ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 12-02-2021

ನಿತ್ಯಭವಿಷ್ಯ : 12-02-2021

- Advertisement -

ಮೇಷರಾಶಿ
ಸಮಾಧಾನದಿಂದ ಮುನ್ನಡೆದರೆ ಯಶಸ್ಸು, ಕಷ್ಟ ನಷ್ಟ ಎದುರಾದರೂ ಅದನ್ನು ಎದುರಿಸುವ ಶಕ್ತಿ ನಿಮ್ಮಲ್ಲಿದೆ, ನೋಂದಣಿ ಕಾರ್ಯಗಳಿಗೆ ತಡೆ, ಮಕ್ಕಳೊಂದಿಗೆ ಕಲಹ ಮತ್ತು ಕಿರಿಕಿರಿ, ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ವೃಷಭರಾಶಿ
ಸಹವಾಸ ದೋಷದಿಂದ ಅಡ್ಡದಾರಿ ಹಿಡಿಯದಿರಿ, ಎಣಿಕೆಗಿಂತ ಮಿಗಿಲಾದ ಧನಲಾಭ, ಆರ್ಥಿಕ ನೆರವು, ಕುಟುಂಬದಲ್ಲಿ ವಾಗ್ವಾದಗಳು, ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿದಿ, ಯೋಗ್ಯ ವಯಸ್ಕರಿಗೆ ಕಂಕಣಬಲ, ನೆಮ್ಮದಿ ಭಂಗ.

ಮಿಥುನರಾಶಿ
ಅಧಿಕಾರಿ ವರ್ಗದಲ್ಲಿ ಭಿನ್ನಮತ ಕಂಡುಬರಲಿದೆ, ಆಸ್ತಿ ಮಾರಾಟದ ಲಾಭ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಯಶಸ್ಸು, ಸಾಲಗಾರರಿಂದ ಸಂಕಷ್ಟ, ಅನಗತ್ಯ ವಿಷಯಗಳಿಗೆ ಕಿರಿಕಿರಿ, ಮಿತ್ರರಿಂದ ನಷ್ಟ.

ಕಟಕರಾಶಿ
ಸರಕಾರಿ ಅಧಿಕಾರಿಗಳಿಗೆ ತೊಂದರೆ, ಉದ್ಯೋಗ ನಿಮಿತ್ತ ಪ್ರಯಾಣ, ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಆರೋಗ್ಯ ಭಾಗ್ಯವಿದ್ದರೂ ನೆಮ್ಮದಿಯಿರದು, ಇದ್ದುದರಲ್ಲೇ ತೃಪ್ತಿ ಪಟ್ಟುಕೊಳ್ಳಿ, ಅನಗತ್ಯ ಮಾತಿನಿಂದ ಕಲಹ, ಅವಕಾಶ ವಂಚಿತರಾಗುವಿರಿ.

ಸಿಂಹರಾಶಿ
ಕಾರ್ಯಸಿದ್ದಿ, ಉತ್ತಮ ಅವಕಾಶಗಳು ಪ್ರಾಪ್ತಿ, ವ್ಯವಹಾರದಲ್ಲಿ ಸುಧಾರಣೆ ಕಂಡುಬರಲಿದೆ, ಗೃಹದಲ್ಲಿ ಸಂಭ್ರಮದ ವಾತಾವರಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ವೇಗವಾಗದಂತೆ ಎಚ್ಚರವಾಗಿರಿ, ಸಾಲದಿಂದ ತೊಂದರೆ, ಪ್ರಯಾಣದಲ್ಲಿ ಕಿರಿಕಿರಿಗಳು.

ಕನ್ಯಾರಾಶಿ
ಕಚೇರಿ, ಕೆಲಸಗಳಲ್ಲಿ ಚಿಂತೆ ಹೆಚ್ಚಲಿದೆ, ದುಶ್ಚಟಗಳಿಂದ ದೂರವಿರಿ, ಉದ್ಯೋಗ ನಷ್ಟ, ಸ್ವಂತ ಉದ್ಯಮದಲ್ಲಿ ನಷ್ಟ, ವೃತ್ತಿ ಕ್ಷೇತ್ರದಲ್ಲಿ ಸ್ಥಾನಮಾನ ಬದಲಾವಣೆ, ಮಿತ್ರರೊಂದಿಗೆ ನಿಷ್ಠುರ, ಸರ್ಕಾರದಿಂದ ತೊಂದರೆ, ರಾಜಯೋಗದ ದಿವಸ.

ತುಲಾರಾಶಿ
ಅಲಂಕಾರಿಕ ವಸ್ತುಗಳ ಖರೀದಿ, ಉದ್ಯೋಗ ನಿಮಿತ್ತ ಪ್ರಯಾಣ, ವಿದ್ಯಾರ್ಜನೆಗೆ ಭಂಗ ಕಂಡುಬಂದೀತು, ಪತ್ರಿಕೋದ್ಯಮಿಗಳಿಗೆ ಯಶಸ್ಸು, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ, ಕುಟುಂಬದಲ್ಲಿ ವಾಗ್ವಾದಗಳು, ಉದ್ಯೋಗ ಸ್ಥಳದಲ್ಲಿ ಕುತಂತ್ರ.

ವೃಶ್ಚಿಕರಾಶಿ
ಆಸ್ತಿ ಮಾರಾಟದಲ್ಲಿ ಯಶಸ್ಸು, ಪ್ರಯಾಣಕ್ಕೆ ಅಡೆತಡೆಗಳು, ಅಲಂಕಾರಿಕ ವಸ್ತುಗಳ ಖರೀದಿ, ಹಣಕಾಸಿನ ಸಮಸ್ಯೆ ಎದುರಾಗುವ ಸಾಧ್ಯತೆ, ಸಾಲಗಾರರಿಂದ ಮಾನಹಾನಿ, ಅನಾರೋಗ್ಯದ ಸಮಸ್ಯೆ, ಜೀವನದ ಬಗ್ಗೆ ಬೇಸರ, ಕೃಷಿಕರಿಗೆ ಅಲ್ಪ ಆದಾಯ.

ಧನಸ್ಸುರಾಶಿ
ಮನೆಯಲ್ಲಿ ಶುಭಕಾರ್ಯ, ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ನೆಮ್ಮದಿ, ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ತಂದೆ ಮಕ್ಕಳ ನಡುವೆ ಬೇಸರ, ಅನಿರೀಕ್ಷಿತವಾಗಿ ಉದ್ಯೋಗ ಪ್ರಾಪ್ತಿ, ವಾಣಿಜ್ಯ ಹಾಗೂ ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶಸ್ಸು, ಪಾತ್ರೆ ವ್ಯಾಪಾರಿಗಳಿಗೆ ನಷ್ಟ.

ಮಕರರಾಶಿ
ಮನೆಯಲ್ಲಿ ಮಂಗಲ ಕಾರ್ಯಕ್ಕೆ ಚಿಂತನೆ, ಆಪ್ತೇಷ್ಟರಿಂದ ಸಹಕಾರ, ಅಧಿಕ ನಷ್ಟ, ಮಿತ್ರರಿಂದ ಸಂಕಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ಬಾಕಿ ವಸೂಲಿ ಭರದಿಂದ ನಡೆದು ಸಫಲತೆ ಸಾಧಿಸುವಿರಿ, ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ದಿನಾಂತ್ಯಕ್ಕೆ ಶುಭವಾರ್ತೆ.

ಕುಂಭರಾಶಿ
ಧಾರ್ಮಿಕ ಕಾರ್ಯಗಳು ನಡೆದರೂ ಸಮಾಧಾನ ಸಿಗಲಾರದು, ವಾಣಿಜ್ಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಯಶಸ್ಸು, ಯೋಗ್ಯ ವಯಸ್ಕರಿಗೆ ಕಂಕಣಬಲ, ಹೆಣ್ಣುಮಕ್ಕಳಿಂದ ಬೇಸರ, ದಾಂಪತ್ಯದಲ್ಲಿ ವಿರಸಗಳು, ಮಕ್ಕಳ ಬಗ್ಗೆ ಚಿಂತೆ.

ಮೀನರಾಶಿ
ಹೊಸ ಯೋಜನೆಗಳು ಕೈಗೂಡಲಿದೆ, ಗೃಹ ನಿರ್ಮಾಣ ಕಾರ್ಯದಲ್ಲಿ ಯಶಸ್ಸು, ಧನವಿನಿಯೋಗದಿಂದ ಉತ್ತಮ ಫಲದಾಯಕ, ಆದಾಯದ ಜೊತೆಗೆ ಯಶಸ್ಸು, ಭೂಮಿ ಒಲಿದು ಬರುವುದು, ಆರ್ಥಿಕ ಪರಿಸ್ಥಿತಿ ಉತ್ತಮ, ವಿಚ್ಛೇದನ ಕೇಸುಗಳಲ್ಲಿ ಜಯ, ಮಾನಸಿಕ ನೆಮ್ಮದಿ ಪ್ರಾಪ್ತಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular