ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ : 30-09-2020

ನಿತ್ಯಭವಿಷ್ಯ : 30-09-2020

- Advertisement -

ಮೇಷರಾಶಿ
ಸಾಂಸಾರಿಕವಾಗಿ ಸುಖ, ಸಂತೋಷಗಳು ಹಂತ ಹಂತವಾಗಿ ಅಭಿವೃದ್ಧಿಯನ್ನು ಕಾಣಲಿವೆ. ಆಧ್ಯಾತ್ಮದ ಕಡೆ ಒಲವು, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಯಾವುದಕ್ಕೂ ಹೊಂದಾಣಿಕೆಯು ಅಗತ್ಯವಿದೆ. ನಿಮ್ಮ ಮನೆತನದ ಹಿರಿಯ ವ್ಯಕ್ತಿಯೊಂದಿಗೆ ಸಲಹೆಗಳನ್ನು ಕೇಳಿರಿ.

ವೃಷಭರಾಶಿ
ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗುತ್ತೆ, ಆಸ್ತಿಯ ವಿಚಾರದಲ್ಲಿ ಸ್ವಲ್ಪ ಕಲಹ. ಕಠಿಣ, ಪರಿಶ್ರಮ ಹಾಗೂ ಆತ್ಮ ವಿಶ್ವಾಸದಿಂದ ಮುನ್ನಡೆವ ಅಗತ್ಯವಿದೆ. ಹಿತ ಶತ್ರುಗಳ ನಡೆನುಡಿ ಗಮನಿಸುತ್ತಾ ಇರಬೇಕು. ಹಳೇ ಮಿತ್ರರ ಭೇಟಿ ಸಂತೋಷಕ್ಕೆ ಕಾರಣವಾದೀತು. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.

ಮಿಥುನರಾಶಿ
ಉತ್ತಮ ಗುರುಬಲದ ನಿಮಗೆ ಯಾವುದೇ ಒಳ್ಳೆಯ ಕಾರ್ಯಗಳಿಗೆ ಬುನಾದಿ ಹಾಕಬಹುದು. ಉನ್ನತ ಅಧಿಕಾರಿಗಳಿಂದ ಪ್ರಶಂಸೆ, ಶೀಘ್ರ ಹಣ ಸಂಪಾದಿಸುವಿರಿ, ವಿರೋಧಿಗಳಿಂದ ಕುತಂತ್ರ. ಕಾರ್ಮಿಕ ವರ್ಗದವರಿಗೆ ಭಡ್ತಿಯ ಸೂಚನೆ ತಂದೀತು. ಸಮಾಧಾನದಿಂದ ಕಳೆಯುವ ದಿನಗಳಾಗಲಿವೆ. ಶುಭವಿದೆ.

ಕಟಕರಾಶಿ
ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಸಮಾಜದಲ್ಲಿ ಗೌರವ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಸಾಧಾರಣ. ಕಾರ್ಯನಿಮಿತ್ತ ಸಂಚಾರವು ಕೂಡಿ ಬಂದೀತು. ಲಾಭ ಸ್ಥಾನದ ಕೇತುವಿನಿಂದಾಗಿ ಅನಿರೀಕ್ಷಿತವಾಗಿ ಲಾಭ ಪಡೆಯುವಿರಿ. ಮಕ್ಕಳ ಶ್ರೇಯೋಭಿವೃದ್ಧಿಯು ತೋರಿ ಬಂದೀತು. ಮನಸ್ಸು ಸ್ವತ್ಛಂದವಾಗಿಟ್ಟುಕೊಳ್ಳಿರಿ.

ಸಿಂಹರಾಶಿ
ಅನುಕೂಲಕರವಾದ ದಿನ, ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರವಹಿಸಿ, ಆದಾಯ ಉತ್ತಮವಾಗಿರುತ್ತದೆ. ಹಲವು ದಿನಗಳಿಂದ ಚಿಂತೆಯ ಗೂಡಾದಿದ್ದ ನೀವು ಇಂದು ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಡುವಿರಿ. ಹಲವು ಕಾಲದಿಂದ ನನೆಗುದಿಗೆ ಬಿದ್ದಿದ ಕಾರ್ಯಕ್ಕೆ ಸ್ವಲ್ಪ ಚಾಲನೆಯು ದೊರಕಲಿದೆ.

ಕನ್ಯಾರಾಶಿ
ಸ್ತ್ರೀಯರಿಗೆ ಆದಾಯಕ್ಕಿಂತ ಖರ್ಚು ಜಾಸ್ತಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ. ಮಂಗಲಕಾರ್ಯದ ಬಗ್ಗೆ ಆಲೋಚಿಸಿರುವಿರಿ. ಆಗಿಯೇ ತಿರುವುದು. ಮನೆಯಲ್ಲಿ ಸಂಭ್ರಮ ಹಾಗೂ ಸಂತಸದ ವಾತಾವರಣ. ಕೆಟ್ಟ ವ್ಯಸನದ ಮಿತ್ರರ ಚಾಳಿಯಿಂದ ನೀವು ಜೀವನವನ್ನು ಕಳೆದು ಕೊಂಡೀರಾ ಜೋಕೆ.

ತುಲಾರಾಶಿ
ಸಮತೋಲನ ಕಾಪಾಡಿಕೊಳ್ಳಿ, ಉದ್ಯೋಗಸ್ಥರಿಗೆ ಹೆಚ್ಚು ಕೆಲಸ, ಗೆಳೆಯರ ಸಹಾಯ. ಏನೂ ಏರುಪೇರು ಇಲ್ಲದೆ ಸಾಮಾನ್ಯರಂತೆ ದಿನ ಕಳೆಯುವಿರಿ. ಆರ್ಥಿಕ ರಂಗದಲ್ಲಿ ಸ್ವಲ್ಪ ಏಳಿಗೆ ಕಂಡು ಬಂದೀತು. ಗೃಹದಲ್ಲಿ ಪತ್ನಿ ಹಾಗೂ ಮಕ್ಕಳಿಂದ ಸಹಕಾರವಿದ್ದು ತುಸು ನೆಮ್ಮದಿ ದೊರಕೀತು.

ವೃಶ್ಚಿಕರಾಶಿ
ಹಣಕಾಸಿನ ತೊಂದರೆ, ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಮಕ್ಕಳ ಅಗತ್ಯಕ್ಕೆ ಖರ್ಚು ಹೆಚ್ಚಾಗುವುದು. ಉತ್ತಮ ಗುರುಬಲವಿರುವುದರಿಂದ ಕೈಹಾಕಿದ ಕೆಲಸದಲ್ಲಿ ಜಯ ಸಾಧಿಸುವಿರಿ. ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿಂದ ಸಮಾಧಾನ ಮೂಡಿ ಬಂದೀತು. ಆದರೂ ಆರೋಗ್ಯದಲ್ಲಿ ಜಾಗ್ರತೆ ಮಾಡುವುದು.

ಧನಸ್ಸುರಾಶಿ
ವೃತ್ತಿರಂಗದಲ್ಲಿ ಏರಿಳಿತ ಕಂಡು ಬಂದರೂ ಸಮಾಧಾನವಾಗಲಿದೆ. ಕೌಟುಂಬಿಕ ಜೀವನದಲ್ಲಿ ತೃಪ್ತಿ, ಆರ್ಥಿಕ ಲಾಭ, ಧನಲಾಭ, ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಲಾಭ. ಬೇರೊಂದೂರಿಗೆ ವರ್ಗಾವಣೆ ಇದ್ದೀತು. ಉಪೇಕ್ಷೆ ಮಾಡದಿರಿ. ಮುಂದೆ ಒಳ್ಳೆಯದಿದೆ. ಮಾವನ ಮನೆಯಿಂದ ಒಳ್ಳೆಯ ಹಿತನುಡಿಗಳ ಲಾಭ ಸಿಕ್ಕೀತು.

ಮಕರರಾಶಿ
ಮನೆಯಲ್ಲಿ ಮಕ್ಕಳ ಕಿರಿಕಿರಿಯಿಂದ, ಸಿಟ್ಟು ಬಂದೀತು. ತಾಳ್ಮೆ ಅಗತ್ಯವಿದೆ. ವಾದ-ವಿವಾದಗಳಲ್ಲಿ ಎಚ್ಚರದಿಂದಿರಿ, ಸ್ತ್ರೀಯರ ಆರೋಗ್ಯ ದಲ್ಲಿ ಏರುಪೇರು, ದೂರ ಪ್ರಯಾಣ. ಕಾರ್ಯರಂಗದಲ್ಲಿ ಅನ್ಯ ರಿಂದ ಉಪಟಳ ಕಂಡು ಬಂದೀತು. ವೃತ್ತಿಯ ಹುಡುಕಾಟದಲ್ಲಿರುವವರಿಗೆ ಮನಸ್ಸಿಗೆ ಸಮಾಧಾನ ತರುವ ಉದ್ಯೋಗ ಸಿಗಲಿದೆ.

ಕುಂಭರಾಶಿ
ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರಿಕೆ ಅಗತ್ಯ, ವಿರೋಧಿಗಳ ಮೇಲೆ ಒಂದು ಕಣ್ಣಿರಲಿ.ಕಾರ್ಯಗತಿಯಲ್ಲಿ ಏಳಿಗೆ ಕಂಡು ಬರಲಿದೆ. ಉತ್ತಮ ದೈವಾನುಗ್ರಹದಿಂದ ನಿಮ್ಮಣಿಕೆಯ ಕಾರ್ಯಗಳೆಲ್ಲಾ ಸಿದಿ§ಸಲಿವೆ. ಆರ್ಥಿಕವಾಗಿ ಏನೂ ಚಿಂತೆ ಇರದು. ಮನೆಯಲ್ಲಿ ಅತಿಥಿಗಳ ಆಗಮನವಿದ್ದೀತು.

ಮೀನರಾಶಿ
ಕೆಲಸದಲ್ಲಿ ಒತ್ತಡ ಜಾಸ್ತಿ, ಆದಾಗ್ಯೂ ಉತ್ತಮ ದಿನ, ಹಿರಿಯರ ಸಲಹೆ ಆಶೀರ್ವಾದಗಳು ಲಾಭಕರ. ನೂತನ ಜಾಗದ, ಯಾ ವಾಹನ ಖರೀದಿಯಿಂದ ಸಂತಸ. ಮಕ್ಕಳ ಅಭಿವೃದ್ಧಿ ಕಂಡು ಸಂತಸವಾದೀತು. ಮಕ್ಕಳ ನೆಂಟಸ್ಥಿಕೆಯ ವಿಚಾರದಲ್ಲಿ ಸ್ವಲ್ಪ ವಿಚಾರಿಸಿ ಮುನ್ನಡೆಯಿರಿ. ಸಂಚಾರದಿಂದ ಸಮಾಧಾನವಿದ್ದೀತು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular