ಮಂಗಳವಾರ, ಜೂನ್ 17, 2025
Homehoroscopeನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (05-11-2020)

ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (05-11-2020)

- Advertisement -

ಶ್ರೀಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಪಂಚಮಿ ತಿಥಿ, ಆರಿದ್ರಾ ನಕ್ಷತ್ರ, ಸಿದ್ಧ ಯೋಗ , ಕೌಲವ ಕರಣ, ನವೆಂಬರ್ 05 , ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ ಬರುವುದರಿಂದ ಅದರ ಬಗ್ಗೆ ಉಲ್ಲೇಖ ಮಾಡಿಲ್ಲ.

Alvas1

ಆಗಮ ಶಾಸ್ತ್ರದ ಪ್ರಕಾರ ಮನೆ ಎಲ್ಲಿರಬೇಕು, ಹೇಗಿರಬೇಕು, ಮನೆಯ ಮುಂದೆ ನೀಡಬೇಕು ಮನೆ ಹಿಂದೆ ಏನಿರಬೇಕು ಶಿವಾಲಯದ ಮುಂದೆ ಮನೆ ಇರಬಾರದು. ವಿಷ್ಣುವಿನ ದೇವಾಲಯದ ಹಿಂದೆ ಮನೆ ಇರಬಾರದು. ಬಾಲಾಜಿ ದೇವಸ್ಥಾನದ ಹಿಂದೆ ಮನೆ ಇರಬಾರದು ಇದ್ದರೆ ನಿತ್ಯ ದಾರಿದ್ರ ಹಣಕಾಸಿನ ಸಮಸ್ಯೆ ಎದುರಾಗುತ್ತದೆ.

ಬುಧನ ದೋಷ ಇರುವುದರಿಂದ ಸೋದರಿ ಸೋದರ ಸೊಸೆ ಸೋದರಳಿಯನಿಗೆ ದೋಷ ಉಂಟಾಗುತ್ತದೆ. ಚರ್ಮವ್ಯಾಧಿಗೆ ಒಳಗಾಗುತ್ತೀರ, ವಾಕ್ ಶಕ್ತಿಯನ್ನು ಕಳೆದುಕೊಳ್ಳುತ್ತೀರಾ, ವಾಸನ ಶಕ್ತಿಯನ್ನು ಕಳೆದುಕೊಳ್ಳುತ್ತೀರ, ಇನ್ನೂ ಮುಂತಾದ ಮಾಹಿತಿ ಮತ್ತು ಅದಕ್ಕೆ ಪರಿಹಾರವನ್ನು ತಿಳಿಯಲು ಈ ಕೆಳಗಿನ ವೀಡಿಯೋ ನೋಡಿ.

ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

Namami Shankara 1

ಮೇಷರಾಶಿ
ಚೆನ್ನಾಗಿದೆ , ಚಂದ್ರ ರಾಹು ನಕ್ಷತ್ರದಲ್ಲಿದ್ದು ರಾಹು ಕುಜನ ಸಾರದಲ್ಲಿ ಇರುವುದರಿಂದ ಗಡಿಬಿಡಿ ಮಾಡಿಕೊಳ್ಳುತ್ತೀರಾ ಸ್ವಲ್ಪ ನಿಧಾನವಾಗಿ ಓಡಾಡಿ. ಸಣ್ಣ ಪುಟ್ಟ ಗಾಯ ವಾದ ವಿವಾದ ಗಳಿರುತ್ತವೆ. ಓಂ ದುಂ ದುರ್ಗಾಯೈ ನಮಃ ಎಂದು ಜಪ ಮಾಡಿಕೊಳ್ಳಿ ಒಳ್ಳೆಯದಾಗುತ್ತದೆ.

ವೃಷಭರಾಶಿ
ಸಾಮಾನ್ಯವಾಗಿ ಪರಿಶ್ರಮ ದಿಂದ ಲಾಭ ದೊರೆಯುತ್ತದೆ ಮತ್ತೆ ಕೆಲವೊಮ್ಮೆ ಏನೇ ಪರಿಶ್ರಮ ವಿಲ್ಲದಿದ್ದರೂ ಕೂಡ ಪ್ರತಿಫಲ ದೊರೆಯುತ್ತದೆ ಅಂತಹ ದಿನ ಇಂದು. ಆದ್ದರಿಂದ ತುಂಬಾ ಫಾಸ್ಟ್ ಆಗಿ ಹೋಗಬೇಡಿ ಪ್ರತಿಫಲ ದೊರೆಯುತ್ತದೆ ಎಂದು.

ಮಿಥುನರಾಶಿ
ಯೋಗ್ಯತೆಗೆ ತಕ್ಕಂತೆ ಕೆಲಸ ಕೆಲಸಕ್ಕೆ ತಕ್ಕಂತೆ ಪರಿಶ್ರಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.

ಕರ್ಕಾಟಕರಾಶಿ
ಯೋಗ್ಯತೆ ಇದೆ ಯೋಗ್ಯತೆಗೆ ತಕ್ಕಂತಹ ಪ್ರತಿಫಲ ವಿಲ್ಲಾ ಎಂಬ ಭಾವ ಇರುತ್ತದೆ ಆದ್ದರಿಂದ ಶಿವನಿಗೆ ಬಿಲ್ವಪತ್ರೆ ಅರ್ಚನೆ ಮಾಡಿಸಿ. ಬಿಲ್ವಪತ್ರೆಯಿಂದ ಹನ್ನೊಂದು ದಿನಗಳ ಕಾಲ ಬಾಯಿಗೆ ಹಾಕಿಕೊಳ್ಳಿ.

ಸಿಂಹರಾಶಿ
ಅನಗತ್ಯ ವಾದ ವಿವಾದಗಳಿಗೆ ಸಿಲುಕಿ ಹಾಕಿಕೊಳ್ಳುವಂತಹ ಸಂಭವವಿದೆ ಜಾಗ್ರತೆ. ಇಂದು ನೀವು ಸೋತು ಗೆಲ್ಲುವಿರಿ.

ಕನ್ಯಾರಾಶಿ
ಗುರು, ಕುಜ, ಚಂದ್ರ, ಶುಕ್ರ ಕೇಂದ್ರದಲ್ಲಿರುವುದರಿಂದ ದಾಂಪತ್ಯದಲ್ಲಿ ಹುಳಿ ಸಿಹಿ ಕಹಿ ಭೂಮಿ ಹಣ್ಣು ಎಲ್ಲದರ ಪ್ರಭಾವ ನಡೆಯುತ್ತದೆ. ಯೋಚಿಸಬೇಡಿ ಆದರೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ತುಲಾರಾಶಿ
ಚೆನ್ನಾಗಿದೆ ಭಾಗ್ಯಸ್ಥಾನದಲ್ಲಿ ದಶಮಾಧಿಪತಿಯಾದ ಚಂದ್ರನಿರುವುದು ಉತ್ತಮವೇ. ಭಾಗ್ಯವೃದ್ಧಿ ವೃತ್ತಿಯ ಪರವಾಗಿ ಹೆಸರು ಕೀರ್ತಿಯನ್ನು ಪಡೆಯುತ್ತೀರಿ.

ವೃಶ್ಚಿಕರಾಶಿ
ದೂರದಿಂದ ನಿಮಗೊಂದು ಶುಭ ಸುದ್ದಿ, ಎಕ್ಸ್ ಪೋರ್ಟ್, ಇಂಪೋರ್ಟ್, ಚರ್ಮ ,ಮಾಂಸ ,ಮೀನು ಆರ್ಟಿಕಲ್ಚರ್, ಕಲ್ಲು ಗಣಿಗಾರಿಕೆ , ಮೈನಿಂಗ್ ಈ ರೀತಿಯ ಕೆಲಸ ಕಾರ್ಯಗಳಲ್ಲಿ ದ್ದರೆ ಪರಿಶ್ರಮದಿಂದ ಲಾಭ ದೊರೆಯುತ್ತದೆ.

ಧನಸ್ಸುರಾಶಿ
ಕೊಡುವುದು ತೆಗೆದುಕೊಳ್ಳುವ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ನಿಮಗೆ ಯಾರಾದರೂ ಟೋಪಿ ಹಾಕುತ್ತಾರೆ ಇಲ್ಲವೇ ನೀವೇ ಬೇರೆಯವರಿಗೆ ಹಾಕುತ್ತೀರ ಎಚ್ಚರಿಕೆ, ದುಡುಕಬೇಡಿ.

ಮಕರರಾಶಿ
ಆರೋಗ್ಯದ ಕಡೆ ಗಮನಕೊಡಿ ಗೂರು ನೀಚನಾಗಿ ನಿಮ್ಮ ಮನೆಗೆ ಬರುವುದರಿಂದ ಅಟ್ಟ ಸಂಪಾದನೆ ಕಡೆ ಗಮನ ಹರಿಸಬೇಡಿ ಎಚ್ಚರಿಕೆಯಿಂದ ಇರಿ.

ಕುಂಭರಾಶಿ
ಯೋಗ್ಯತೆಗೆ ತಕ್ಕಂತ ಹೆಸರು, ಹೆಸರಿಗೆ ತಕ್ಕಂಥ ಗೌರವ ದೊರೆಯುತ್ತದೆ. ನೀವು ಹೆಸರು ಅಧಿಕಾರ ಕೀರ್ತಿ ದುಡ್ಡಿನ ಹಿಂದೆ ಹೋಗಬಾರದು. ನಿಮ್ಮ ಪಾಡಿಗೆ ನೀವು ನಿಮ್ಮ ಕರ್ತವ್ಯವನ್ನು ಮಾಡಿ ಅದೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಮೀನರಾಶಿ
ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ತಾಯಿಯ ಜೊತೆ ವಾದ ವಿವಾದಕ್ಕಿಳಿಯಬೇಡಿ. ಸಣ್ಣಪುಟ್ಟ ಪೆಟ್ಟಾಗುವ ಸಂಭವವಿದೆ. ಹೃದಯ ಸಂಬಂಧಿತ ಖಾಯಿಲೆಗಳಿದ್ದರೆ ಉಲ್ಬಣಿಸುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ಉಗುರು ಬೆಚ್ಚಗಿನ ತುಪ್ಪವನ್ನು ಸೇವಿಸಿ. ಹೃದಯ ಖಾಯಿಲೆಗೆ ಇದು ಅತ್ಯುತ್ತಮವಾದ ರಾಮಬಾಣ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular