ಮಂಗಳವಾರ, ಜೂನ್ 17, 2025
Homehoroscopeನಿತ್ಯಭವಿಷ್ಯ : 10-02-2021

ನಿತ್ಯಭವಿಷ್ಯ : 10-02-2021

- Advertisement -

ಮೇಷರಾಶಿ
ಆರೋಗ್ಯದ ಬಗ್ಗೆ ಕಾಳಜಿಯಿರಲಿ, ಕುಟುಂಬದಲ್ಲಿ ನೆಮ್ಮದಿ, ರಾಜಕಾರಣಿಗಳಿಗೆ ವರ್ಚಸ್ಸು ಕಳೆಗುಂದಲಿದೆ, ಆಕಸ್ಮಿಕ ಅಧಿಕ ಖರ್ಚು, ಆರೋಗ್ಯ ಸಮಸ್ಯೆ, ದೂರ ಪ್ರಯಾಣ, ಸ್ಥಳ ಬದಲಾವಣೆ, ಅಪರಿಚಿತರ ಸ್ನೇಹ ಸಲ್ಲದು.

ವೃಷಭರಾಶಿ
ಮಾನಸಿಕ ಅಸ್ಥಿರತೆ ಕಾಡಲಿದೆ, ಭೀತಿ ಕಾಡಲಿದೆ, ಅಮೂಲ್ಯ ವಸ್ತುಗಳ ಖರೀದಿ, ದುಶ್ಚಟಕ್ಕೆ ಹಣ ವ್ಯಯ, ಕಿರು ಸಂಚಾರ ಭಾಗ್ಯ, ಮಾನಸಿಕ ವ್ಯಥೆ, ಕೃಷಿಕರಿಗೆ ಲಾಭ, ಉತ್ತಮ ಬುದ್ಧಿಶಕ್ತಿ.

ಮಿಥುನರಾಶಿ
ಕಾರ್ಯರಂಗದಲ್ಲಿ ಇತರರಿಂದ ಸಹಕಾರ, ಮಾಡಿದ ಕೆಲಸಗಳಲ್ಲಿ ಜಯ, ವ್ಯಾಪಾರ, ವ್ಯವಹಾರಗಳಲ್ಲಿ ಯಾರನ್ನೂ ನಂಬಲಾರದ ಸ್ಥಿತಿ, ದೈವಾನುಗ್ರಹದಿಂದ ಅನುಕೂಲ, ಶತ್ರುಗಳಿಂದ ತೊಂದರೆ, ಪ್ರವಾಸ ಸಾಧ್ಯತೆ.

7th Haven 1

ಕಟಕರಾಶಿ
ಆತ್ಮಸ್ಥೈರ್ಯ ಹಾಗೂ ಪರಿಶ್ರಮದಿಂದ ಯಶಸ್ಸು, ಗೆಳೆಯರೊಂದಿಗೆ ಕಲಹ, ಮನಸ್ಸಿಗೆ ನಾನಾ ಚಿಂತೆ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಅಗತ್ಯ, ಚಿನ್ನಾಭರಣ ವಿಚಾರದಲ್ಲಿ ಎಚ್ಚರ, ತೀರ್ಥಕ್ಷೇತ್ರ ದರ್ಶನ.

ಸಿಂಹರಾಶಿ
ಹಣಕಾಸಿನ ಹಲವು ದಾರಿಗಳು ಗೋಚರವಾಗಿದೆ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಆರೋಗ್ಯದಲ್ಲಿ ಚೇತರಿಕೆ, ಮಹಿಳೆಯರಿಗೆ ಬಡ್ತಿ, ಅಪಘಾತವಾಗುವ ಸಾಧ್ಯತೆ, ಆಸ್ತಿ ವಿಚಾರದಲ್ಲಿ ಕಲಹ, ವೃತ್ತಿರಂಗದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಿ.

ಕನ್ಯಾರಾಶಿ
ರಾಜಕೀಯ ವರ್ಗದವರಿಗೆ ಯಶಸ್ಸು, ಮಿತ್ರರಿಂದ ಸಹಾಯ, ದೂರ ಪ್ರಯಾಣ, ಸಾಲದಿಂದ ಮುಕ್ತಿ, ಹಿರಿಯರ ಆರೋಗ್ಯಕ್ಕಾಗಿ ಖರ್ಚು, ಸಾಲಕ್ಕೆ ಜಾಮೀನುದಾರರಾಗಬೇಡಿ, ಶತ್ರುಗಳ ನಾಶ, ಅಲ್ಪ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ.

ತುಲಾರಾಶಿ
ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆದಾಯ ಹೆಚ್ಚಳ, ಮಿತ್ರರಿಂದ ಧನ ಸಹಾಯ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಯೋಗ್ಯ ವಯಸ್ಕರಿಗೆ ಕಂಕಣಬಲ ಕೂಡಿಬರಲಿದೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕರಾಶಿ
ಪುಣ್ಯಕ್ಷೇತ್ರಗಳ ದರ್ಶನ, ದೂರ ಸಂಚಾರದಿಂದ ಕಾರ್ಯಾನುಕೂಲ, ಆರೋಗ್ಯದ ಬಗ್ಗೆ ಎಚ್ಚರವಿರಲಿ, ನಂಬಿಕೆ ದ್ರೋಹ, ಅನ್ಯರಲ್ಲಿ ವೈಮನಸ್ಸು, ಋಣಭಾದೆ, ತೀರ್ಥಯಾತ್ರೆ ದರ್ಶನ, ಕುಟುಂಬ ಸೌಖ್ಯ, ಚಂಚಲ ಸ್ವಭಾವ.

ಧನಸುರಾಶಿ
ಶಿಕ್ಷಣ ಕ್ಷೇತ್ರದವರಿಗೆ ಯಶಸ್ಸು, ವಾಣಿಜ್ಯೋಧ್ಯಮಿಗಳಿಗೆ ಲಾಭ, ಮನೆಯಲ್ಲಿ ಮಂಗಲ ಕಾರ್ಯ, ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಕುಟುಂಬದಲ್ಲಿ ಕಲಹ, ಮಾನಸಿಕ ವ್ಯಥೆ, ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ.

ಮಕರರಾಶಿ
ಆರೋಗ್ಯದಲ್ಲಿ ಏರುಪೇರು, ಬಾಳ ಸಂಗಾತಿಯಿಂದ ಕಿರಿಕಿರಿ, ಸರಕಾರಿ ಉದ್ಯೋಗಿಗಳಿಗೆ ಮುನ್ನಡೆ, ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆತ್ಮೀಯರಲ್ಲಿ ಕಲಹ, ಅಧಿಕಾರಿಗಳಿಂದ ತೊಂದರೆ.

ಕುಂಭರಾಶಿ
ಕುಟುಂಬದಲ್ಲಿ ನೆಮ್ಮದಿ, ಮನೆಯಲ್ಲಿ ಶಾಂತಿ ಸಮಾಧಾನ, ಆರ್ಥಿಕ ಬಿಕ್ಕಟ್ಟು ಆಗಾಗ ಆತಂಕವನ್ನು ತರಲಿದೆ, ಯತ್ನ ಕಾರ್ಯದಲ್ಲಿ ತೊಂದರೆ, ಅನಗತ್ಯ ತಿರುಗಾಟ, ಉದ್ಯೋಗದಲ್ಲಿ ಬಡ್ತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ಮೀನರಾಶಿ
ಕೆಲಸ ಕಾರ್ಯಗಳಲ್ಲಿ ವಿಳಂಭ, ವೃತ್ತಿರಂಗದಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುವಿರಿ, ದೈವಾನುಗ್ರಹದಿಂದ ಆತ್ಮವಿಶ್ವಾಸ ಹೆಚ್ಚಳ, ಆಕಸ್ಮಿಕ ಧನಲಾಭ, ಯಾರನ್ನು ಹೆಚ್ಚು ನಂಬಬೇಡಿ, ಸಾಲ ಮರುಪಾವತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular