ ವರ್ತನೆಯು ನಿಮಗೆ ಕಿರಿಕಿರಿ ಎನಿಸಲಿದೆ. ಯಾರು ಏನೆಂದರೂ ಅದನ್ನು ತಲೆಯೊಳಗೆ ಹಾಕದೆ, ನಿಮ್ಮ ನೇರ ನಡೆಯಿಂದ ಮುನ್ನಡೆಯಿರಿ. ಎಲ್ಲರೂ ಹಿಂಬಾಲಿಸಿಯಾರು, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಮನಸ್ಸಿಗೆ ಚಿಂತೆ, ಅನಾರೋಗ್ಯ, ಅಕಾಲ ಭೋಜನ, ಸಾಲ ಮಾಡುವ ಸಾಧ್ಯತೆ.

ಮೀನರಾಶಿ
ಸಾಮಾನ್ಯ ಸೌಖ್ಯಕ್ಕೆಧಕ್ಕೆ, ತಿರುಗಾಟ, ಹೊಸ ಕೆಲಸದ ಬೇಟೆಯಲ್ಲಿ ನೀವಿದ್ದೀರಿ. ಅದರಲ್ಲಿ ನೀವು ಜಯ ಗಳಿಸುವಿರಿ. ಪ್ರಯತ್ನದಿಂದ ಮುಂದುವರಿದಲ್ಲಿ ನಿಮಗೆ ಕಂಕಣಬಲದ ಯೋಗವು ಪ್ರಾಪ್ತಿಯಾದೀತು. ಆರೋಗ್ಯದಲ್ಲಿ ಚೇತರಿಕೆಯು ಇದೆ, ಅತಿಯಾದ ನಿದ್ರೆ, ಶತ್ರು ನಾಶ, ನಂಬಿಕೆ ದ್ರೋಹ, ಅಧಿಕಾರಿಗಳಲ್ಲಿ ಕಲಹ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular