ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 20-11-2020

ನಿತ್ಯಭವಿಷ್ಯ : 20-11-2020

- Advertisement -

ಮೇಷರಾಶಿ
ಧನಾಗಮನ ಉತ್ತಮವಿರುತ್ತದೆ, ಮನೆಯಲ್ಲಿ ಅಸಮಾಧಾನದ ವಾತಾವರಣವಿದ್ದರೂ ಸಮಾಧಾನದಿಂದಿರಬೇಕಾದೀತು, ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಮಿಷನರಿ ಉದ್ಯೋಗಸ್ಥರಿಗೆ ಅಧಿಕ ಲಾಭ, ಆಕಸ್ಮಿಕವಾಗಿ ಮಿತ್ರರಿಂದ ತೊಂದರೆ.

ವೃಷಭರಾಶಿ
ಆರೋಗ್ಯದಲ್ಲಿ ಏರುಪೇರು, ಬಾಕಿ ಉಳಿದಿದ್ದ ಕಾರ್ಯಗಳು ಮುಕ್ತಾಯಗೊಳ್ಳಲಿವೆ, ಜೀವನದಲ್ಲಿ ಈ ಸಮಯ ನಿಮಗೆ ತೊಂದರೆ ಕೊಟ್ಟೀತು, ದಾಯಾದಿ ಕಲಹಗಳು, ಉದ್ಯೋಗ ಸ್ಥಳದಲ್ಲಿ ನಷ್ಟ, ದಾಂಪತ್ಯದಲ್ಲಿ ವಿರಸ, ಬೇಸರ ಕಲಹ.

ಮಿಥುನರಾಶಿ
ಸಾಲಗಾರರಿಂದ ಕುಟುಂಬಕ್ಕೆ ಕಳಂಕ, ಸಾಲ ಮಾಡುವ ದುಸ್ಥಿತಿ, ಮಕ್ಕಳೊಂದಿಗೆ ವಾಗ್ವಾದಗಳು, ನವದಂಪತಿಗಳಿಗೆ ಮಧುಚಂದ್ರದ ಭಾಗ್ಯ ಒದಗಿ ಬಂದೀತು, ಸಾಮಾಜಿಕವಾಗಿ ಜನಾನುರಾಗವು ಲಭಿಸಲಿದೆ.

ಕಟಕರಾಶಿ
ಕಾರ್ಯರಂಗದಲ್ಲಿ ನಿರಾತಂಕವಾಗಿ ಕೆಲಸ ಕಾರ್ಯಗಳು ನಡೆಯಲಿವೆ, ಸ್ವಂತ ವ್ಯಾಪಾರದಲ್ಲಿ ತೊಂದರೆ, ಪ್ರಯತ್ನ ಬಲದಿಂದ ಕಂಕಣ ಬಲ ಕೂಡಿಬರಲಿದೆ, ಮಕ್ಕಳಿಂದ ಮನೆಯಲ್ಲಿ ಮನಸ್ತಾಪ, ಮಹಿಳಾ ಸಹೋದ್ಯೋಗಿಗಳಿಂದ ನೋವು.

ಸಿಂಹರಾಶಿ
ವೃತ್ತಿರಂಗದಲ್ಲಿ ಏರುಪೇರು, ಮನಸ್ಸಿನಾಳದ ಬಯಕೆಗಳು ಸದ್ಯದಲ್ಲೇ ಗೋಚರಕ್ಕೆ ಬರಲಿವೆ, ಅಸಾಧ್ಯವೆಂದೆಣಿಸಿದ ಕಾರ್ಯಗಳಲ್ಲಿ ಜಯ ಸಿಗಲಿದೆ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ವಾಹನ ಮತ್ತು ಸ್ಥಿರಾಸ್ತಿ ನಷ್ಟ, ಉದ್ಯೋಗಕ್ಕಾಗಿ ಅನಗತ್ಯ ತಿರುಗಾಟಕ್ಕೆ ಅಧಿಕ ಖರ್ಚು.

ಕನ್ಯಾರಾಶಿ
ವೃತ್ತಿರಂಗದಲ್ಲಿ ವಿಚಾರಗಳನ್ನು ಅವಲೋಕಿಸಿ ಮುಂದಿನ ಹೆಜ್ಜೆಯನ್ನಿಡಿ, ಸಾಂಸಾರಿಕವಾಗಿ ಸದಸ್ಯರ ಪ್ರೀತಿ ವಿಶ್ವಾಸ ಗೆಲ್ಲುವಿರಿ, ಮನೆಗೆ ಅತಿಥಿಗಳ ಆಗಮನ, ಸಾಲ ಮಾಡುವಿರಿ, ದಾಯಾದಿ ಕಲಹಗಳು, ಅಧಿಕಾರಿಗಳಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾರಾಶಿ
ವೃತ್ತಿರಂಗದಲ್ಲಿ ಅಭಿವೃದ್ದಿದಾಯಕ ಬದಲಾವಣೆ ಕಂಡುಬರಲಿದೆ, ಸಾಂಸಾರಿಕವಾಗಿ ಸಂತಸದ ವಾತಾವರಣ, ಉದ್ಯೋಗ ಸ್ಥಳದಲ್ಲಿ ಒತ್ತಡ, ಉತ್ತಮ ಹೆಸರು, ಆಕಸ್ಮಿಕ ಅವಘಡಗಳು, ವ್ಯಾಪಾರದಲ್ಲಿ ತೊಂದರೆ, ಸಂಗಾತಿಯಿಂದ ಹಣಕಾಸಿನ ಸಹಕಾರ.

ವೃಶ್ಚಿಕರಾಶಿ
ಕುಟುಂಬ ವರ್ಗದ ಸಹಮತವಿದೆ, ಕೆಲಸ ಕಾರ್ಯಗಳಲ್ಲಿ ವಿಳಂಭ, ರಾಜಕಾರಣಿಗಳಿಗೆ ನಯವಂಚನೆಯ ಅನುಭವ, ಸಾಲ ತೆಗೆದುಕೊಳ್ಳುವ ಆಲೋಚನೆ, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸುರಾಶಿ
ಬಂಧುಗಳು ದೂರಾಗುವರು, ವೃತ್ತಿರಂಗದಲ್ಲಿ ತಟಸ್ಥ ಧೋರಣೆ ಫಲಕಾರಿಯಾದೀತು, ವೈವಾಹಿಕ ಸಂಬಂಧಗಳ ಬಗ್ಗೆ ಆತುರತೆ ಸಲ್ಲದು, ಗೃಹದಲ್ಲಿ ಸಣ್ಣ ಸಣ್ಣ ಮನಸ್ತಾಫದಿಂದ ಮಾನಸಿಕ ನೆಮ್ಮದಿ ಕೆಡಲಿದೆ, ನೆರೆಹೊರೆಯವರಿಂದ ಕಷ್ಟ, ಸಹೋದರರಿಂದ ನಷ್ಟ, ಶತ್ರುಗಳ ಕಾಟ, ಅತ್ತೆಯಿಂದ ತೊಂದರೆ.

ಮಕರರಾಶಿ
ಆತ್ಮ ವಿಮರ್ಷೆಗೆ ಇದು ಸಕಾಲ, ಚಿಂತಿತ ಕೆಲಸ ಕಾರ್ಯಗಳಲ್ಲಿ ಫಲ ಸಿಗಲಿದೆ, ಆರ್ಥಿಕವಾಗಿ ಹೆಚ್ಚಿನ ಅಭಿವೃದ್ದಿಗೆ ಪೂರಕ ವಾತಾವರಣವಿರುತ್ತದೆ, ಮಿತ್ರರಿಂದ ದಾಂಪತ್ಯದಲ್ಲಿ ವಾಗ್ವಾದ, ಕಟ್ಟಡ ನಿರ್ಮಾಣ ವಸ್ತುಗಳಿಂದ ಅಧಿಕ ಲಾಭ, ಮಕ್ಕಳಿಂದ ಭೂಮಿ ಮತ್ತು ವಾಹನ ಪ್ರಾಪ್ತಿ.

ಕುಂಭರಾಶಿ
ಶತ್ರು ಭಯ, ಆರ್ಥಿಕವಾಗಿ ಸಾಲಗಾರರ ಕಿರಿಕಿರಿ, ವಿದ್ಯಾರ್ಥಿಗಳಿಗೆ ಉದಾಸೀನತೆ,ಆರೋಗ್ಯದ ಸಮಸ್ಯೆ, ಸಾಲದ ಸಮಸ್ಯೆಯಿಂದ ನಿದ್ರಾಭಂಗ, ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.

ಮೀನರಾಶಿ
ವೃತ್ತಿರಂಗದಲ್ಲಿ ನಿಯತ್ತಿನಿಂದ ದುಡಿಯುವ ನಿಮಗೆ ದೈವಾಉಗ್ರಹವಿದ್ದು, ತಡವಾಗಿಯಾದರೂ ಪ್ರತಿಫಲ ನಿಶ್ಚಿತ ರೂಪದಲ್ಲಿ ಸಿಗಲಿದೆ, ಕೆಲವೊಮ್ಮೆ ತಾಂತ್ರಿಕ ಕ್ರಿಯೆಗಳಿಂದ ನಿರಾಸಕ್ತಿಯಿಂದ ಉತ್ಸಾಹ ಕುಗ್ಗಲಿದೆ, ಮಕ್ಕಳಿಂದ ಅರ್ಥಿಕ ಸಹಾಯ, ಆಸೆ-ಆಕಾಂಕ್ಷೆಗಳಿಗೆ ಬಲಿಯಾಗುವಿರಿ, ಸಂಗಾತಿಯ ನಡವಳಿಕೆಯಿಂದ ವಾಗ್ವಾದ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular